ಹೇಳು, ನಾನು ಮಾಡಿದ ತಪ್ಪಾದ್ರೂ ಏನು?


Team Udayavani, Dec 11, 2018, 11:55 AM IST

helu-nanu.jpg

ಪ್ರತಿ ಸಲ ಮುನಿಸಿಕೊಂಡಾಗಲೂ ನಾನೇ ಕ್ಷಮೆ ಕೇಳಿದ್ದೀನಿ, ನಿನ್ನ ಎಲ್ಲ ಸಮಸ್ಯೆಗಳೂ ನಂದೇ ಅಂದುಕೊಂಡು ಪರಿಹಾರ ಮಾಡಿದೀನಿ, ನಿನಗೆ ಬರೀ ಒಳ್ಳೆಯದೇ ಆಗಲಿ ಅಂತ ಬಯಸಿದ್ದೀನಿ… ಆದ್ರೂ ನೀನು ನನ್ನಿಂದ ದೂರಾಗೋಕೆ ನೋಡ್ತಿದ್ದೀಯ!

ಕೆಲವೊಂದ್ಸಲ ಯಾಕ್‌ ಬೇಕು ಇದೆಲ್ಲಾ ನಂಗೆ ಅನ್ನಿಸುತ್ತೆ. ನಾನ್ಯಾಕ್‌ ನಿನ್ನನ್ನ ಅಷ್ಟೊಂದು ಹಚ್ಕೊಂಡಿದೀನಿ? ನಿದ್ದೆ ಬರೋಲ್ಲ, ಊಟ ಸೇರೋದಿಲ್ಲ, ತಲೆ ತುಂಬಾ ನಿನ್ನದೇ ಯೋಚನೆ. ಇತ್ತೀಚೆಗೆ ನೀನು ಮಾತಾಡೋ ರೀತಿ ನೋಡಿ, ನಂಗೆ ಏನು ಮಾಡೋಕೂ ತೋಚುತ್ತಿಲ್ಲ. ನಿನ್ನ ಮನಸ್ಸಿನಲ್ಲೇನು ನಡೀತಿದೆ ಅಂತ ಹೇಳಿದ್ರೆ ತಾನೇ ನಂಗರ್ಥ ಆಗೋದು. ಹೇಳದೇನೇ ಎಲ್ಲ ಅರ್ಥ ಮಾಡಿಕೊಳ್ಳೋಕೆ ದೇವರಲ್ಲ ನಾನು.

ಆದರೂ ನಿನ್ನ ಮನಸ್ಸನ್ನು ತಿಳಿದುಕೊಳ್ಳೋಜೆ ಪ್ರಯತ್ನಪಟ್ಟೆ. ಸಾಧ್ಯ ಆಗ್ಲಿಲ್ಲ. ಯಾಕಂದ್ರೆ, ನಾನು ಏನೇ ಕೇಳಿದ್ರೂ ನಿನ್ನ ಉತ್ತರ ಒಂದೇ; “ನಂಗೊತ್ತಿಲ್ಲ, ನನ್ನನ್ನ ಏನೂ ಕೇಳ್ಬೇಡ!’ ಜಗತ್ತಲ್ಲಿ ಏನೇ ಆದ್ರೂ, ನೀನು ಚೆನ್ನಾಗಿರಬೇಕು ಅಂತ ಕನಸು ಕಂಡಿದ್ದೆ. ಆ ಒಂದು ಕನಸೂ ಕನಸಾಗೇ ಉಳಿಯೋ ಹಾಗಿದೆ. “ನೀನು ನಂಗೆ ಮೆಸೇಜ್‌ ಮಾಡಲ್ಲ, ಫೋನಲ್ಲಿ ಸರಿಯಾಗಿ ಮಾತಾಡಲ್ಲ, ನಿಂಗೆ ನನ್ನ ಮೇಲೆ ಪ್ರೀತೀನೇ ಇಲ್ಲ’ ಅಂತೆಲ್ಲಾ ನೀನು ಆಗಾಗ ನಂಗೆ ಬೈತಿದ್ದೆ ಅಲ್ವಾ?

ದಯವಿಟ್ಟು, ಈ ಮಾತನ್ನೆಲ್ಲ ವಾಪಸ್‌ ತಗೋ. ಯಾಕಂದ್ರೆ, ನಂಗೆ ನಂದಲ್ಲದ ತಪ್ಪನ್ನ ನನ್ನ ಮೇಲೆ ತಗೊಳ್ಳೋಕೆ ಇಷ್ಟ ಇಲ್ಲ. ಒಂದೇ ಒಂದು ದಿನನಾದ್ರೂ ನಾನು ಹಾಗೆ ಮಾಡಿದ್ನಾ ಹೇಳು? ಪ್ರತಿ ಸಲ ಮುನಿಸಿಕೊಂಡಾಗಲೂ ನಾನೇ ಕ್ಷಮೆ ಕೇಳಿದ್ದೀನಿ, ನಿನ್ನ ಎಲ್ಲ ಸಮಸ್ಯೆಗಳೂ ನಂದೇ ಅಂದುಕೊಂಡು ಪರಿಹಾರ ಮಾಡಿದೀನಿ, ನಿನಗೆ ಬರೀ ಒಳ್ಳೆಯದೇ ಆಗಲಿ ಅಂತ ಬಯಸಿದ್ದೀನಿ… ಆದ್ರೂ ನೀನು ನನ್ನಿಂದ ದೂರಾಗೋಕೆ ನೋಡ್ತಿದ್ದೀಯ!

ಕೊನೇ ಸಲ ನಿನ್ನನ್ನು ಹತ್ತಿರದಿಂದ ನೋಡ್ಬೇಕು ಅಂತ ತುಂಬಾ ತುಂಬಾ ಆಸೆ ಆಗ್ತಿದೆ. ಅದನ್ನಾದ್ರೂ ಈಡೆರಿಸ್ತೀಯ. ನೆನಪೆಂಬ ಬಾಣಗಳು ಚುಚ್ಚಿ ಚುಚ್ಚಿ ಎದೆಗೂಡಲ್ಲಿ ದೊಡ್ಡ ಗಾಯ ಆಗಿದೆ. ಗಾಯ ವಾಸಿ ಮಾಡೋಕೆ ನಿನ್ನಿಂದ ಮಾತ್ರ ಸಾಧ್ಯ. ಕೊನೆಯ ಬಾರಿ ಕೇಳ್ತಾ ಇದ್ದೀನಿ, “ನಾ ಮಾಡಿದ ತಪ್ಪಾದ್ರು ಏನು?’

ಇಂತಿ ನೀನೇ ದೂರ ಮಾಡಿದ ಪ್ರೇಮಿ
ಹರ್ಷ ಮ್ಯಾಗೇರಿ, ಬ್ಯಾಡಗಿ

ಟಾಪ್ ನ್ಯೂಸ್

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.