ಮಂಗಳೂರಿನಲ್ಲಿ ಟೀಂ ಮೋದಿ ಸಂಘಟನೆಗೆ ಚಾಲನೆ
Team Udayavani, Dec 17, 2018, 10:39 AM IST
ಮಂಗಳೂರು: ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶದೊಂದಿಗೆ ಮಂಗಳೂರಿನಲ್ಲಿ “ಟೀಂ ಮೋದಿ ಸಂಘಟನೆ’ ರವಿವಾರ ನಗರದಲ್ಲಿ ಚಾಲನೆ ಪಡೆಯಿತು. ಹಂಪನಕಟ್ಟೆಯಿಂದ ಕೇಂದ್ರ ಮೈದಾನದ ವರೆಗೆ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿತ್ತು.
ಕಾಮನ್ವೆಲ್ತ್ ಚಿನ್ನ ಪುರಸ್ಕೃತ ಕ್ರೀಡಾಪಟು ಪ್ರದೀಪ್ ಕುಮಾರ್ ಅವರು, ಟೀಮ್ ಮೋದಿ ಜಿಲ್ಲಾ ಸಂಪರ್ಕ ಪ್ರಮುಖ್ ಭಾಸ್ಕರ್ ಮಂಗಳೂರು ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.
ಟೀಂ ಮೋದಿ ವಕ್ತಾರ ಅರುಣ್ ಶೇಟ್ ಮಾತನಾಡಿ, 2014ರ ಹಿಂದೆ ಮಾಧ್ಯಮಗಳಲ್ಲಿ ಸಾಲು ಸಾಲು ಹಗರಣಗಳ ಸರಮಾಲೆಯೇ ಕಣ್ಣ ಮುಂದೆ ಬರುತ್ತಿತ್ತು. ಆದರೆ ಇಂದು ಭಾರತ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದೆ ಎಂದರು.
ಕೇಂದ್ರ ಸರಕಾರದ ಮುದ್ರಾ ಯೋಜನೆ ಫಲಾನುಭವಿ ಸುಮಾ ಕೋಡಿಕಲ್ ಮಾತನಾಡಿ, ಮೋದಿ ಯವರು ಮತ್ತೂಮ್ಮೆ ಪ್ರಧಾನಿಯಾಗಿ ಮತ್ತಷ್ಟು ಜನರ ಜೀವನ ಹಸನಾಗ ಬೇಕು. ಇದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಮುದ್ರಾ ಯೋಜನೆಯಿಂದಾಗಿ ಜಿಮ್ ಆರಂಭಿಸಿರುವ ಪ್ರದೀಪ್ ಕುಮಾರ್ ಮಾತನಾಡಿ, ವಿಶ್ವ ಮಟ್ಟದಲ್ಲಿ
ಭಾರತದ ವರ್ಚಸ್ಸನ್ನು ಮೋದಿ ವೃದ್ಧಿಸಿದ ರೀತಿ ಶ್ಲಾಘನೀಯ ಎಂದರು. ಸಮಿತ್, ಸುಶಾಂತ್, ಅಶೋಕ್, ದಯಾ ಆಕಾಶ್, ಚೈತ್ರಾ, ಭವ್ಯಾ, ಜಾಥಾದ ಮುಂದಾಳತ್ವ ವಹಿಸಿ ಕೊಂಡಿದ್ದರು. ಶ್ರೀಪತಿ ಸ್ವಾಗತಿಸಿದರು. ಮೋದಿ ಸಾಧನೆಗಳ ಪ್ರಚಾರ ಸಂಬಂಧ ನಗರದ ಮೀನು ಮಾರುಕಟ್ಟೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮೀನುಗಾರ ಮಹಿಳೆಯರು ಚಾಲನೆ ನೀಡಿದರು. ಮೋದಿ ಬಾಲ್ಯ ದಲ್ಲಿ ಚಹಾ ಮಾರುತ್ತಿದ್ದುದನ್ನು ನೆನಪಿಸುವ ಅಂಗವಾಗಿ ಚಹಾ ವಿತರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal Revanna ವಿರುದ್ಧ ಸಾಕ್ಷ್ಯ ಸಂಗ್ರಹ ಚುರುಕುಗೊಳಿಸಿದ ಎಸ್ಐಟಿ
Chabahar ಮಧ್ಯ ಏಷ್ಯಾಕ್ಕೆ ಭಾರತದ ಹೆಬ್ಟಾಗಿಲು
Udupi ಗಾಳಿ ಮಳೆ ಮನ್ಸೂಚನೆ ಜಿಲ್ಲೆಯಲ್ಲಿ ವಾಟರ್ ಸ್ಪೋರ್ಟ್ಸ್ ತಾತ್ಕಾಲಿಕ ನಿರ್ಬಂಧ
Pudu ಗ್ರಾಮದ ಪುರಾತನ ಫರಂಗಿ ಕೆರೆ; ನರೇಗಾದಲ್ಲಿ ಪ್ರಯತ್ನಿಸಿದರೂ ಕೈಗೂಡದ ಅಭಿವೃದ್ಧಿ ಕಾರ್ಯ
RTO: ಇನ್ನು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ಗಾಗಿ ಆರ್ಟಿಒ ಕಚೇರಿಗೆ ಹೋಗ್ಬೇಕಿಲ್ಲ!