ಜಾರ್ಖಂಡ್ : ಆನೆಗಳ ದಾಳಿಗೆ ಗ್ರಾಮಸ್ಥ ಬಲಿ; ಅಪಾರ ಕೃಷಿ ನಾಶ
Team Udayavani, Dec 18, 2018, 3:18 PM IST
ಪಾಕುರ್, ಜಾರ್ಖಂಡ್ : ಪಾಕುರ್ ಜಿಲ್ಲೆಯ ಖಾಸ್ಕಾ ಗ್ರಾಮಕ್ಕೆ ನುಗ್ಗಿ ಬಂದ ಆನೆಗಳ ಹಿಂಡೊಂದು 30 ವರ್ಷ ಪ್ರಾಯದ ವ್ಯಕ್ತಿಯೊಬ್ಬನನ್ನು ತುಳಿದು ಸಾಯಿಸಿರುವ ದಾರುಣ ಘಟನೆ ವರದಿಯಾಗಿದೆ.
ಸುಮಾರು 30 ಆನೆಗಳಿದ್ದ ಈ ಹಿಂಡು ಮೊನ್ನೆ ಭಾನುವಾರ ರಾತ್ರಿ ಡುಮ್ಕಾ ಜಿಲ್ಲೆಯ ಪಾಕೂರಿಯ ಬ್ಲಾಕ್ ಗೆ ನುಗ್ಗಿ ವ್ಯಾಪಕ ಕೃಷಿ ನಾಶ ಗೈದಿತು.
ನಸುಕಿನ ವೇಳೆ ಆನೆಗಳ ಹಿಂಡಿನ ಸದ್ದಿಗೆ ಭಯಭೀತರಾಗಿ ಎದ್ದ ಗ್ರಾಮಸ್ಥರು ತಮ್ಮ ಮನೆಗಳಿಂದ ಹೊರಗೋಡಿದರು. ಆಗ ಇಮ್ಯಾನುವೆಲ್ ಹೆಂಬ್ರಾಮ್ ಎಂಬ ಗ್ರಾಮಸ್ಥ ಆನೆಗಳ ದಾಳಿಗೆ ಸಿಲುಕಿ ಮೃತಪಟ್ಟ ಎಂದು ಉಪ ವಿಭಾಗೀಯ ಅಧಿಕಾರಿ ಜೀತೆಂದ್ರ ಕುಮಾರ್ ದೇವ್ ತಿಳಿಸಿದರು. ಮೃತನ ಕುಟುಂಬಕ್ಕೆ ಅರಣ್ಯಾಧಿಕಾರಿಗಳು ನಾಲ್ಕು ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್ಗೂ ಹಾನಿ
ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್ ವಿದ್ಯಾರ್ಥಿಗಳು ದುರ್ಮರಣ
Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು
ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ
Sandalwood: ರಿಷಿ ಖುಷಿ!: ಅಕೌಂಟ್ಗೆ ಮತ್ತೊಂದು ಚಿತ್ರ ತ್ತೊ