ಆರ್ಥಿಕ ಸ್ವಾಯತ್ತೆ ಕೊಟ್ಟರೆ ವಿಶೇಷ ಸ್ಥಾನಮಾನ ಬೇಡ: ಸಿಎಂ ಪಟ್ನಾಯಕ್
Team Udayavani, Dec 26, 2018, 5:04 PM IST
ಭುವನೇಶ್ವರ : ಒಡಿಶಾ ರಾಜ್ಯಕ್ಕೆ ಆರ್ಥಿಕ ಸ್ವಾಯತ್ತೆ ಬೇಕೆಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆಗ್ರಹಿಸಿದ್ದಾರೆ.
ಆರ್ಥಿಕ ಸ್ವಾಯತ್ತೆ ಸಿಕ್ಕಿದರೆ ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ ಬೇಕಾಗಿರುವುದಿಲ್ಲ, ಮಾತ್ರವಲ್ಲ ಕೇಂದ್ರದ ಯಾವುದೇ ಅನುದಾನವೂ ಬೇಕಾಗಿರುವುದಿಲ್ಲ ಎಂದವರು ಹೇಳಿದ್ದಾರೆ.
ಆರ್ಥಿಕ ಸ್ವಾಯತ್ತೆಯಿಂದ ರಾಜ್ಯ ಅಭಿವೃದ್ಧಿ ಸುಲಭವಾಗುತ್ತದೆ. ತನ್ನದೇ ಹಣಕಾಸು ಬಲದ ಮೇಲೆ ಸಮೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ. ಈ ಹಿಂದೆ 1990 ದಶಕದಲ್ಲೇ ಒಡಿಶಾ ದ ಹಿರಿಯ ನಾಯಕ ಬಿಜು ಪಟ್ನಾಯಕ್ ಅವರು ಈ ಬಗೆಯ ಆರ್ಥಿಕ ಸ್ವಾಯತ್ತೆಗೆ ಮನವಿ ಮಾಡಿದ್ದರು ಎಂದು ನವೀನ್ ಪಟ್ನಾಯಕ್ ಹೇಳಿದರು.
ಅವರು ಬಿಜು ಜನತಾ ದಳ (ಬಿಜೆಡಿ) ಪಕ್ಷದ 21ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಇಂದಿಲ್ಲಿ ಮಾತನಾಡುತ್ತಿದ್ದರು. ಆದರೆ ತಾವು ಬಯಸುವ ಆರ್ಥಿಕ ಸ್ವಾಯತ್ತೆ ಸ್ವರೂಪ, ಗುಣ ಲಕ್ಷಣ ಇತ್ಯಾದಿಗಳ ವಿವರವನ್ನು ನವೀನ್ ಪಟ್ನಾಯಕ್ ನೀಡಲಿಲ್ಲ.
ಒಡಿಶಾ 14ನೇ ಹಣಕಾಸು ಆಯೋಗದಿಂದ 4.59 ಲಕ್ಷ ಕೋಟಿ ರೂ. ಕೇಳಿತ್ತು. ಆದರೆ ಅದು ಕೇವಲ 1.84 ಲಕ್ಷ ಕೋಟಿ ಕೊಟ್ಟಿತು. 2015-20ರ ಸಾಲಿನ ಕೇಂದ್ರ ತೆರಿಗೆಗಳು ಮತ್ತು ಸುಂಕದಲ್ಲಿನ ರಾಜ್ಯದ ಪಾಲು ಇದಾಗಿತ್ತು.
ಕೇಂದ್ರ ಸರಕಾರ ಎಲ್ಲ ರಂಗಗಳಲ್ಲೂ ಒಡಿಶಾ ವನ್ನು ನಿರ್ಲಕ್ಷಿಸುತ್ತಿದೆ ಎಂದು ನವೀನ್ ಪಟ್ನಾಯಕ್ ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ
ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ
Uber ಬಸ್ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!
Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ ರಜೆ
MUST WATCH
ಹೊಸ ಸೇರ್ಪಡೆ
Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು
Bidar; ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ರಾಜ ಮರ್ಯಾದೆ ಸಿಗುತ್ತಿದೆ: ಬೊಮ್ಮಾಯಿ
Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!
Swindon Borough ಕೌನ್ಸಿಲ್ನ ಮೇಯರ್ ಆಗಿ ಭಾರತೀಯ ಮೂಲದ ಇಮ್ತಿಯಾಜ್ ಶೇಖ್ ಆಯ್ಕೆ
W.Bengal; ಬಿಜೆಪಿ ಅಭ್ಯರ್ಥಿಗೆ 24 ಗಂಟೆ ಕಾಲ ಪ್ರಚಾರ ಮಾಡದಂತೆ ತಡೆ ನೀಡಿದ ಚುಣಾವಣಾ ಆಯೋಗ