ಚುಮು ಚುಮು ಚಳಿಗೆ ಬಿಸ್ಸಿ ಬಿಸಿ ಸಾರು


Team Udayavani, Jan 2, 2019, 12:30 AM IST

x-6.jpg

ಬಿಸಿ ಬಿಸಿ ಪದಾರ್ಥಗಳನ್ನು ತಿನ್ನಬೇಕು ನಿಸುತ್ತದೆ. ಊಟದ ಸಮಯದಲ್ಲಂತೂ ಸಾರು ಬಿಸಿಯಾಗಿರಬೇಕು, ದಿನಕ್ಕೊಂದು ವರೈಟಿ ಇರಬೇಕು ಅನಿಸಿಬಿಡುತ್ತದೆ. ಚಳಿಗಾಲದಲ್ಲಿ  ದೇಹದ ಉಷ್ಣಾಂಶ ಕಾಪಾಡುವ ಹಾಗೂ ಶೀತಭಾದೆಗಳಿಂದ ದೇಹವನ್ನು ರಕ್ಷಿಸುವ, ಮೆಣಸು, ಜೀರಿಗೆ, ಬೆಳ್ಳುಳ್ಳಿಯಿಂದ ಮಾಡಬಹುದಾದ ಕೆಲವು ಸಾರುಗಳ ರೆಸಿಪಿ ಇಲ್ಲಿದೆ.      

1.    ಜೀರಿಗೆ ಮೆಣಸಿನ ಸಾರು    
ಬೇಕಾಗುವ ಸಾಮಗ್ರಿ: ತೊಗರಿ ಬೇಳೆ- 1/4 ಕಪ್‌, ಟೊಮೇಟೊ- 2, ಲಿಂಬು- 1, ಕೊತ್ತಂಬರಿಸೊಪ್ಪು-ಸ್ವಲ್ಪ, ಕರಿಬೇವು-10 ಎಸಳು,  ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು, ಜೀರಿಗೆ ಮೆಣಸು- 1ಚಮಚ, ಜೀರಿಗೆ- 1 ಚಮಚ, ತುಪ್ಪ-1ಚಮಚ, ಸಾಸಿವೆ- 1 ಚಮಚ, ಅರಿಶಿಣ, ಇಂಗು.

ಮಾಡುವ ವಿಧಾನ: ತೊಗರಿ ಬೇಳೆಯನ್ನು ತೊಳೆದು, ಅದರ ಜೊತೆ ಕತ್ತರಿಸಿದ ಟೊಮೆಟೊ ಹಾಕಿ ಕುಕ್ಕರಿನಲ್ಲಿ ಬೇಯಿಸಿ. ಇನ್ನೊಂದು ಪಾತ್ರೆಯಲ್ಲಿ ಮೆಣಸು ಮತ್ತು ಜೀರಿಗೆಯನ್ನು ಎಣ್ಣೆ ಹಾಕದೆ ಹಾಗೇ ಕೆಂಪಗೆ ಹುರಿದು, ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಿ. ಈಗ ಕುಕ್ಕರಿನಲ್ಲಿ ಬೆಂದ ಬೇಳೆ ಮತ್ತು ಟೊಮೇಟೊವನ್ನು  ಸೌಟಿನಿಂದ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ, ಚೆನ್ನಾಗಿ ಕುದಿಸಿ. ಸಾರು ಕುದಿಯುವಾಗ ಜೀರಿಗೆ-ಮೆಣಸಿನ ಪುಡಿ ಹಾಕಿ. ಕೊತ್ತಂಬರಿ ಮತ್ತು ಕರಿಬೇವಿನ ಸೊಪ್ಪು ಹಾಕಿ, ಸ್ವಲ್ಪ ಕುದಿಸಿ. ತುಪ್ಪ, ಇಂಗು, ಸಾಸಿವೆ, ಅರಿಶಿಣ ಹಾಕಿ ಒಗ್ಗರಣೆ ಕೊಡಿ. ಕೊನೆಯಲ್ಲಿ  ಲಿಂಬೆ ರಸ ಹಾಕಿ.

2.    ಹುರುಳಿ ಕಾಳು ಸಾರು
ಬೇಕಾಗುವ ಸಾಮಗ್ರಿ:
ಹುರುಳಿ ಕಾಳು- 1 ಕಪ್‌, ಜೀರಿಗೆ- 1/2 ಚಮಚ, ಸಾಸಿವೆ- 1/2 ಚಮಚ, ಅರಿಶಿಣ-ಸ್ವಲ್ಪ, ಬೆಳ್ಳುಳ್ಳಿ-6, ಕರಿಬೇವು-10 ಎಸಳು, ಕೊತ್ತಂಬರಿ ಸೊಪ್ಪು-ಸ್ವಲ್ಪ, ಹುಣಸೆ ರಸ- ರುಚಿಗೆ ತಕ್ಕಷ್ಟು, ಅಚ್ಚ ಖಾರದ ಪುಡಿ- ರುಚಿಗೆ ತಕ್ಕಷ್ಟು, ಸಾರಿನ ಪುಡಿ- 1 ಚಮಚ,  ಎಣ್ಣೆ,  ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ.

ಮಾಡುವ ವಿಧಾನ: ಹುರುಳಿ ಕಾಳನ್ನು ಕುಕ್ಕರ್‌ನಲ್ಲಿ ಬೇಯಲು ಇಡಿ. ಕಾಳು ಬೇಯಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುವುದದರಿಂದ, 5 -6 ಸೀಟಿ ಕೂಗಿಸಿ. ಇನ್ನೊಂದು ಪಾತ್ರೆಗೆ ಎಣ್ಣೆ ಹಾಕಿ, ಸ್ವಲ್ಪ ಬಿಸಿಯಾದ ಮೇಲೆ ಸಾಸಿವೆ, ಜೀರಿಗೆ ಹಾಕಿ. ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ, ಫ್ರೈ ಮಾಡಿ. ನಂತರ, ಕರಿಬೇವು, ಅಚ್ಚ ಖಾರದ ಪುಡಿ ಮತ್ತು ಸಾರಿನ ಪುಡಿ ಹಾಕಿ. ಆ ಮಿಶ್ರಣಕ್ಕೆ ಮೊದಲೇ ಬೇಯಿಸಿದ ಹುರುಳಿ ಕಾಳಿನ ನೀರನ್ನು ಮಾತ್ರ ಹಾಕಿ. (ಹುರುಳಿ ಕಾಳು ಮತ್ತು ನೀರನ್ನು ಬೇರೆ ಮಾಡಿ) ಹುರುಳಿ ಕಾಳಿನ ಗಟ್ಟಿ ಸಾರು ಬೇಕಿದ್ದರೆ, ಬೆಂದ ಹುರುಳಿ ಕಾಳನ್ನು ಮಿಕ್ಸಿಯಲ್ಲಿ ರುಬ್ಬಿ ಹಾಕಬಹುದು. ನಂತರ, ಹುಣಸೆ ರಸ, ಉಪ್ಪು, ಬೆಲ್ಲ ಎಲ್ಲ ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಒಂದೆರಡು ನಿಮಿಷ ಕುದಿಸಿದರೆ ಹುರುಳಿ ಕಾಳಿನ ಸಾರು ರೆಡಿ.

3.    ಹುಣಸೆ ಸಾರು
ಬೇಕಾಗುವ ಸಾಮಗ್ರಿ:
ಲಿಂಬೆ ಗಾತ್ರದ ಹುಣಸೆ ಹಣ್ಣು, ಸಮ ಪ್ರಮಾಣದ ಬೆಲ್ಲ, ಅಚ್ಚ ಖಾರದ ಪುಡಿ,  1 ಚಮಚ ತುಪ್ಪ, 1 ಚಮಚ ಜೀರಿಗೆ, 1/2 ಚಮಚ ಸಾಸಿವೆ, 5-6 ಎಸಳು ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ಚಿಟಿಕೆ ಇಂಗು, ಎಣ್ಣೆ. 

ಮಾಡುವ ವಿಧಾನ:
ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ರಸ ತೆಗೆಯಿರಿ. ಒಂದು ಪಾತ್ರೆಗೆ ಎಣ್ಣೆ ಹಾಕಿ, ಅದಕ್ಕೆ ಸಾಸಿವೆ, ಜೀರಿಗೆ, ಇಂಗನ್ನು ಹಾಕಿ, ಮೀಡಿಯಂ ಉರಿಯಲ್ಲಿ ಫ್ರೈ ಮಾಡಿ. ನಂತರ ಅಚ್ಚ ಖಾರದ ಪುಡಿ, ಅರ್ಧ ಕಪ್‌ ನೀರು ಹಾಕಿ ಕುದಿಯಲು ಇಡಿ. ಕುದಿಯಲು ಶುರುವಾದಾಗ ಹುಣಸೆ ರಸ ಹಾಗೂ ಬೆಲ್ಲ ಹಾಕಿ.ನಂತರ ಕೊತ್ತಂಬರಿ ಸೊಪ್ಪು ಹಾಕಿ, ಎರಡು ನಿಮಿಷ ಕುದಿಸಿ. ಈ ಹುಣಸೆ ಸಾರನ್ನು ಸೂಪ್‌ನಂತೆಯೂ ಸವಿಯಬಹುದು.

4.    ತೊಗರಿ ಬೇಳೆ ಸಾರು    
ಬೇಕಾಗುವ ಸಾಮಗ್ರಿ:
ತೊಗರಿ ಬೇಳೆ- 1/2 ಕಪ್‌, ಟೊಮೇಟೊ-2, ಎಣ್ಣೆ -1 ಚಮಚ, ಅರಿಶಿಣ- ಚಿಟಿಕೆ, ಸಾರಿನ ಪುಡಿ- 1 ಚಮಚ, ಉಪ್ಪು, ಬೆಲ್ಲ-ರುಚಿಗೆ ತಕ್ಕಷ್ಟು, ಹುಣಸೆ ರಸ -2 ಚಮಚ, ಕರಿಬೇವು-6 ಎಸಳು, ಕೊತ್ತಂಬರಿಸೊಪ್ಪು-ಸ್ವಲ್ಪ, ಲಿಂಬೆ ಹಣ್ಣು- ½, ತುಪ್ಪ- 1 ಚಮಚ, ಜೀರಿಗೆ- 1/2 ಚಮಚ, ಸಾಸಿವೆ- 1/2ಚಮಚ, ಇಂಗು- ಚಿಟಿಕೆ.

ಮಾಡುವ ವಿಧಾನ: ಮೊದಲು ತೊಗರಿ ಬೇಳೆ ಮತ್ತು ಟೊಮೇಟೊವನ್ನು ಬೇಯಿಸಿ. ಬೆಂದ ನಂತರ, ಟೊಮೇಟೊವನ್ನು, ಬೇಳೆ ಜೊತೆಗೆ ಸೇರಿಸಿ ಚೆನ್ನಾಗಿ ಕಿವುಚಿ, ಮಿಶ್ರಣ ಮಾಡಿ. ಈಗ ಅದನ್ನು ಮೀಡಿಯಂ ಉರಿಯಲ್ಲಿ ಸ್ಟೌ ಮೇಲೆ ಇಡಿ. ನಂತರ ಹುಣಸೆ ರಸ, ಬೆಲ್ಲ, ಉಪ್ಪು, ಕರಿಬೇವು, ಸಾರಿನ ಪುಡಿ ಹಾಕಿ, ಸ್ವಲ್ಪ ನೀರು ಹಾಕಿ ಕುದಿಸಿ. ಕುದ್ದ ನಂತರ ಕೊತ್ತಂಬರಿ ಸೊಪ್ಪು ಹಾಕಿ, ಒಲೆಯಿಂದ  ಇಳಿಸಿ. ಸಾರಿನ ರುಚಿ ಹೆಚ್ಚಿಸಲು ಲಿಂಬೆ ರಸ ಸೇರಿಸಿ. ಇಂಗಿನ ಸಾಸಿವೆ ಕೊಡಿ. 

-ಪ್ರೇಮಾ ಲಿಂಗದಕೋಣ

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.