ತಲೆ ಕೆಳಗು ಮಾಡುತ್ತೆ ನೋಟು


Team Udayavani, Jan 3, 2019, 12:30 AM IST

x-31.jpg

ಜಾದೂ ಜಗತ್ತಿನಲ್ಲಿ ತಂತ್ರಗಳನ್ನು ಪ್ರದರ್ಶಿಸಲು ವಿವಿಧ ಪ್ರಕಾರಗಳಿವೆ. ಕೈ ಚಳಕ, ಮೈಂಡ್‌ ರೀಡಿಂಗ್‌, ಸಮ್ಮೊಹಿನಿ, ಇಲ್ಯೂಶನ್‌, ಇತ್ಯಾದಿ… ನಾನು ನಿಮಗೆ ಇಲ್ಲಿ ಕಲಿಸುತ್ತಿರುವ ಎಲ್ಲಾ ತಂತ್ರಗಳು ಪ್ರಾರಂಭಿಕ ಹಂತದ್ದು ಮತ್ತು ಯಾವುದೇ ಅಪಾಯವಿಲ್ಲದೆ, ಯಾರ ನೆರವಿಲ್ಲದೆ, ಸರಳವಾಗಿ ನೀವೇ ಮಾಡಬಹುದಾದಂಥ ತಂತ್ರಗಳು. ಬಹಳ ಸುಲಭ ಅನ್ನಿಸಿದರೂ ನಿಮ್ಮ ಪ್ರಾರಂಭಿಕ ಕೈ ಚಳಕದ ಅಭ್ಯಾಸಕ್ಕಾಗಿ ಇಂತಹ ಟ್ರಿಕಳನ್ನು ಕಲಿಯೋದು ಅವಶ್ಯ. ಹಾಗಾಗಿ ನಿಮಗೆ ಈ ಬಾರಿ ನಾನು ನೋಟಿನಲ್ಲಿರೋ ಗಾ0ಧೀ ತಾತನನ್ನಾ ಉಲ್ಟಾ ಮಾಡೋದು ಹೇಗೆ ಅಂತ ತಿಳಿಸಲಿದ್ದೀನಿ.

ಪ್ರದರ್ಶನ:
ಜಾದೂಗಾರ 100 ರುಪಾಯಿ (ಗಾಂಧೀಜಿ ಚಿತ್ರವಿರುವ ಯಾವುದೇ ನೋಟು ಆಗುತ್ತದೆ) ನೋಟೊಂದನ್ನು ಪ್ರೇಕ್ಷಕರಿಗೆಲ್ಲಾ ತೋರಿಸಿ, ಗಾಂಧಿ ತಾತನ ಚಿತ್ರವನ್ನು ಗಮನಿಸಲು ತಿಳಿಸುತ್ತಾನೆ. ಈಗ ನೋಟನ್ನು ಮಡಚಿ, ಜಾದೂ ಮಂತ್ರವನ್ನು ಉತ್ಛರಿಸುತ್ತಾ ನಿಧಾನವಾಗಿ ನೋಟನ್ನು ಓಪನ್‌ ಮಾಡಿದರೆ, ಸೀದಾ ಇದ್ದ ಗಾಂಧೀ ತಾತ ತಲೆ ಕೆಳಗಾಗಿರುತ್ತದೆ! ಪ್ರೇಕ್ಷಕರಿಗೆ ನೋಟಿನಲ್ಲಿ ಏನೂ ಮೋಸ ಅಡಗಿಲ್ಲ ಎನ್ನುವುದನ್ನು ಖಚಿತ ಪಡಿಸಲು ಜಾದೂಗಾರ ನೋಟನ್ನು ಪ್ರೇಕ್ಷಕನೊಬ್ಬನ ಕೈಗೆ ನೀಡುತ್ತಾನೆ. ಪ್ರೇಕ್ಷಕ ಅದನ್ನು ಮುಟ್ಟಿ ಪರೀಕ್ಷಿಸಿ ವಾಪಸ್‌ ಮಾಡುತ್ತಾನೆ. ಜಾದೂಗಾರ ಮತ್ತೂಮ್ಮೆ ಮ್ಯಾಜಿಕ್ಕನ್ನು ಪುನರಾವರ್ತಿಸುತ್ತಾನೆ. 

ಬೇಕಾಗುವ ವಸ್ತು: 
ಗಾಂಧೀಜಿ ಚಿತ್ರವಿರುವ ಯಾವುದೇ ಕರೆನ್ಸಿ ನೋಟು

ಮಾಡುವ ವಿಧಾನ: 
ಮೊದಲಿಗೆ ಗಾಂಧೀಜಿ ಮುಖ ಮೇಲಿರುವಂತೆ ಹಿಡಿದುಕೊಳ್ಳಿ. ನಂತರ ಅಡ್ಡಡ್ಡವಾಗಿ ಗಾಂಧೀಜಿಯ ಚಿತ್ರ ಕೆಳಮುಖವಾಗುವಂತೆ ಹಾಗೂ ಮಡಚಿದ ಮಡಿಕೆ ನಿಮ್ಮೆಡೆಗೆ ಬರುವಂತೆ ಮಡಚಿ (ಚಿತ್ರಗಳನ್ನು ಗಮನಿಸಿ). ಈಗ ಎರಡನೆಯ ಮಡಿಕೆ ಹಿಂಬಾಗಕ್ಕೆ ತಳ್ಳಿ ಮಡಚಿ. ಅದೇ ಮಡಿಕೆಯನ್ನು ಮತ್ತೂಮ್ಮೆ ನಿಮ್ಮ ಕಡೆಗೆ ಬರುವಂತೆ ಮಡಚಿ. ಈಗ ಜಾದೂ ಮಂತ್ರವನ್ನು ಪಠಿಸುತ್ತಾ ಮುಂದಿನಿಂದಲೇ ಎಲ್ಲಾ ಮಡಚಿದ್ದ ಮಡಿಕೆಯನ್ನು ತೆರೆದು ತೋರಿಸಿದರೆ ಗಾಂಧೀಜಿ ಚಿತ್ರ ತಲೆಕೆಳಗಾಗಿರುತ್ತೆ. ಈ ಮ್ಯಾಜಿಕನ್ನು ಸುಲಭವಾಗಿ ಮಾಡಲು ಕೆಳಗಿನ ವಿಡಿಯೊ ಕೊಂಡಿಗೆ ಭೇಟಿ ನೀಡಿ.

ವಿಡಿಯೊ ಕೊಂಡಿ- goo.gl/dZGg4e

ಗಾಯತ್ರಿ ಯತಿರಾಜ್‌

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.