ಮಳೆಬಿಲ್ಲು
Team Udayavani, Jan 4, 2019, 12:30 AM IST
ಒಂದೆಡೆ ಭುವಿಯಿಂದ ನಭಕ್ಕೆ ಏಣಿಯಿಟ್ಟಂತಿರುವ ದಟ್ಟವಾದ ವೃಕ್ಷಗಳ ಸಾಲು, ಇನ್ನೊಂದೆಡೆ ಇಳಿದರೆ ಇನ್ನಾವುದೋ ಒಂದು ಲೋಕವಿರುವಂತೆ, ದ್ವಿಜರಾಜ ಹಾಗೂ ಆತನ ಬಳಗದವರ ಪ್ರತಿಬಿಂಬಿಸುವ ಜಲರಾಶಿ. ದಿವಸ್ಪತಿಯ ಬೆಳಕನ್ನು ನಮ್ಮೆಡೆಗೆ ಅಭಿಷೇಕ ಮಾಡುವ ಶಶಿಯ ಬೆಳದಿಂಗಳಲ್ಲಿ, ದಾರಿಯುದ್ದಕ್ಕೂ ಮೆತ್ತನೆಯ, ಸೊಂಪಾಗಿ ಬೆಳೆದ ಗರಿಕೆ ಹುಲ್ಲಿನ ರಾಶಿಯ ಮೇಲೆ ಒಂದೊಂದು ಹೆಜ್ಜೆಯ ಇಡಲು, ಕಾಲ್ಗೆಜ್ಜೆಯ ದನಿ ಕೇಳಿ ಕುತೂಹಲದಿಂದ ಹುಲ್ಲಿನ ಮೇಲಿರುವ ಮಳೆಹನಿಗಳು ಬೆಳಕಿನ ಚಿಕ್ಕ ಚಿಕ್ಕ ಚುಕ್ಕಿಯಂತೆ ರೂಪಾಂತರಗೊಂಡು ವಸುಂಧರೆಯಿಂದ ಒಂದರ ಹಿಂದೆ ಒಂದರಂತೆ ಮೇಲೆದ್ದು, ನನ್ನ ಸುತ್ತ ಸುಳಿಯತೊಡಗಿದವು. ಆಗಲೇ ತಣ್ಣನೆಯ ಗಾಳಿ ಬೀಸಿ ರೋಮಾಂಚನಗೊಂಡು, ಮೇಲೆ ನೋಡಲು ಹುಣ್ಣಿಮೆಯ ಚಂದ್ರಮನು ಜ್ಯೇಷ್ಠ ತಾರೆಯ ಬಳಿ ನಿಂತು ಪ್ರೀತಿಯ ನಗೆ ಬೀರಿದ. ಆ ನಗುವಿಗೆ ಮನಸೋತು ಕಲ್ಪನಾಲೋಕಕ್ಕೆ ಜಾರಿ ಆತನ ಪ್ರಪಂಚಕ್ಕೆ ತೆರಳಲು ಬಾನಂಚಲ್ಲಿ ಒಂದು ಮಳೆಬಿಲ್ಲು ಮೂಡಬಾರದೆ ಎಂದೆನಿಸಿತು !
ರಕ್ಷಿತಾ ಎಂ.
ಬಿಇ- 7ನೆಯ ಸೆಮಿಸ್ಟರ್, ಕೆನರಾ ಇಂಜಿನಿಯರಿಂಗ್ ಕಾಲೇಜು, ಬೆಂಜನಪದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ