ಮಂಗಳೂರಲ್ಲೂ ರಾಗಿ,ಜೋಳ,ಅಕ್ಕಿ ರೊಟ್ಟಿ ಸಿಗುತ್ತೆ!


Team Udayavani, Jan 6, 2019, 12:53 PM IST

img-20181204-wa0007-copy-copy.jpg

ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡುವು ಉದ್ದೇಶದಿಂದ  ಶಿಲ್ಪ ಅವರು ತವರೂರು ಹಾಸನದಿಂದಲೇ ಅಕ್ಕಿ, ರಾಗಿ, ಜೋಳದ ಹಿಟ್ಟನ್ನು ತರುತ್ತಾರೆ. ಬುಧವಾರ ಮತ್ತು ಭಾನುವಾರದಂದು ಇಲ್ಲಿ ರಾಗಿ ಮುದ್ದೆ, ಬಸ್ಸಾರು ದೊರೆಯುತ್ತದೆ. 

ಕಡಲತಡಿಯ ಮಂಗಳೂರಂತಹ ನಗರದಲ್ಲಿ ಅಕ್ಕಿ ರೊಟ್ಟಿ ಸಿಗಬಹುದಾ? ಅನುಮಾನ ಬೇಡ.   ಜೋಳ, ರಾಗಿ ರೊಟ್ಟಿ ಸಿಗುತ್ತದೆ. ಆದರೆ, ತಿನ್ನುವುದಕ್ಕೆ ಮಂಗಳೂರಿನ ಗಾಂಧಿನಗರದ ಸಮೀಪದ ಮಣ್ಣಗುಡ್ಡೆಯಲ್ಲಿರುವ  “ಹಳ್ಳಿ ಮನೆ ರೊಟ್ಟಿಸ್‌’ ಎಂಬ ಮೊಬೈಲ್‌ ಕ್ಯಾಂಟೀನ್‌ಗೆ ಬರಬೇಕು.  ಇಲ್ಲಿ ಎಲ್ಲ ರೀತಿಯ ರೊಟ್ಟಿ ದೊರೆಯುತ್ತದೆ. ಹಾಸನ ಮೂಲದ ಶಿಲ್ಪಾ ಈ ಕ್ಯಾಂಟೀನ್‌ ನಡೆಸುತ್ತಿದ್ದು, ಕರಾವಳಿಯ ಜನರಿಗೆ ರೊಟ್ಟಿಯ ರುಚಿಯನ್ನು ತೋರಿಸಿದ್ದಾರೆ. 

ಮಹಿಂದ್ರಾ ಕಂಪನಿಯಿಂದ ಮಹಿಳಾ ಸಾಧಕ ಪ್ರಶಸ್ತಿ, ಕರ್ನಾಟಕ ರಾಜ್ಯ ಪವರ್‌ ವುಮನ್‌ ಪ್ರಶಸ್ತಿ ಹೀಗೆ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವ ಶಿಲ್ಪಾ ಅವರು, ಅಲ್ಪ ಅವಧಿಯಲ್ಲೇ ಯಶಸ್ಸು ಕಂಡವರು. 

ಇವರು ಓದಿರುವುದು ಹತ್ತನೇ ತರಗತಿ.  2005ರಲ್ಲಿ ಟ್ರಾನ್ಸ್‌ಪೊàರ್ಟ್‌ ಉದ್ಯಮಿಯೊಬ್ಬರನ್ನು ಮದುವೆಯಾಗಿ ಮಂಗಳೂರಿಗೆ ಬಂದರು. ಅವರು ದೂರವಾದ ನಂತರ ಎದುರಾಗಿದ್ದು ದೊಡ್ಡ ಶೂನ್ಯ. ಅದನ್ನು ತುಂಬಲು ಶುರು ಮಾಡಿದ್ದು ಹಳ್ಳಿ ಮನೆ ರೊಟ್ಟಿàಸ್‌ ಎಂಬ ಮೊಬೈಲ್‌ ಕ್ಯಾಂಟೀನ್‌. 

ಆರಂಭದಲ್ಲಿ ಈ ಘಟ್ಟದ ಮೇಲಿನ ಈ ರೊಟ್ಟಿಯನ್ನು ಯಾರು ತಿನ್ನುತ್ತಾರೆ ಎಂಬ ಅಳಕು ಸಹ ಇತ್ತು. ಆದರೆ ಇದು ಜಾಸ್ತಿ ದಿವಸ ಇರಲಿಲ್ಲ.  ರುಚಿ ಹೆಚ್ಚಿಸಲು ಯಾವುದೇ ಪೌಡರ್‌ಗಳನ್ನು ಬಳಕೆ ಮಾಡದೇ, ಜನರಿಗೆ ಶುಚಿ ರುಚಿಯಾದ ರೊಟ್ಟಿ ನೀಡಲು ಪ್ರಾರಂಭಿಸಿದರು. ಗ್ರಾಹಕರಿಗೆ ಇದು  ಇಷ್ಟವಾಗಿ ನಿಧಾನವಾಗಿ ಕ್ಯಾಂಟೀನ್‌ನತ್ತ ಹೆಜ್ಜೆ ಹಾಕಿದರು. ಶಿಲ್ಪಾ ಅವರ ಕೆಲಸದಲ್ಲಿ ಸಹೋದರ ಚಿರಂಜೀವಿ, ತಂದೆ ಚಂದ್ರೇಗೌಡ್ರು ನೆರವಾಗುತ್ತಿದ್ದಾರೆ. 

ಹಳ್ಳಿ ಮನೆ ವಿಶೇಷ
ಶಿಲ್ಪಾ ಅವರ ಕ್ಯಾಂಟೀನ್‌ನಲ್ಲಿ ರಾಗಿ, ಜೋಳ, ಅಕ್ಕಿ ರೊಟ್ಟಿಯೇ ವಿಶೇಷ ತಿನಿಸು. ಇದರ ಜೊತೆಗೆ ತಟ್ಟೆ ಇಡ್ಲಿ, ಟೊಮೆಟೊ ಆಮ್ಲೆಟ್‌, ಮೆಂತ್ಯ ಪಲಾವ್‌, ಪಾಲಕ್‌ ಪಲಾವ್‌, ಬಿಸಿಬೇಳೆಬಾತ್‌, ವೆಜ್‌ ಬಿರಿಯಾನಿಯಂಥ ರೈಸ್‌ ಬಾತ್‌ಗಳು ದೊರೆಯುತ್ತವೆ.   ಇದರ ಜೊತೆಗೆ ಹಾಸನ ಕಡೆ ಮಾಡುವ ಚಟ್ನಿ, ಪಲ್ಯ, ಖಾರ ಚಟ್ನಿ ಹಾಗೂ ಸಾಂಬಾರ್‌ಗಳಿಂದ ಇವರ ಕ್ಯಾಂಟೀನ್‌ ರುಚಿ ವಿಭಿನ್ನವಾಗಿದೆ. 

ರಾಗಿ ಮುದ್ದೆ ಊಟ
ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಬೇಕೆಂದು ಇವರ ಮೂಲ ಉದ್ದೇಶ. ಹೀಗಾಗಿ, ತವರೂರು ಹಾಸನದಿಂದಲೇ ಅಕ್ಕಿ, ರಾಗಿ, ಜೋಳದ ಹಿಟ್ಟನ್ನು ತರುತ್ತಾರೆ. ಅಲ್ಲದೆ, ಬುಧವಾರ ಮತ್ತು ಭಾನುವಾರ ರಾಗಿ ಮುದ್ದೆ ಬಸ್ಸಾರು ಕೂಡ ದೊರೆಯುತ್ತದೆ.   ಶುಭ ಸಮಾರಂಭಗಳಿಗೆ ಆರ್ಡ್‌ರ್‌ ಕೊಟ್ಟರೆ ಊಟ ತಿಂಡಿಯನ್ನು ಮಾಡಿಕೊಡುತ್ತಾರೆ. ಇವರ ರೊಟ್ಟಿ ರುಚಿಗೆ ಮನಸೋತವರು ಮತ್ತೆ ಆ ಕಡೆ ಹೋದಾಗ ತಿನ್ನದೇ ಹೋಗುವುದಿಲ್ಲ. ಡಾಕ್ಟರ್‌, ಎಂಬಿಬಿಎಸ್‌ ವಿದ್ಯಾರ್ಥಿಗಳು, ಕೂಲಿ ಕೆಲಸಗಾರು ಎಲ್ಲಾ ವರ್ಗದವರೂ ಹಳ್ಳಿ ಮನೆಯ ರೊಟ್ಟಿಯನ್ನು ಸವಿಯುತ್ತಾರೆ.

ಮಹಿಂದ್ರಾ ಕಂಪನಿ ಸಪೋರ್ಟ್‌
ಶಿಲ್ಪಾ ಅವರ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಡಿದ್ದ ಸುದ್ದಿಯನ್ನು ನೋಡಿದ ಮಹಿಂದ್ರ ಕಂಪೆನಿಯ ಸಿಇಒ ಆನಂದ್‌ ಮಹಿಂದ್ರಾ, ಇವರಿಗೆ ಮತ್ತೂಂದು ಮೊಬೈಲ್‌ ಕ್ಯಾಂಟೀನ್‌ ಆರಂಭಿಸಲು ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ.

ಹೋಟೆಲ್‌ ಸಮಯ: ಸಂಜೆ 4ರಿಂದ ರಾತ್ರಿ 10 ಗಂಟೆವರೆಗೆ

– ಭೋಗೇಶ ಆರ್‌. ಮೇಲುಕುಂಟೆ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.