ಸಂಬಂಧಗಳನ್ನು ಪ್ರೀತಿಸಬೇಕೇ ಹೊರತು ವಸ್ತುಗಳನ್ನಲ್ಲ!


Team Udayavani, Mar 22, 2019, 12:30 AM IST

bike.jpg

ಜೀವನದಲ್ಲಿ ಎಲ್ಲರಿಗೂ ಆಸೆಗಳಿರುತ್ತವೆ, ಕಂಡಿದ್ದೆಲ್ಲ ಬೇಕು ಅನ್ನುವ ಹಾಗೆ. ಆದರೆ, ಅದೆಲ್ಲವನ್ನು ಪಡೆದು ಹೇಗಿರಬೇಕು? ಅದನ್ನು ಉಳಿಸಿಕೊಳ್ಳುವ ಜಾಯಮಾನ ನಮಗಿದೆಯೋ ಎಂದು ನಮ್ಮನ್ನು ನಾವು ಪ್ರಶ್ನಿಸಬೇಕಾಗಿದೆ. ಆಸೆಗಳು ಸಹಜ ಮತ್ತು ಸ್ವಾಭಾವಿಕ. ಕನಸುಗಳೂ ಆಸೆಯೇ. ಹಾಗಂತ ಕನಸುಗಳೆಲ್ಲವೂ ನನಸಾಗಲು ಸಾಧ್ಯವಿಲ್ಲ. ಮರಕ್ಕೆ ಚಿಗುರು ಎಷ್ಟು ಮುಖ್ಯವೋ, ಬತ್ತುತ್ತಿರುವ ಕೆರೆಗೆ ನೀರಿನ ಒರತೆಯೂ ಅಷ್ಟೇ ಮುಖ್ಯ. ಹಾಗೆಯೇ ನಮ್ಮ ಬದುಕಿಗೂ ಕನಸುಗಳು ಮುಖ್ಯ. ಕನಸು ನನಸಾಗಲು ನಾವು ಭರವಸೆಯಿಂದ, ಜವಾಬ್ದಾರಿಯಿಂದ ಬದುಕುವುದು ಬಹುಮುಖ್ಯವಾಗುತ್ತದೆ. ಮನುಷ್ಯ ಅಂದಮೇಲೆ ಆಸೆಗಳು ಕನಸುಗಳು ಇದ್ದೇ ಇರುತ್ತವೆ. ಅದಿಲ್ಲದಿದ್ದರೆ ಅವನು ಮನುಷ್ಯನಲ್ಲ. ಯಾಕೆಂದರೆ, ಜೀವನ ಇರೋದು ಒಂದೇ.

ಅದನ್ನು ಹಾಳುಮಾಡಿಕೊಳ್ಳುತ್ತೇವೋ, ಕಾಪಾಡಿಕೊಳ್ಳುತ್ತೇವೋ ಅದು ಅವರವರಿಗೆ ಬಿಟ್ಟಿದ್ದು !ಇತ್ತೀಚೆಗೆ ನಡೆಯುತ್ತಿರುವ ರಸ್ತೆ ಅಪಘಾತಗಳನ್ನು ಗಮನಿಸಿ ನನ್ನಲ್ಲಿ ಇಂತಹ ಅನೇಕ ಆಲೋಚನೆಗಳು ಬರಲಾರಂಭಿಸಿವೆ. ವಿಶೇಷವಾಗಿ ಯುವಕರಿಗೆ ಬೈಕ್‌ ಎಂದರೆ ಪ್ರಾಣ. ಅದರಲ್ಲಿ ಜಾಲಿ ರೈಡಿಂಗ್‌ ಅಂದರೆ ಬಲು ಇಷ್ಟ. ಅವರ ಕೈಗೆ ಬೈಕ್‌ ಸಿಕ್ಕರಂತೂ ರಸ್ತೆಯನ್ನು ಬಿಡಿ, ತಮ್ಮನ್ನು ತಾವೇ ಮರೆತು ಬಿಡುತ್ತಾರೆ. ಹೀಗೆ ಬೈಕ್‌ ರೈಡ್‌ನಿಂದ ಅಪಘಾತಕ್ಕೊಳಗಾಗಿ ತಮ್ಮ ಮನೆಯವರು, ಗೆಳೆಯರನ್ನು ಬಿಟ್ಟು ಶಾಶ್ವತವಾಗಿ ಕಳೆದು ಹೋದ ಅನೇಕ ಗೆಳೆಯರ ನೆನಪು ನನ್ನನ್ನು ಆಗಾಗ ಕಾಡುತ್ತವೆೆ. ಇಂದಿನ ಯುವಕರ ಬೈಕ್‌ರೈಡ್‌ ಹುಚ್ಚು ಎಷ್ಟಿರುತ್ತದೆ ಎಂದರೆ, ಅವರನ್ನು ಪ್ರೀತಿಸುವ ಜೀವಗಳಿಗಿಂತಲೂ ಹೆಚ್ಚು. ಆ ಸಮಯದಲ್ಲಿ ತಂದೆ-ತಾಯಿಯರನ್ನೂ ಅವರು ಮರೆತುಬಿಡುತ್ತಾರೆ. ಬೈಕ್‌ರೈಡ್‌ನ‌ ಎದುರು ತಂದೆತಾಯಿ ಪ್ರೀತಿಗೆ ಬೆಲೆ ಇರುವುದಿಲ್ಲ. 

ಜೀವ, ಜೀವನ ಎಂಬುದು ತುಂಬಾ ಅಮೂಲ್ಯವಾದದ್ದು. ಒಂದು ಸಲ ಕಳೆದುಕೊಂಡ ಜೀವ ಮತ್ತೆ ಬರುವುದಿಲ್ಲ. ಆಸೆ ಪಟ್ಟದ್ದೇ ಸಿಗಲಿ, ಆದರೆ, ಜವಾಬ್ದಾರಿಯೂ ನಮ್ಮ ಮೇಲಿರಬೇಕು ಅಲ್ಲವೆ? ನಮ್ಮನ್ನು ಪ್ರೀತಿಸುವವರ ಬಗ್ಗೆಯೂ ಸ್ವಲ್ಪ ಯೋಚಿಸಬೇಕು. ನಾವು ಸಂಬಂಧಗಳನ್ನು ಪ್ರೀತಿಸಬೇಕೇ ವಿನಾ ವಸ್ತುಗಳನ್ನಲ್ಲ ತಾನೆ !

– ರೋಶ್ನಿ
ದ್ವಿತೀಯ ಬಿ.ಕಾಂ.,
ಮಿಲಾಗ್ರಿಸ್‌ ಕಾಲೇಜು, ಕಲ್ಯಾಣಪುರ

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.