ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯ: ಡಾ| ಶಿವಾನಂದ ಮೂರ್ತಿ

ಕ್ಯಾಂಪಸ್‌ ಸ್ವಚ್ಛತೆ;ಸಿಬಂದಿ,ವಿದ್ಯಾರ್ಥಿಗಳಿಂದ ಶ್ರಮದಾನ

Team Udayavani, Apr 9, 2019, 6:30 AM IST

0804mlr2

ಮಹಾನಗರ: ನಗರದ ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಎನ್ನೆಸ್ಸೆಸ್‌ ಘಟಕ ಮತ್ತು ಸ್ಟಾಫ್‌ ಕ್ಲಬ್‌ಗಳ ಸಹಯೋಗದಲ್ಲಿ ಕ್ಯಾಂಪಸ್‌ ಸ್ವಚ್ಛತೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಶ್ರಮದಾನದಲ್ಲಿ ಕಾಲೇಜಿನ ಡೀನ್‌ ಮತ್ತು ಜಲಕೃಷಿ, ಜಲಪರಿಸರ ನಿರ್ವ ಹಣೆ, ಮತ್ಸ್ಯ ಸಂಪನ್ಮೂಲ ನಿರ್ವಹಣೆ, ಜಲಚರ ಪ್ರಾಣಿಗಳ ಆರೋಗ್ಯ ನಿರ್ವಹಣೆ, ಮೀನು ಸಂಸ್ಕರಣ ತಾಂತ್ರಿ ಕತೆ, ಮೀನುಗಾರಿಕಾ ತಾಂತ್ರಿಕತೆ ಎಂಜಿ ನಿಯರ್‌, ದೈಹಿಕ ಶಿಕ್ಷಣ, ಆಸ್ತಿ ಶಾಖೆ, ಆಡಳಿತ, ಗ್ರಂಥಾಲಯ ವಿಭಾಗಗಳು, ವಿದ್ಯಾರ್ಥಿ- ವಿದ್ಯಾರ್ಥಿನಿಯರ ನಿಲಯ, ಬೋಧಕ-ಬೋಧಕೇತರ ಸಿಬಂದಿ, ಸಂಶೋಧನಾ ವರ್ಗ ಮತ್ತು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಕಾಲೇಜಿನ ಡೀನ್‌ ಡಾ| ಎಚ್‌. ಶಿವಾನಂದ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ಸ್ವಚ್ಛತೆ ಎಂಬುದು ನಮ್ಮೆಲ್ಲರ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ. ನಾವು ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟರೆ ಮಾತ್ರ ನಮಗೆ ಸ್ವಚ್ಛ ಗಾಳಿ, ನೀರು, ಪರಿಸರ ಇತ್ಯಾದಿಗಳನ್ನು ದೊರಕಿಸಿಕೊಳ್ಳಲು ಸಾಧ್ಯ ಹಾಗೂ ಸ್ವಚ್ಛ ವಾತಾವರಣ ಕಾಪಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಪ್ರತಿಯೊಬ್ಬ ನಾಗರಿಕನು ಭೇದ- ಭಾವವಿಲ್ಲದೇ ಸ್ವ- ಇಚ್ಛೆಯಿಂದ ತಾನು ವಾಸಿಸುವ ಪರಿಸರವನ್ನು ಶುದ್ಧವಾಗಿ ಇರಿಸುವ ಜವಾಬ್ದಾರಿಯನ್ನು ನಿರ್ವಹಿ ಸಬೇಕು. ಬೇರೆಯವರಿಗೆ ದಾರಿದೀಪ ಆಗಬೇಕಾಗಿದೆ ಎಂದು ಹೇಳಿದರು. ಜಾಗತಿಕ ತಾಪಮಾನದಲ್ಲಿ ವ್ಯತ್ಯಾಸ ಕಂಡು ಬರುತ್ತಿರುವ ಇಂದಿನ ಯುಗದಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯ ಎಂದರು.

ಎನ್ನೆಸ್ಸೆಸ್‌ ಕಾರ್ಯಕ್ರಮ ಅಧಿಕಾರಿ ಡಾ| ಎ.ಟಿ. ರಾಮಚಂದ್ರ ನಾಯ್ಕ ಸ್ವಾಗತಿಸಿ, ಪ್ರಸ್ತಾವನೆಗೈದು ಶ್ರಮದಾನದ ಉದ್ದೇಶ ವಿವರಿಸಿದರು. ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್‌)ಯು ದೇಶದಲ್ಲಿ ಪ್ರಾರಂಭಗೊಂಡು 50 ವರ್ಷಗಳು ಕಳೆದಿವೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ 1969 ಸೆಪ್ಟಂಬರ್‌ 24ರಂದು ಇದನ್ನು ಕಾರ್ಯರೂಪಕ್ಕೆ ತರಲಾಗಿತ್ತು. ಈ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ಹೇಳಿದರು.

ಕಾಲೇಜಿನ ಎನ್‌.ಎಸ್‌.ಎಸ್‌. ಘಟಕವು ಪ್ರತಿ ತಿಂಗಳು ಒಂದಲ್ಲ ಒಂದು ಕ್ಯಾಂಪಸ್‌ ಸ್ವ‌ತ್ಛತಾ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ ಎಂದು ವಿವರಿಸಿದರು.

ವಿವಿಧೆಡೆ ದುರಸ್ತಿ
ಶಿಬಿರಾರ್ಥಿಗ‌ಳು ವಿವಿಧ ಗುಂಪುಗಳಾಗಿ ಶ್ರಮದಾನದಲ್ಲಿ ಪಾಲ್ಗೊಂಡರು. ಪ್ಲಾಸ್ಟಿಕ್‌, ಒಣಗಿದ ಎಲೆ, ಹಳೆ ಬಟ್ಟೆ- ಸಾಮಾನುಗಳ ಸಂಗ್ರಹ, ಒಣಗಿದ ಪೊದೆಗಳು, ಒಳದಾರಿಗಳ ದುರಸ್ತಿ, ಹೂ- ಗಿಡಗಳಿಗೆ ನೀರು ಪೂರೈಕೆ, ಒಳ ಚರಂಡಿಗಳ ದುರಸ್ತಿ ಮುಂತಾದ ಕೆಲಸಗಳನ್ನು ನಿರ್ವಹಿಸಿದರು. ಸ್ಟಾಫ್‌ ಕ್ಲಬ್‌ ಕಾರ್ಯದರ್ಶಿ ಡಾ| ಗಿರೀಶ್‌ ಎಸ್‌.ಕೆ. ವಂದಿಸಿದರು.

ಪ್ಲಾಸ್ಟಿಕ್‌ ಮುಕ್ತ ಕ್ಯಾಂಪಸ್‌
ಮೀನುಗಾರಿಕಾ ಕಾಲೇಜಿನಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣವಾಗಿ ಹತೋಟಿಯಲ್ಲಿದ್ದು, ಬಹುತೇಕ ಪ್ಲಾಸ್ಟಿಕ್‌ ಮುಕ್ತ ಕ್ಯಾಂಪಸ್‌ ಆಗಿದೆ. ಇದಕ್ಕೆ ಎಲ್ಲ ಸಿಬಂದಿ ಮತ್ತು ವಿದ್ಯಾರ್ಥಿಗಳು ಕಾರಣಕರ್ತರು ಎಂದು ಎನ್ನೆಸ್ಸೆಸ್‌ ಕಾರ್ಯಕ್ರಮ ಅಧಿಕಾರಿ ಡಾ| ಎ.ಟಿ. ರಾಮಚಂದ್ರ ನಾಯ್ಕ ಸಮಾರೋಪದಲ್ಲಿ ಹೇಳಿದರು.

ಟಾಪ್ ನ್ಯೂಸ್

1-ewwe-wewqe

BJP-TMC ಭಾರೀ ಘರ್ಷಣೆ: ಬಿಜೆಪಿ ಮಹಿಳಾ ಕಾರ್ಯಕರ್ತೆ ಸಾವು

naksal (2)

Chhattisgarh;ಮತ್ತೆ ಏಳು ನಕ್ಸಲರ ಹತ್ಯೆ: 112ಕ್ಕೇರಿದ ಮೃತರ ಸಂಖ್ಯೆ

rahul gandhi

BJP ಸ್ತ್ರೀಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದೆ :ರಾಹುಲ್‌

kejriwal

AAP; ನನ್ನ ಅಪ್ಪ-ಅಮ್ಮನಿಗೇಕೆ ಹಿಂಸೆ ನೀಡುತ್ತಿರುವಿರಿ?: ಪ್ರಧಾನಿಗೆ ಕೇಜ್ರಿ ಪ್ರಶ್ನೆ

1-asasa

842 ರೈತರ ಆತ್ಮಹತ್ಯೆ: ಅಧ್ಯಯನಕ್ಕೆ ಮುಖ್ಯಮಂತ್ರಿ ಸೂಚನೆ

ಸಂಸದ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿ: ಪ್ರಧಾನಿಗೆ ಸಿಎಂ ಮನವಿ

ಸಂಸದ ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಗೊಳಿಸಿ: ಪ್ರಧಾನಿಗೆ ಸಿಎಂ ಮನವಿ

Minchu

Belagavi; ಸಿಡಿಲು ಬಡಿದು ಇಬ್ಬರು ಸಾವು: ಐವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore: ಮಟ್ಕಾ ಜೂಜು; ಇಬ್ಬರು ವಶಕ್ಕೆ

Mangalore: ಮಟ್ಕಾ ಜೂಜು; ಇಬ್ಬರು ವಶಕ್ಕೆ

Theft: 3.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Theft: 3.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

Fraud: ಕಂಪೆನಿಗೆ 25 ಲಕ್ಷ ರೂ. ವಂಚನೆ; ದೂರು 

Fraud: ಕಂಪೆನಿಗೆ 25 ಲಕ್ಷ ರೂ. ವಂಚನೆ; ದೂರು 

Mangalore: ಕರಿಮಣಿ ಸರ, ಮೊಬೈಲ್‌ ಕಳವು

Mangalore: ಕರಿಮಣಿ ಸರ, ಮೊಬೈಲ್‌ ಕಳವು

4 ವರ್ಷಗಳಿಂದ ಜಾಗೃತಿ: ಮಂಗಳೂರು ಧರ್ಮಪ್ರಾಂತದಿಂದ ಜಲಬಂಧನ್‌!

4 ವರ್ಷಗಳಿಂದ ಜಾಗೃತಿ: ಮಂಗಳೂರು ಧರ್ಮಪ್ರಾಂತದಿಂದ ಜಲಬಂಧನ್‌!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-ewwe-wewqe

BJP-TMC ಭಾರೀ ಘರ್ಷಣೆ: ಬಿಜೆಪಿ ಮಹಿಳಾ ಕಾರ್ಯಕರ್ತೆ ಸಾವು

gold

Gold ಬೆಲೆ ಪ್ರತೀ 10 ಗ್ರಾಂಗೆ 1,000 ರೂ.ನಷ್ಟು ಇಳಿಕೆ

naksal (2)

Chhattisgarh;ಮತ್ತೆ ಏಳು ನಕ್ಸಲರ ಹತ್ಯೆ: 112ಕ್ಕೇರಿದ ಮೃತರ ಸಂಖ್ಯೆ

rahul gandhi

BJP ಸ್ತ್ರೀಯರನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣುತ್ತಿದೆ :ರಾಹುಲ್‌

kejriwal

AAP; ನನ್ನ ಅಪ್ಪ-ಅಮ್ಮನಿಗೇಕೆ ಹಿಂಸೆ ನೀಡುತ್ತಿರುವಿರಿ?: ಪ್ರಧಾನಿಗೆ ಕೇಜ್ರಿ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.