ಕೊಟ್ಟೂರಿನ ಟಾಪ್‌ಗೇರ್‌ ಚದುರೆ

ಈಕೆಯ ಅಪ್ಪನೂ "ದಂಗಲ್‌' ಹೀರೋ

Team Udayavani, Apr 23, 2019, 6:00 AM IST

13

ತಾನು ರಿಪೇರಿ ಮಾಡಿದ ಬೈಕುಗಳೆಲ್ಲ ಟಾಪ್‌ಗೇರ್‌ನಲ್ಲಿ ಹೊರಡುವಾಗ, ಇನ್ನು ಹೃದಯದ ತುಂಬಾ ಜೋಶ್‌ ತುಂಬಿಕೊಂಡ ಕುಸುಮಾ ಟಾಪ್‌ ಬರದೇ ಇರುತ್ತಾಳಾ?

ಸಾಧಕನ ನಿಜವಾದ ಪರೀಕ್ಷೆ ಹಿಮಾಲಯದಲ್ಲಿ ತಪಸ್ಸನ್ನಾಚರಿಸುವುದರಲ್ಲಿ ಇಲ್ಲ. ಜನರ ಸಂತೆಯ ನಡುವೆಯೇ, ಪ್ರಾಪಂಚಿಕ ವ್ಯವಹಾರಗಳ ನಡುವೆಯೇ ಇದ್ದುಕೊಂಡು ಧ್ಯಾನಸ್ಥನಾಗುವುದೇ ಸಾಧನೆ. ಈ ನಿದರ್ಶನಕ್ಕೆ ಸಾಕ್ಷಿಯಾಗಿದ್ದಾಳೆ ಕೊಟ್ಟೂರಿನ ಕುಸುಮ. ಮನೆಯಲ್ಲಿ ನೂರೆಂಟು ತಾಪತ್ರಯಗಳು, ಆರ್ಥಿಕ ಮುಗ್ಗಟ್ಟು, ಅಪ್ಪನ ಪಂಕ್ಚರ್‌ ಅಂಗಡಿಯಲ್ಲೂ ಕೆಲಸ ಮಾಡಬೇಕಾದ ಅನಿವಾರ್ಯತೆ. ಆದರೆ ಇವ್ಯಾವುವೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅವಳು ಮೊದಲ ಸ್ಥಾನ ಪಡೆಯುವುದನ್ನು ತಪ್ಪಿಸಲಿಲ್ಲ. ಟೈಮ್‌ಟೇಬಲ್‌ ಹಾಕಿಕೊಳ್ಳದೆ, ಮಿಲಿಟರಿ ಶಿಷ್ಟಾಚಾರಗಳಿಲ್ಲದೆಯೂ ಈ ಸಾಧನೆ ಮಾಡಿದ್ದು ಹೇಗೆ ಎಂದು ಕೇಳಿದರೆ ಕುಸುಮ ಹೇಳಿದ್ದು “ಎಲ್ಲಿ ಕಂಟಿನ್ಯುಟಿ ಮಿಸ್‌ ಆಗಿಬಿಡುತ್ತದೋ ಎಂದು ಒಂದಿನವೂ ತರಗತಿಗೆ ಚಕ್ಕರ್‌ ಹಾಕಿಲ್ಲ.’ ಎಂದು. ಹುಷಾರು ತಪ್ಪಿದಾಗಲೂ ಕುಸುಮ ಕಾಲೇಜ್‌ ಬಂಕ್‌ ಮಾಡಿಲ್ಲ. “ಜ್ವರ ಬಂದರೆ ಮಾತ್ರೆ ತೆಗೆದುಕೊಂಡುಬಿಟ್ಟರೆ ಹೋಗುತ್ತದೆ. ಆದರೆ ಪಾಠ ಮಿಸ್‌ ಆಗಿಬಿಟ್ಟರೆ ಮತ್ತೆ ವಿಷಯವನ್ನು ಗ್ರಹಿಸುವುದು ಕಷ್ಟ.’ ಎಂದು ನಗುತ್ತಾಳೆ ಆಕೆ.

ತಾನು ರಿಪೇರಿ ಮಾಡುವ ಬೈಕಿಗೂ, ಈ ಬದುಕಿಗೂ ಹೆಚ್ಚೇನೂ ಜಾಸ್ತಿ ವ್ಯತ್ಯಾಸವಿಲ್ಲ ಎನ್ನುವ ತಣ್ತೀದಲ್ಲಿ ನಂಬಿಕೆ ಇಟ್ಟವರು, ಕುಸುಮಾ. ಪಂಕ್ಚರ್‌ ಆಗದೇ ನಾವು ಮುಂದೆ ಸಾಗೋದು ಹೇಗೆ, ಯಾವ್ಯಾವ ಗತಿಯಲ್ಲಿ ಯಾವ್ಯಾವ ಗೇರ್‌ ಹಾಕಿ ಮುಂದೆ ಸಾಗಬೇಕು, ಯಾವ ಅಪಾಯದ ಸನ್ನಿವೇಶದಲ್ಲಿ ಬ್ರೇಕ್‌ ಒತ್ತಬೇಕು, ಸಮಾನ ಮನಸ್ಕರೊಂದಿಗೇ ಪಯಣಿಸಬೇಕು… ಇವೆಲ್ಲವೂ ಬದುಕಿಗೂ ಅನ್ವಯ. ರಿಪೇರಿ ಮಾಡಿದ ಬೈಕುಗಳೆಲ್ಲ ಟಾಪ್‌ಗೇರ್‌ನಲ್ಲಿ ಹೊರಡುವಾಗ, ಇನ್ನು ಹೃದಯದ ತುಂಬಾ ಜೋಶ್‌  ತುಂಬಿಕೊಂಡ ಕುಸುಮಾ ಟಾಪ್‌ ಬರದೇ ಇರುತ್ತಾಳಾ?

ಅಂದಹಾಗೆ ಅವರ ಮನೆಯಲ್ಲಿ ಒಟ್ಟು ಐವರು ಮಕ್ಕಳು. ಕುಸುಮ ಕೊನೆಯವಳು. ದೊಡ್ಡ ಅಣ್ಣ ತಂದೆಗೆ ನೆರವಾಗುತ್ತಿದ್ದರೆ ಉಳಿದ ಮೂವರು ಅಕ್ಕಂದಿರು ಎಂ.ಕಾಂ, ಬಿ.ಎಡ್‌, ಬಿ.ಎಸ್ಸಿ ಓದಿದ್ದಾರೆ. ತಾನು ಓದದೇ ಇದ್ದರೂ ತಮ್ಮ ಮಕ್ಕಳನ್ನು ಓದಿಸಬೇಕೆಂಬುದು ದೇವೇಂದ್ರಪ್ಪನ ಕನಸು. “ದಂಗಲ್‌’ ಸಿನಿಮಾದಲ್ಲಿ ಅಕ್ಕ ತಂಗಿಯರು ಕಬಡ್ಡಿಯಲ್ಲಿ ಮೆಡಲ್‌ ಗೆಲ್ಲುವ ಅಪ್ಪನ ಕನಸನ್ನು ನೆರವೇರಿಸಲು ಮುಂದಾಗುತ್ತಾರೆ. ಅದೇ ರೀತಿ ಇಲ್ಲೂ ಕುಸುಮ ಮತ್ತವಳ ಅಕ್ಕಂದಿರು ಚೆನ್ನಾಗಿ ಓದಿ ತಮ್ಮ ತಂದೆಗೆ ಹೆಮ್ಮೆಯನ್ನುಂಟು ಮಾಡಿರುವುದು ಯಾವುದೇ ಒಲಿಂಪಿಕ್‌ ಮೆಡಲ್‌ಗ‌ೂ ಕಡಿಮೆ ಸಾಧನೆಯೇನಲ್ಲ.

– ಹವನ

ಟಾಪ್ ನ್ಯೂಸ್

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.