ಸಮ್ಮರ್‌ ಸ್ಪೆಷಲ್‌ ಸಾಸಿವೆ

ಕುಕಿಂಗ್‌ Point

Team Udayavani, May 1, 2019, 6:15 AM IST

Avalu-Aduge-1

ಸಾಸಿವೆ ಅಥವಾ ಪಚಡಿ,
ಬೇಸಿಗೆಯಲ್ಲಿ ಸವಿಯಲು ಸೂಕ್ತವಾದ ತಿನಿಸು. ಮಲೆನಾಡಿನ ಈ ಖಾದ್ಯ, ತಯಾರಿಸಲು ಸುಲಭ, ಬಾಯಿಗೆ ರುಚಿ, ಹೊಟ್ಟೆಗೂ ತಂಪು. ಬಹುತೇಕ ಎಲ್ಲಾ ತರಕಾರಿ ಹಾಗೂ ಹುಳಿ-ಸಿಹಿ ಹಣ್ಣು ಗಳಿಂದ ಪಚಡಿ ತಯಾರಿಸಬಹುದು. ಕೆಲವು ರೆಸಿಪಿ ಇಲ್ಲಿದೆ.

ಬಾಳೆ ದಿಂಡಿನ ಸಾಸಿವೆ
ಬೇಕಾಗುವ ಸಾಮಗ್ರಿ: ಹೆಚ್ಚಿದ ಬಾಳೆ ದಿಂಡು-1 ಕಪ್‌, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಬಾಳೆದಿಂಡನ್ನು ನಾರುಗಳಿಲ್ಲದಂತೆ ಸಣ್ಣಗೆ ಹೆಚ್ಚಿಡಿ. ತೆಂಗಿನತುರಿ, ಹಸಿಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ಹೆಚ್ಚಿದ ಬಾಳೆದಿಂಡು, ಮೊಸರು ಹಾಗೂ ಉಪ್ಪು ಸೇರಿಸಿ, ಸಾಸಿವೆ- ಕರಿಬೇವು ಸೇರಿಸಿದ ಒಗ್ಗರಣೆ ಕೊಡಿ. ದೇಹದಿಂದ ಕಲ್ಮಶವನ್ನು ಹೊರ ಹಾಕುವಲ್ಲಿ ಬಾಳೆದಿಂಡಿನ ಸೇವನೆ ಉಪಕಾರಿ.


ದ್ರಾಕ್ಷಿ ಹಣ್ಣಿನ ಸಾಸಿವೆ

ಬೇಕಾಗುವ ಸಾಮಗ್ರಿ: ಹಸಿರು ದ್ರಾಕ್ಷಿ-1 ಕಪ್‌, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು) ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ದ್ರಾಕ್ಷಿಯನ್ನು ತೊಳೆದು, ಹೆಚ್ಚಿಟ್ಟುಕೊಳ್ಳಿ. ತೆಂಗಿನತುರಿ, ಹಸಿರುಮೆಣಸು ಮತ್ತು ಸಾಸಿವೆ ಜೊತೆ ಮಿಕ್ಸಿಗೆ ಹಾಕಿ ರುಬ್ಬಿ. ಆ ಮಿಶ್ರಣಕ್ಕೆ ದ್ರಾಕ್ಷಿ, ಮೊಸರು, ಉಪ್ಪು ಸೇರಿಸಿ ಕಲಸಿ. ಬೇಕಿದ್ದರೆ ಹೆಚ್ಚುವರಿ ನೀರನ್ನು ಸೇರಿಸಬಹುದು. ನಂತರ ಸಾಸಿವೆ ಕರಿಬೇವು, ಹಾಕಿದ ಒಗ್ಗರಣೆ ಕೊಟ್ಟರೆ ಹುಳಿ-ಸಿಹಿ ರುಚಿಯ ಸಾಸಿವೆ ಸಿದ್ಧ.


ಕರಬೂಜದ ಸಾಸಿವೆ

ಬೇಕಾಗುವ ಸಾಮಗ್ರಿ: ಕರಬೂಜದ ಹಣ್ಣು- 1 ಕಪ್‌, ತೆಂಗಿನತುರಿ- 1/2 ಕಪ್‌, ಒಣಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.


ಮಾಡುವ ವಿಧಾನ:
ಕರಬೂಜದ ಸಿಪ್ಪೆ ಮತ್ತು ತಿರುಳನ್ನು ತೆಗೆದು ಸಣ್ಣಗೆ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಒಣಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಕರಬೂಜದ ಹೋಳಿಗೆ ರುಬ್ಬಿದ ಮಸಾಲೆ, ಮೊಸರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಕೊನೆಯಲ್ಲಿ, ಸಾಸಿವೆ-ಕರಿಬೇವು ಸೇರಿಸಿದ ಒಗ್ಗರಣೆ ಕೊಡಿ.


ದಪ್ಪ ಮೆಣಸಿನಕಾಯಿ ಸಾಸಿವೆ

ಬೇಕಾಗುವ ಸಾಮಗ್ರಿ: ದಪ್ಪಮೆಣಸಿನ ಕಾಯಿ- 2, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ದಪ್ಪಮೆಣಸಿನಕಾಯಿಯನ್ನು ತೊಳೆದು ಸಣ್ಣಗೆ ಹೆಚ್ಚಿ, ಸಣ್ಣ ಉರಿಯಲ್ಲಿ ಸ್ವಲ್ಪ ಬಾಡಿಸಿಕೊಳ್ಳಿ. ತೆಂಗಿನತುರಿ, ಹಸಿಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಬಾಡಿಸಿದ ಹೋಳುಗಳಿಗೆ ರುಬ್ಬಿದ ಮಸಾಲೆ, ಮೊಸರು ಹಾಗೂ ಉಪ್ಪು ಸೇರಿಸಿ. ನಂತರ ಒಗ್ಗರಣೆ ಕೊಡಿ.


ಆಲೂಗಡ್ಡೆಯ ಸಾಸಿವೆ

ಬೇಕಾಗುವ ಸಾಮಗ್ರಿ: ಆಲೂಗಡ್ಡೆ- 2, ತೆಂಗಿನತುರಿ- 1/2 ಕಪ್‌, ಹಸಿರುಮೆಣಸು- 2, ಸಾಸಿವೆ- ಅರ್ಧ ಚಮಚ (ರುಬ್ಬಲು), ಮೊಸರು- 2 ಕಪ್‌, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: ಸ್ವಲ್ಪ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ಸುಲಿದು ಸಣ್ಣಗೆ ಹೆಚ್ಚಿಕೊಳ್ಳಿ. ತೆಂಗಿನ ತುರಿ, ಹಸಿಮೆಣಸು ಮತ್ತು ಸಾಸಿವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ. ಬೆಂದ ಹೋಳುಗಳಿಗೆ ರುಬ್ಬಿದ ಮಸಾಲೆ, ಮೊಸರು ಹಾಗೂ ಉಪ್ಪು ಸೇರಿಸಿ, ಒಗ್ಗರಣೆ ಕೊಟ್ಟರೆ ಆಲೂಗಡ್ಡೆಯ ಸಾಸಿವೆ ರೆಡಿ.
ಇವಿಷ್ಟೇ ಅಲ್ಲದೆ ಅನಾನಸ್‌, ಸೇಬು ಮೊದಲಾದ ಹಣ್ಣುಗಳಿಂದಲೂ, ಹಸಿಯಾಗಿ ಸೇವಿಸುವ ತರಕಾರಿಗಳಾದ ಸೌತೆಕಾಯಿ, ಮೂಲಂಗಿ ಹಾಗೂ ಬೇಯಿಸಿ ತಿನ್ನುವ ಬೆಂಡೆಕಾಯಿ, ಹಾಗಲಕಾಯಿ, ಸೌತೆ, ಬದನೆಕಾಯಿಗಳಿಂದಲೂ ಸಾಸಿವೆ ತಯಾರಿಸಬಹುದು.

— ಹೇಮಮಾಲಾ.ಬಿ, ಮೈಸೂರು

ಟಾಪ್ ನ್ಯೂಸ್

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.