ಮಗನಿಗೆ ತಂದೆಯ ಕಿಡ್ನಿ ಕಸಿ; ಎಸ್ಡಿಎಂ ವೈದ್ಯರ ಸಾಧನೆ
Team Udayavani, Jun 1, 2019, 11:37 AM IST
ಧಾರವಾಡ: ಮಕ್ಕಳು ಚೆನ್ನಾಗಿ ಇರಲೆಂದು ತಂದೆ-ತಾಯಿ ಎಂತಹ ತ್ಯಾಗವನ್ನಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೀಗ ಮತ್ತೂಂದು ಉದಾಹರಣೆ ಸಿಕ್ಕಿದೆ. ಮಗ ಅನಾರೋಗ್ಯಕ್ಕೆ ತುತ್ತಾಗಿದ್ದನ್ನು ನೋಡಲಾಗದೇ ತಂದೆಯು ಕರುಳ ಕುಡಿ ಬದುಕಬೇಕೆಂದು ತನ್ನ ಒಂದು ಕಿಡ್ನಿ ದಾನ ಮಾಡಿದ್ದು, ಎಸ್ಡಿಎಂ ವೈದ್ಯಕೀಯ ಮಹಾವಿದ್ಯಾಲಯ ಮೊದಲ ಯಶಸ್ವಿ ಕಿಡ್ನಿ ಕಸಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಶುಕ್ರವಾರ ಎಸ್ಡಿಎಂ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ| ಮಹೇಶ ಬೆನ್ನಿಕಲ್ ಈ ಕುರಿತು ಮಾಹಿತಿ ನೀಡಿದರು. ಬಳ್ಳಾರಿಯ ಹರೀಶ(23) (ಹೆಸರು ಬದಲಾಯಿಸಲಾಗಿದೆ) ಎಂಬುವರು ಡಯಾಲಿಸಿಸ್ ಆ್ಯಂಡ್ ಇಂಡ್ ಸ್ಟೆಜ್ ಕಿಡ್ನಿ ಡಿಸೀಸ್ ಎಂಬ ರೋಗದಿಂದ ಬಳಲುತ್ತಿದ್ದರು. ಇವರು ಬಳ್ಳಾರಿಯಲ್ಲಿ ಹಿಮೋಡಯಾಲಿಸಿಸ್ ಪಡೆಯುತ್ತಿದ್ದರು. ನಂತರ ಎಸ್ಡಿಎಂ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಿದ್ದಾರೆ ಎಂದರು.
ಹರೀಶ ಅವರು ಎಸ್ಡಿಎಂ ಆಸ್ಪತೆಗೆ ಬಂದು ಸೇರಿದಾಗ ಅವರ ಚಿಕ್ಕ ವಯಸ್ಸನ್ನು ಪರಿಗಣಿಸಿ ಕಿಡ್ನಿ ತಜ್ಞ ವೈದ್ಯರು ಕಿಡ್ನಿ ಕಸಿಗೆ ಒಳಗಾಗುವಂತೆ ಸಲಹೆ ನೀಡಿದರು. ಇದಕ್ಕೆ ಸ್ಪಂದಿಸಿದ ಹರೀಶ ಕಿಡ್ನಿ ಕಸಿಗೆ ಒಪ್ಪಿ ಎಲ್ಲ ರೀತಿಯ ಚಿಕಿತ್ಸೆಗೆ ಒಳಗಾದರು. ನಂತರ ಕಿಡ್ನಿದಾನಿಗಳಿಗೆ ಹುಡುಕಲು ಮುಂದಾದಾಗ ಹರೀಶ ಅವರ ತಂದೆ ಪ್ರಕಾಶ(ಹೆಸರು ಬದಲಾಯಿಸಲಾಗಿದೆ) ತಾವೇ ಖುದ್ದಾಗಿ ಕಿಡ್ನಿ ದಾನ ಮಾಡುವುದಾಗಿ ಒಪ್ಪಿಕೊಂಡರು. ನಂತರ ವೈದ್ಯರು ಕನಿಷ್ಟ ಆಕ್ರಮಣ ಶೀಲ(ಲ್ಯಾಪರೋಸ್ಕೋಪಿ) ಚಿಕಿತ್ಸೆ ಮೂಲಕ ಪ್ರಕಾಶ ಅವರ ಕಿಡ್ನಿ ತೆಗೆದು ಮೇ 14ರಂದು ಹರೀಶ ಅವರಿಗೆ ಕಸಿ ಮಾಡಿದರು ಎಂದು ವಿವರಿಸಿದರು.
ಶಸ್ತ್ರ ಚಿಕಿತ್ಸೆ ನಂತರ ತಂದೆ ಹಾಗೂ ಮಗ ಚೇತರಿಸಿಕೊಂಡಿದ್ದು, ಈ ವೇಳೆ ಯಾವುದೇ ತೊಂದರೆ ಆಗದಂತೆ ಮೇಲ್ವಿಚಾರಣೆ ಮಾಡಲಾಯಿತು. ಶಸ್ತ್ರ ಚಿಕಿತ್ಸೆ ಆದ 3ನೇ ದಿನಕ್ಕೆ ಹರೀಶ ಅವರ ಮೂತ್ರಪಿಂಡದ ಕಾರ್ಯಚಟುವಟಿಕೆಗಳು ಸಾಮಾನ್ಯವಾಗಿದ್ದವು. ನಂತರ 5ನೇ ದಿನಕ್ಕೆ ಹರೀಶ ಅವರ ತಂದೆ ಪ್ರಕಾಶ ಹಾಗೂ 10ನೇ ದಿನದಂದು ಹರೀಶ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ಹೇಳಿದರು.
ಡಾ|ಅಕ್ಕಮಹಾದೇವಿ ಎಸ್.ಎಸ್ ಮಾತನಾಡಿ, ಈ ಶಸ್ತ್ರಚಿಕಿತ್ಸೆಯಲ್ಲಿ ಮೂತ್ರಪಿಂಡ ಶಾಸ್ತ್ರಜ್ಞರು, ಮೂತ್ರ ಶಾಸ್ತ್ರಜ್ಞರು, ಅನಸ್ತೇಶಿಯಾ ತಂಡದವರಾದ ಡಾ|ಮಹೇಶ ಬಿನ್ನಿಕಲ್, ಡಾ|ಅತುಲ್ ದೇಸಾಯಿ, ಡಾ| ಮಂಜುನಾಥ ಆರ್., ಡಾ| ಸಂಜಯ ಪಾಟೀಲ, ಡಾ| ನಾಗರಾಜ ನಾಯ್ಕ ಸೇರಿದಂತೆ ಸರ್ಜಿಕಲ್ ಮೂತ್ರಶಾಸ್ತ್ರಜ್ಞರ ತಂಡ ಭಾಗವಹಿಸಿ ಯಶಸ್ವಿ ಆಗಿದೆ ಎಂದರು.
ಸದ್ಯ ಎಸ್ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಆರಂಭಿಸಿರುವುದರಿಂದ ತಜ್ಞ ವೈದ್ಯ ತಂಡವು ಉತ್ತರ ಕರ್ನಾಟಕದ ಬಡ ರೋಗಿಗಳ ಸೇವೆ ಮಾಡಲು ಸಹಾಯ ಮಾಡುತ್ತದೆ. ಮುಂದೆ ಬ್ರೇನ್ ಡೆಡ್ ರೋಗಿಗಳ ಕಸಿ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗುವುದು ಎಂದರು.
ಎಸ್ಡಿಎಂನ ವೈಸ್ ಚಾನ್ಸ್ಲರ್ ಡಾ| ನಿರಂಜನಕುಮಾರ, ಡಾ| ಶ್ರೀನಿವಾಸ, ಡಾ| ಮಂಜುನಾಥ ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ
Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು
Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್
Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್
Anjali Ambigera Case; ಹಂತಕ ಗಿರೀಶ್ ಗೂ ಅಂಜಲಿಗೂ 15 ದಿನಗಳ ಮೊದಲೇ ಮದುವೆಯಾಗಿತ್ತು!
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು
Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ
Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು
Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ
Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್