ಒಣಗಿದ ಮದಗ: ಉದ್ಯೋಗ ಖಾತ್ರಿ ಮೂಲಕ ಹೂಳೆತ್ತಲು ಸಿಪಿಎಂ ಒತ್ತಾಯ
Team Udayavani, Jun 6, 2019, 6:10 AM IST
ಕುಂದಾಪುರ: ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶಾಲವಾದ ಮದಗ ಹೇರಿಕೆರೆಯಲ್ಲಿ ಬರಗಾಲದಿಂದಾಗಿ ಕೆರೆ ಒಣಗಿ ಬರಡಾಗಿದ್ದು, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಸಮಿತಿ ನೇತೃತ್ವದ ನಿಯೋಗ ಸ್ಥಳಕ್ಕೆ ಭೇಟಿ ನೀಡಿ, ರೈತರೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿತು.
ಈ ಕೆರೆಯನ್ನು ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಹೂಳೆತ್ತಬೇಕು. ಇದಕ್ಕಾಗಿ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವುದು ಎಂದು ನಿಯೋಗ ಹೇಳಿದೆ.
ಸರಕಾರದ ನಿರ್ಲಕ್ಷ್ಯಕ್ಕೆ ಖಂಡನೆ
ಕುಂದಾಪುರ ತಾಲೂಕಿನ ಬಸೂÅರು ಗ್ರಾಮದ ಸುತ್ತಮುತ್ತಲಿರುವ ಹಿರೇಬೈಲು, ನಚ್ಚಾರು, ಉಳ್ಳೂರು, ಸಾಂತಾವರ, ಸೂರಣಿಗಿಗಳ ಸ್ಥಳಗಳ ಗದ್ದೆಗಳಿಗೆ ನೀರುಣಿಸುತ್ತಿದ್ದ ಹೇರಿಕೆರೆ ಉಳಿಸುವ ಜವಾಬ್ದಾರಿಗೆ ಎಲ್ಲರೂ ಕೈ ಜೋಡಿಸಬೇಕಿದೆ. 45 ಎಕರೆಯ ವಿಸ್ತಾರ ಹೊಂದಿ ಜಿಲ್ಲೆಯಲ್ಲೇ ಅತಿ ದೊಡ್ಡದಾದ ಈ ಕೆರೆ ಬರಡಾಗಿದೆ. 20 ವರ್ಷದಿಂದ ಹೂಳೆತ್ತಿಲ್ಲ ಎಂದು ಸ್ಥಳೀಯರು ಹೇಳಿದರು.
ಸಾಂತವಾರ ಗ್ರಾ. ಪಂ. ಸದಸ್ಯ ಸಂತೋಷ ಅವರು ಹಿಂದಿನ ಸರಕಾರದ ಸಣ್ಣ ನೀರಾವರಿ ಸಚಿವರಿಗೆ ಮನವಿ ನೀಡಲಾಗಿದ್ದರೂ ಸರಕಾರದ ನಿರ್ಲಕ್ಷ್ಯದಿಂದ ಅದು ಸಾಧ್ಯವಾಗಿಲ್ಲ ಎಂದರು. ಸಂಬಂಧ ಪಟ್ಟ ಜಿಲ್ಲಾ ಪಂಚಾಯತ್ ಸದಸ್ಯರು ಈ ಬಗ್ಗೆ ಗಮನವಹಿಸಬೇಕೆಂದು ಸ್ಥಳೀಯ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಸಣ್ಣ ದೇವಾಡಿಗ ಹೇಳಿದರು.
ಕೋಳ್ಕರೆಯೂ ಬರಡು
ಬಸೂÅರು ಗ್ರಾಮದ ಸುತ್ತಮತ್ತಲ ಹಳ್ಳಿಗಳ ಜನರಿಗೆ ಆಸರೆಯಾಗಿದ್ದ ಕೋಳ್ಕೆರೆ ಕೂಡ ದುರಸ್ತಿಯಾಗಿಲ್ಲ ಈ ಬಗ್ಗೆಯೂ ಸರಕಾರದ ಗಮನ ಸೆಳೆಯಲು ಹೋರಾಟ ರೂಪಿಸುವುದಾಗಿ ನಿಯೋಗದವರು ಹೇಳಿದರು.
ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಅಧ್ಯಕ್ಷ ಯು. ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ, ಕಾರ್ಮಿಕ ಮುಖಂಡ ಸುರೇಶ ಕಲ್ಲಾಗರ, ಮಹಾಬಲ ವಡೇರಹೋಬಳಿ ನಿಯೋಗದಲ್ಲಿದ್ದರು.
ಸ್ಥಳೀಯರಾದ ಸುಧಾಕರ, ಜಗನ್ನಾಥ, ದೇವಕಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಉಡುಪಿ ಪತ್ರಕರ್ತರಿಗೆ ‘ಪೋಕ್ಸೊ ಕಾಯಿದೆ ಮತ್ತು ಮಾಧ್ಯಮ’ ಕಾರ್ಯಾಗಾರ
ದೊಡ್ಡಣ್ಣಗುಡ್ಡೆ: ಕ್ಷೇತ್ರದಲ್ಲಿ ಬ್ರಹ್ಮಕಲಾಶೋತ್ಸವದ ಪೂರ್ವಭಾವಿ ಕಾರ್ಯಕ್ರಮ ಸಂಪನ್ನ
ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ
SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ
Madhu Bangarappa ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ಗೆ ಗೆಲುವು