ಮಾಸ್ತಿ ಉಡುಪಿ ಹೋಟೆಲ್‌ನ ಚಕ್ಕುಲಿ, ವಡೆ ರುಚಿ ತಿಂದವನೇ ಬಲ್ಲ


Team Udayavani, Jun 17, 2019, 5:00 AM IST

hotel-(2)

ಚಕ್ಕುಲಿ, ನಿಪ್ಪಟ್ಟು ಇವೆಲ್ಲ ಬೇಕರಿ, ಪ್ರಾವಿಷನ್‌ ಸ್ಟೋರ್‌ಗಳಲ್ಲಿ ಸಿಗುವುದನ್ನು ನೋಡಿರುತ್ತೇವೆ. ಆದರೆ, ಇಲ್ಲೊಂದು ಹೋಟೆಲ್‌ ಚಕ್ಕುಲಿ, ನಿಪ್ಪಟ್ಟು, ಮಸಾಲೆ ವಡೆಯಿಂದಲೇ ಫೇಮಸ್ಸಾಗಿದೆ. ಇತರೆ ತಿಂಡಿಗಳನ್ನೂ ಮಾಡಲಾಗುತ್ತದೆಯಾದ್ರೂ

ಬಹಳಷ್ಟು ಮಂದಿ ಚಕ್ಕುಲಿ, ಮಸಾಲೆ ವಡೆ ತಿನ್ನುವುದಕ್ಕಾಗಿಯೇ ಇಲ್ಲಿಗೆ ಬರುತ್ತಾರೆ. ಇಂತಹ ಹೋಟೆಲ್‌ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಪ್ರಮುಖ ಹೋಬಳಿ ಕೇಂದ್ರ ಮಾಸ್ತಿಯಲ್ಲಿದೆ. ಬಸ್‌ ನಿಲ್ದಾಣಕ್ಕೆ ಬಂದು ಇಲ್ಲಿ ಉಡುಪಿ ಹೋಟೆಲ್‌ ಎಲ್ಲಿ ಅಂತ ಕೇಳಿದರೆ ತೋರಿಸುತ್ತಾರೆ.


ಮೂಲತಃ ಉಡುಪಿಯವರಾದ ಕೇಶವರಾವ್‌ ಕಾಮತ್‌, ಈ ಹೋಟೆಲ್‌ನ ಸಂಸ್ಥಾಪಕರು. ಮದುವೆಯಾದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಅವರು, ನಂತರ ಪತ್ನಿ ಶಾರದಾ ಕಾಮತ್‌ರ ಸಹಕಾರದೊಂದಿಗೆ ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ಚಿಕ್ಕದಾಗಿ ಕ್ಯಾಂಟೀನ್‌ ಆರಂಭಿಸಿದ್ದರು. ಕೆಲ ವರ್ಷಗಳ ನಂತರ ಮಾಸ್ತಿಯಲ್ಲಿ ಇದ್ದ ಅಯ್ಯಂಗಾರ್‌ ಬೇಕರಿ ಮಾಲೀಕರ ಪರಿಚಯವಾಗಿ, ಅವರು ಇಲ್ಲೇ ಬಂದು ಹೋಟೆಲ್‌ ಪ್ರಾರಂಭಿಸುವಂತೆ ಹೇಳಿದ್ರಂತೆ. ಅದರಂತೆ 1956ರಲ್ಲಿ ಮಾಸ್ತಿಗೆ ಬಂದ ಕೇಶವರಾವ್‌, ಗ್ರಾಮದ ಸರ್ಕಲ್‌ನಲ್ಲಿ ಹೆಂಚಿನ ಮನೆಯನ್ನು ಬಾಡಿಗೆಗೆ ಪಡೆದು ಹೋಟೆಲ್‌ ಪ್ರಾರಂಭಿಸಿದರು. 25 ವರ್ಷಗಳ ನಂತರ ಬಸ್‌ ನಿಲ್ದಾಣದಲ್ಲಿ ಗುಡಿಸಲು ಹಾಕಿಕೊಂಡು, ಅದಕ್ಕೆ ಗೀತಾ ಹೋಟೆಲ್‌ ಎಂದು ನಾಮಕರಣ ಮಾಡಿದರು. 18 ವರ್ಷ ಗುಡಿಸಲಿನಲ್ಲೇ ಹೋಟೆಲ್‌ ನಡೆಸಿದ ನಂತರ ಪೊಲೀಸ್‌ ಠಾಣೆ ಎದುರು ಸ್ವಂತ ಮನೆ ಕಟ್ಟಿಕೊಂಡು ಅದರಲ್ಲೇ ಹೋಟೆಲ್‌ ಮುಂದುವರಿಸಿದರು. ಸದ್ಯ ಇವರ ಪುತ್ರ ಶಿವಪ್ರಸಾದ್‌ ಕಾಮತ್‌, ಪತ್ನಿ ದಿವ್ಯಾ, ತಾಯಿ ಶಾರದಾ ಕಾಮತ್‌ ಸಹಕಾರದೊಂದಿಗೆ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.

ವಿಶೇಷ ತಿಂಡಿ ಚಕ್ಕುಲಿ, ಮಸಾಲ್‌ ವಡೆ:
ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ಚಕ್ಕುಲಿ, ನಿಪ್ಪಟ್ಟಿಗೂ ಈ ಉಡುಪಿ ಹೋಟೆಲ್‌ನಲ್ಲಿ ಮಾಡುವ ಚಕ್ಕುಲಿಗೂ ವ್ಯತ್ಯಾಸವಿದೆ. ಬೆಣ್ಣೆ, ತುಪ್ಪದಲ್ಲಿ ಹಿಟ್ಟನ್ನು ಕಲಿಸಿ ಸ್ಥಳದಲ್ಲೇ ಎಣ್ಣೆಯಲ್ಲಿ ಕರಿದು ಬಿಸಿಯಾಗಿ ಮಾಡಿಕೊಡಲಾಗುತ್ತದೆ. ಮಸಾಲೆ ವಡೆಯ ರುಚಿಯೂ ಹೆಚ್ಚಿರುತ್ತದೆ. ಚಕ್ಕುಲಿ 5 ರೂ., ಮಸಾಲೆ ವಡೆಗೆ 10 ರೂ. ನಿಗದಿ ಮಾಡಲಾಗಿದೆ. ಬಿಸಿ ಬಿಸಿ ಚಕ್ಕುಲಿ, ವಡೆಯನ್ನು ಶುಂಠಿ ಟೀ, ಕಾಫಿ ಜೊತೆ ತಿನ್ನೊಂದು ಒಂದು ವಿಶೇಷ.

ಇತರೆ ತಿಂಡಿ:
ಚಕ್ಕುಲಿ, ವಡೆ, ನಿಪ್ಪಟ್ಟಿನಂತೆ ಈ ಹೋಟೆಲ್‌ನ ರವಾ ಇಡ್ಲಿಯನ್ನೂ ಗ್ರಾಹಕರು ಹೆಚ್ಚು ಇಷ್ಟ ಪಡುತ್ತಾರೆ. ಇಡ್ಲಿ, ವಡೆ, ಪೂರಿ, ದೋಸೆ ಜೊತೆ ಕಡ್ಲೆ ಚಟ್ನಿ ಅಥವಾ ಪುದೀನಾ, ಕೊತ್ತಂಬರಿ ಸೊಪ್ಪಿನ ಚಟ್ನಿ, ಸಾಂಬಾರ್‌, ಸಾಗು ಕೊಡಲಾಗುತ್ತದೆ. ಮಾಸ್ತಿ ಇನ್ನೂ ಹಳ್ಳಿಯಾಗಿಯೇ ಉಳಿದಿರುವ ಕಾರಣ ದರವೂ ಕಡಿಮೆ ಇದೆ. ನಾಲ್ಕು ಇಡ್ಲಿ ಎರಡು ವಡೆಗೆ 30 ರೂ., ರೈಸ್‌ಬಾತ್‌ ಜೊತೆ ಎರಡು ವಡೆಗೆ 30 ರೂ., ಮೂರು ದೋಸೆ(ಸಟ್‌) 2 ವಡೆ ಸೇರಿ 25 ರೂ. ನಿಗದಿ ಮಾಡಲಾಗಿದೆ. ಮಧ್ಯಾಹ್ನ ಅನ್ನ ಸಾಂಬಾರ್‌, ಮೊಸರನ್ನ ಸಿಗುತ್ತದೆ. ಜೊತೆಗೆ ವಡೆ ತೆಗೆದುಕೊಂಡರೆ 30 ರೂ. ತೆಗೆದುಕೊಳ್ಳಲಾಗುತ್ತದೆ.

ಹೋಟೆಲ್‌ ಸಮಯ:
ಬೆಳಗ್ಗೆ 7.30 ರಿಂದ ಸಂಜೆ 5 ರವರೆಗೆ, ವಾರಪೂರ್ತಿ ತೆರೆದಿರುತ್ತೆ

ಹೋಟೆಲ್‌ ವಿಳಾಸ:
ದಿನ್ನಹಳ್ಳಿ ಮುಖ್ಯರಸ್ತೆ, ಪೊಲೀಸ್‌ ಸ್ಟೇಷನ್‌ ಎದುರು, ಮಾಸ್ತಿ ಬಸ್‌ ನಿಲ್ದಾಣ ಸಮೀಪ, ಮಾಸ್ತಿ.

– ಭೋಗೇಶ ಆರ್‌. ಮೇಲುಕುಂಟೆ
– ಫೋಟೋ ಕೃಪೆ: ಎಂ.ಮೂರ್ತಿ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.