ಮಾಯಾವತಿ ಸಹೋದರನಿಗೆ ಸೇರಿದ 400 ಕೋಟಿ ಮೌಲ್ಯದ ಆಸ್ತಿ ಜಪ್ತಿ
ನೋಯ್ಡಾ ಪ್ರದೇಶದಲ್ಲಿರುವ ಏಳು ಎಕರೆ ಬೇನಾಮಿ ಆಸ್ತಿ ಐಟಿ ವಶಕ್ಕೆ
Team Udayavani, Jul 18, 2019, 3:34 PM IST
ಲಕ್ನೋ: ಉತ್ತರ ಪ್ರದೇಶದ ಮಾಜೀ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಸಹೋದರನಿಗೆ ಸೇರಿದ ಸುಮಾರು 400 ಕೋಟಿ ರೂಪಾಯಿಗಳ ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆಯು ಇಂದು ಜಪ್ತಿ ಮಾಡಿದೆ.
ದೆಹಲಿ ಮೂಲದ ಆದಾಯ ತೆರಿಗೆ ಇಲಾಖೆಯ ಬೇನಾಮಿ ತಡೆ ಘಟಕವು ಈ ಬೇನಾಮಿ ಆಸ್ತಿಯ ಜಪ್ತಿಗೆ ನಿರ್ದೇಶನವನ್ನು ನೀಡಿ ಜುಲೈ 16ರಂದು ತಾತ್ಕಾಲಿಕ ಆದೇಶವನ್ನು ಹೊರಡಿಸಿತ್ತು. ಉತ್ತರಪ್ರದೇಶದ ನೋಯ್ಡಾದಲ್ಲಿ ಸುಮಾರು ಏಳು ಎಕರೆಗಳಷ್ಟು ಭೂಮಿಯನ್ನು ಮಾಯಾವತಿ ಅವರ ಸಹೋದರ ಆನಂದ್ ಕುಮಾರ್ ಮತ್ತು ಅವರ ಪತ್ನಿ ವಿಚಿತೆರ್ ಲತಾ ಅವರು ‘ಫಲಾನುಭವಿ ಒಡೆತನ’ದಡಿಯಲ್ಲಿ ಹೊಂದಿದ್ದುದು ಬೆಳಕಿಗೆ ಬಂದಿತ್ತು. ಬೇನಾಮಿ ಆಸ್ತಿ ಪರಭಾರೆ ನಿಷೇಧ ಕಾಯ್ದೆ 1998ರ ಸೆಕ್ಷನ್ 24(3)ರ ಅಡಿಯಲ್ಲಿ ಜಪ್ತಿ ಆದೇಶವನ್ನು ನೀಡಲಾಗಿತ್ತು. ವಶಪಡಿಸಿಕೊಂಡ ಈ ಆಸ್ತಿಯ ಮೌಲ್ಯ ಸುಮಾರು 400 ಕೋಟಿ ರೂಪಾಯಿಗಳಷ್ಟಾಗಬಹುದು ಎನ್ನಲಾಗುತ್ತಿದೆ.
ಮಾಯಾವತಿ ಅವರು ಕಳೆದ ಜೂನ್ ತಿಂಗಳಲ್ಲಿ ಆನಂದ್ ಕುಮಾರ್ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದರು. ಆನಂದ್ ಕುಮಾರ್ ಅವರು ಈ ಹಿಂದೆ ನೋಯ್ಡಾ ಪ್ರಾಧಿಕಾರದಲ್ಲಿ ಗುಮಾಸ್ತನಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಖೊಟ್ಟಿ ಕಂಪೆನಿಯನ್ನು ಪ್ರಾರಂಭಿಸಿ ಅದರ ಮೂಲಕ ಕೋಟ್ಯಂತರ ರೂಪಾಯಿಗಳ ಸಾಲ ಪಡೆದುಕೊಂಡಿರುವ ಆರೋಪವೂ ಆನಂದ್ ಕುಮಾರ್ ಅವರ ಮೇಲಿದೆ.
2007ರಲ್ಲಿ ಮಾಯಾವತಿ ಅವರು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಆನಂದ್ ಕುಮಾರ್ ಅವರು ಸುಮಾರು 49 ಕಂಪೆನಿಗಳನ್ನು ಪ್ರಾರಂಭಿಸಿದ್ದರು ಎಂದು ಹೇಳಲಾಗುತ್ತಿದೆ ಹಾಗೂ 2014ರ ಅಂತ್ಯದಲ್ಲಿ ಅವರ ಆಸ್ತಿ ಮೌಲ್ಯ 1316 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!