ನಾಗರಪಂಚಮಿಗೆ ವಿಶೇಷ ಖಾದ್ಯಗಳು


Team Udayavani, Jul 27, 2019, 5:00 AM IST

v-17

ನಾಗರಪಂಚಮಿಗೆ ತುಳುನಾಡಿನಲ್ಲಿ ವಿಶೇಷವಾದ ಪ್ರಾಮುಖ್ಯತೆಯಿದೆ. ನಾಗದೇವರನ್ನು ಆರಾಧಿಸುವ ಈ ಹಬ್ಬದಲ್ಲಿ ಹಬ್ಬದೂಟಕ್ಕೂ ಅಷೇ ಪ್ರಾಮುಖ್ಯತೆಯಿದೆ. ಹಬ್ಬದ ಸಂದರ್ಭದಲ್ಲಿ ಹೊಸತನವನ್ನು ತಯಾರಿಸಲಿಚ್ಛಿಸುವವರಿಗೆ ಇಲ್ಲಿದೆ ಕೆಲವು ವಿಶೇಷ ಹಬ್ಬದಡಿಗೆಗಳು. ಅಡುಗೆಯಲ್ಲಿ ಎಷ್ಟೇ ಬಗೆಗಳಿದ್ದರೂ ಅದು ಪರಿಪೂರ್ಣವಾಗುವುದು ಸಿಹಿ ಇದ್ದಾಗಲೇ. ಅದಕ್ಕಾಗಿ ಇಲ್ಲಿದೆ ಕೆಲವು ಸಿಹಿತಿನಿಸುಗಳು.

ರಾಗಿ ಹಾಲ್ಬಾಯಿ
ಬೇಕಾಗುವ ಸಾಮಗ್ರಿಗಳು
ರಾಗಿ : ಅರ್ಧ ಕಪ್‌
ತೆಂಗಿನ ತುರಿ: ಕಾಲು ಕಪ್‌
ಬೆಲ್ಲ: ಅರ್ಧ ಕಪ್‌
ಏಲಕ್ಕಿ ಪುಡಿ: ಒಂದು ಚಿಟಿಕೆ

ಮಾಡುವ ವಿಧಾನ
ರಾಗಿಯನ್ನು ತೊಳೆದು ಮೂರ್‍ನಾಲ್ಕು ಗಂಟೆಗಳ ಕಾಲ ನೆನೆಯಲು ಬಿಡಿ. ಬೆಲ್ಲಕ್ಕೆ ಕಾಲು ಕಪ್‌ನಿàರು ಹಾಕಿ ಕುದಿಸಿಡಿ. ನೆನೆಸಿದ ರಾಗಿಗೆ ತೆಂಗಿನ ತುರಿ ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ.ಅರೆದ ಅನಂತರ ,ಬಟ್ಟೆ ಅಥವಾ ಜರಡಿಯ ಸಹಾಯದಿಂದ ಸೋಸಿ. ಉಳಿದ ವಿಶ್ರಣಕ್ಕೆ ಪುನಃ ನೀರು ಸೇರಿಸಿ ಅರೆಯಿರಿ.ಹೀಗೆ 2 ಬಾರಿ ಅರೆದು ಸೋಸಿ, ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ತೆಗೆಯಬೇಕು. ಒಂದು ದಪ್ಪ ತಳದ ಬಾಣಲೆಗೆ ಸೋಸಿದ ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ಸುರಿದು ಉಳಿದ ನೀರು ಹಾಗೂ ಕುದಿಸಿದ ಬೆಲ್ಲದ ನೀರನ್ನು ಸೇರಿಸಿ ಕುದಿಸಬೇಕು. ಗಟ್ಟಿಯಾದ ಕೂಡಲೇ ತುಪ್ಪ ಮತ್ತು ಏಲಕ್ಕಿ ಪುಡಿ ಸೇರಿಸಿ. ಮಧ್ಯಮ ಉರಿಯಲ್ಲಿ ಕದಡುವುದನ್ನು ಮುಂದುವರಿಸಿ. ಸ್ಪಲ್ಪ ಸಮಯದ ಅನಂತರ ಮಿಶ್ರಣ ತಳ ಬಿಡಲು ಪ್ರಾರಂಭಿಸುತ್ತದೆ. ಆಗ ಮಿಶ್ರಣವನ್ನು ತುಪ್ಪ ಸವರಿದ ಪ್ಲೇಟ್‌ಗೆ ಸುರಿಯಿರಿ. ಬಿಸಿ ಆರಿದ ಅನಂತರ ಬೇಕಾದ ಆಕಾರದಲ್ಲಿ ಕತ್ತರಿಸಿದಾಗ ಹಾಲಾºಯಿ ಸವಿಯಲು ಸಿದ್ಧವಾಗುತ್ತದೆ.

ಅಕ್ಕಿ ತಂಬಿಟ್ಟು
ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ : ಅರ್ಧ ಕಪ್‌
ಕೊಬ್ಬರಿ ತುರಿ: ಕಾಲು ಕಪ್‌
ಹುರಿದ ಕಡಲೆ: ಕಾಲು ಕಪ್‌
ನೆಲಗಡಲೆ: ಸ್ವಲ್ಪ
ಬೆಲ್ಲ: ಅರ್ಧಕಪ್‌
ನೀರು: ಕಾಲು ಕಪ್‌
ಏಲಕ್ಕಿ ಪುಡಿ: ಸ್ವಲ್ಪ

ಮಾಡುವ ವಿಧಾನ
ಅಕ್ಕಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ಹುರಿಗಡಲೆ ಮತ್ತು ನೆಲಗಡಲೆಯನ್ನು ಪುಡಿ ಮಾಡಬೇಕು. ಈ ಹುಡಿಗೆ ಸ್ವಲ್ಪ ಬೆಲ್ಲ ಮತ್ತು ಕೊಬ್ಬರಿ ತುರಿಯನ್ನು ಮಿಶ್ರಣ ಮಾಡಬೇಕು. ಒಂದು ಬಾಣಲೆಗೆ ಬೆಲ್ಲ ಮತ್ತು ನೀರು ಹಾಕಿ ಕುದಿಸಿ ಇದಕ್ಕೆ ಅಕ್ಕಿ ಹುಡಿ ಹುರಿಗಡÇ, ನೆೆಲಗಡಲೆ ಬೆಲ್ಲ ಮತ್ತು ಕೊಬ್ಬರಿ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ ಸಣ್ಣ ಉಂಡೆ ಮಾಡಿದರೆ ಅಕ್ಕಿ ತಂಬಿಟ್ಟು ಸವಿಯಲು ಸಿದ್ಧ.

ಹೆಸರಿಟ್ಟಿನ ಉಂಡೆ
ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ: ಒಂದು ಕಪ್‌
ಸಕ್ಕರೆ : ಅರ್ಧ ಕಪ್‌
ತುಪ್ಪ : ಕಾಲು ಕಪ್‌
ಸ್ವಲ್ಪ ಗೋಡಂಬಿ ಚೂರುಗಳು

ಮಾಡುವ ವಿಧಾನ
ಗೋಡಂಬಿಯನ್ನು ಚೂರು ಮಾಡಿ ಹುರಿದಿಟ್ಟುಕೊಳ್ಳಬೇಕು. ಹೆಸರು ಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿದು, ಮಿಕ್ಸಿಯಲ್ಲಿ ಪುಡಿಮಾಡಿಟ್ಟುಕೊಳ್ಳಬೇಕು. ಅನಂತರ ಸಕ್ಕರೆಯನ್ನು ಪುಡಿಮಾಡಿ . ಹೆಸರು ಬೇಳೆ,ಸಕ್ಕರೆಗೆ ತುಪ್ಪ ,ಗೋಡಂಬಿಯನ್ನು ಸೇರಿಸಿ ಉಂಡೆಮಾಡಿದರೆ ಹೆಸರಿಟ್ಟಿನ ಉಂಡೆ ರೆಡಿ.

ಅರಸಿನ ಎಲೆಯ ಕಡುಬು
ಬೇಕಾಗುವ ಸಾಮಗ್ರಿಗಳು
ಅರಸಿನ ಎಲೆ :ಹತ್ತು
ಅಕ್ಕಿ : ಅರ್ಧ ಕೆಜಿ
ಬೆಲ್ಲ : ಒಂದು ಕಪ್‌
ಕೊಬ್ಬರಿ ತುರಿ: ಒಂದು ಕಪ್‌

ಅಕ್ಕಿ ಯನ್ನು ಸ್ಪಲ್ಪ ದಪ್ಪಕ್ಕೆ ಅರೆದುಕೊಳ್ಳಬೇಕು. ಹಿಟ್ಟನ್ನು ಅರಸಿನ ಎಲೆ ಮೇಲೆ ಹರಡಿ ಇದಕ್ಕೆ ಬೆಲ್ಲ ಮತ್ತು ಕೊಬ್ಬರಿ ತುರಿ ಮಿಶ್ರಣವನ್ನು ಹಾಕಿ ಹಬೆಯಲ್ಲಿ ಬೇಯಿಸಬೇಕು. ಅಲ್ಲಿಗೆ ಅರಸಿನ ಎಲೆಯ ಕಡುಬು ಸವಿಯಲು ಸಿದ್ಧ.

ಶೇಂಗಾ ಉಂಡೆ
ಬೇಕಾಗುವ ಸಾಮಗ್ರಿಗಳು
ಶೇಂಗಾ: ಒಂದು ಕಪ್‌
ಬೆಲ್ಲ: ಮುಕ್ಕಾಲು ಕಪ್‌
ಕೊಬ್ಬರಿ: ಕಾಲು ಕಪ್‌
ಎಳ್ಳು : ಕಾಲು ಕಪ್‌
ಏಲಕ್ಕಿ ಪುಡಿ: ಸ್ವಲ್ಪ

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ನೆಲಗಡಲೆ ಹಾಗೂ ಎಳ್ಳನ್ನು ಬೇರೆಬೇರೆಯಾಗಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಅನಂತರ ತುರಿದ ಕೊಬ್ಬರಿಯನ್ನು ಹುರಿದಿಟ್ಟುಕೊಳ್ಳಬೇಕು. ಅನಂತರ ಈ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಹುಡಿ ಮಾಡಬೇಕು. ಇದಕ್ಕೆ ಏಲಕ್ಕಿ ಹುಡಿಯನ್ನು ಮಿಶ್ರ ಮಾಡಿ ಉಂಡೆ ಮಾಡಿದರೆ ಶೇಂಗಾ ಉಂಡೆ ಸವಿಯಲು ಸಿದ್ಧ.

 ಚೈತನ್ಯ

ಟಾಪ್ ನ್ಯೂಸ್

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

5-belagavi

Belagavi: ಗಡಿ ಹೋರಾಟದಲ್ಲಿ‌ ಯಶಸ್ವಿಯಾಗಲು ಒಂದಾಗಿ: ಮನೋಜ್‌ ಜರಾಂಗೆ ಪಾಟೀಲ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ

3-huliyaru

Huliyar: ಮರದ ಕೊಂಬೆ ಬಿದ್ದು ಕಾರು ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.