ಡಿಜಿಟಲ್‌ ಬ್ರೈಲ್‌ ಬುಕ್‌

ಅಂಧರು, ಕಾದಂಬರಿ, ಅಂಕಣಗಳನ್ನು ಓದಬಹುದು!

Team Udayavani, Aug 5, 2019, 5:00 AM IST

c-13

ಜಗತ್ತಿನಾದ್ಯಂತ ಲಭ್ಯವಿರುವ ಪುಸ್ತಕಗಳಲ್ಲಿ ಶೇ. 1 ರಷ್ಟು ಮಾತ್ರ ಬ್ರೈಲ್‌ ಪುಸ್ತಕಗಳಾಗಿವೆ. ಅಲಭ್ಯತೆ ಒಂದು ಸಮಸ್ಯೆಯಾದರೆ ಬ್ರೈಲ್‌ ಪುಸ್ತಕದ ತೂಕ ಇನ್ನೊಂದು ಸಮಸ್ಯೆ. ಏಕೆಂದರೆ ಬ್ರೈಲ್‌ ಲಿಪಿಗೆ ಪರಿವರ್ತನೆಗೊಂಡ 500 ಪುಟಗಳ ಪುಸ್ತಕ ಏನಿಲ್ಲವೆಂದರೂ 4 ಕೆ.ಜಿ ತೂಕವಿರುತ್ತದೆ. ಅಲ್ಲದೆ, ಅದರ ಬೆಲೆಯೂ ಹೆಚ್ಚಿರುತ್ತದೆ. ಇವೆಲ್ಲಾ ಸಮಸ್ಯೆಯನ್ನು ಮನಗಂಡ ಬೆಂಗಳೂರಿನ ಎಂ.ವಿ.ಜೆ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳಾದ ರೋಹಿತ್‌ ಹಾಗೂ ರುಚಿತಾ ಅದಕ್ಕೊಂದು ಕೊನೆಗಾಣಿಸಲು, “ಬಿ ಬುಕ್‌’ ಉಪಕರಣವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ.

ಏನಿದು ಬಿ ಬುಕ್‌?
ಪಿ.ಡಿ.ಎಫ್, ಟೆಕ್ಸ್ಟ್, ಇ- ಪಬ್‌ ಮಾದರಿಯ ಫೈಲ್‌ಗ‌ಳನ್ನು ಪೆನ್‌ಡ್ರೈವ್‌ ಮೂಲಕ ಈ ಬಿ- ಬುಕ್‌ ಉಪಕರಣಕ್ಕೆ ಸಿಕ್ಕಿಸಿದರೆ ಅದು ಅಕ್ಷರಗಳನ್ನು ಗುರುತು ಹಿಡಿದು, ಅವನ್ನು ಬ್ರೈಲ್‌ ಸಂಕೇತದಲ್ಲಿ ವ್ಯಕ್ತಪಡಿಸುತ್ತದೆ. ಈ ಉಪಕರಣ, ಬ್ರೈಲ್‌ ಸಂಕೇತವನ್ನು 6 ಪಿನ್‌ಗಳ ಮೂಲಕ ವ್ಯಕ್ತಪಡಿಸುತ್ತದೆ. ಪಿನ್‌ ಎಂದರೆ ಬಟನ್‌ನಂತೆ ಕಾರ್ಯ ನಿರ್ವಹಿಸುವ ಸ್ವಿಚ್‌ ಎಂದುಕೊಳ್ಳಬಹುದು. ಆದರೆ ಅದನ್ನು ಒತ್ತಲಾಗುವುದಿಲ್ಲ. ಅದನ್ನು ಯಂತ್ರವೇ ನಿಯಂತ್ರಿಸುತ್ತದೆ. 6 ಬಟನ್‌ಗಳಲ್ಲಿ ಆನ್‌ ಮತ್ತು ಆಫ್ ಎಂಬ ಎರಡು ಸ್ಥಿತಿಗಳಿರುತ್ತವೆ. ಪಿನ್‌ ಮೇಲಕ್ಕೆ ಎದ್ದಿದ್ದರೆ ಆಫ್ ಎಂದುಕೊಳ್ಳಬಹುದು, ಕೆಳಕ್ಕೆ ಹೋಗಿದ್ದರೆ ಆನ್‌ ಎಂದುಕೊಳ್ಳಬಹುದು. ಅಂಧರು ಈ ಪಿನ್‌ಗಳ ಮೇಲೆ ಬೆರಳಾಡಿಸುವ ಮೂಲಕ ಯಾವೆಲ್ಲ ಪಿನ್‌ ಆನ್‌ ಅಥವಾ ಆಫ್ ಆಗಿವೆ ಎಂಬುದನ್ನು ಕಂಡುಹಿಡಿದು ಅಕ್ಷರಗಳ ಗುರುತು ಹಿಡಿಯುತ್ತಾರೆ. ಆ ಮೂಲಕ ಅಂಧರು, ಕಾದಂಬರಿ ಪುಸ್ತಕ, ಇಂಟರ್‌ನೆಟ್‌ನ ಅಂಕಣಗಳನ್ನು ಪಿಡಿಎಫ್, ಟೆಕ್ಸ್ಟ್ ಅಥವಾ ಇ ಪಬ್‌ ಫಾಮ್ಯಾಟ್‌ಗೆ ಕನ್ವರ್ಟ್‌ ಮಾಡಿಕೊಂಡರೆ ಪೆನ್‌ಡ್ರೈವ್‌ ಮೂಲಕ ಬಿ-ಬುಕ್‌ಗೆ ಅಳವಡಿಸಿ ಅದನ್ನು ಬ್ರೈಲ್‌ ರೂಪದಲ್ಲಿ ಓದಬಹುದಾಗಿದೆ.
ಈ ಯಂತ್ರವನ್ನು ಆಭಿವೃದ್ಧಿಪಡಿಸುವ ಮುನ್ನ ವಿದ್ಯಾರ್ಥಿಗಳು ಅಂಧರ ಶಾಲೆಗೆ ಭೇಟಿ ನೀಡಿ, ಶಿಕ್ಷಕ ವೃಂದ ಹಾಗೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಅಗತ್ಯತೆಗಳನ್ನು ಮನಗಂಡಿದ್ದಾರೆ. ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಇರಾದೆಯೂ ಈ ವಿದ್ಯಾರ್ಥಿಗಳಿಗಿದೆ.

9591119113

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.