ಚೆಲುವಮ್ಮನ ಗಿಳಿ

ನಾನು ಪಂಜರದ ಪಕ್ಷಿಯಲ್ಲ...

Team Udayavani, Aug 7, 2019, 5:13 AM IST

s-4

ಪ್ರಕೃತಿ ಎಂದೆಂದೂ ಕುತೂಹಲಕಾರಿ. ಕಾಡು ಕಂಡರೆ ಮನುಷ್ಯನಿಗೆ ಭಯ, ಬೆರಗು. ಮನುಷ್ಯನೆಂದರೆ ವನ್ಯಮೃಗಗಳಿಗೆ ದಿಗಿಲು. ಆದರೆ, ಕಾಡುಪ್ರಾಣಿಗಳೂ ಆಗಾಗ ಮನುಷ್ಯನ ಜೊತೆ ಸಹಬಾಳ್ವೆಯಿಂದ ಬಾಳುವುದಿದೆ. ಇದು ಅಂಥದ್ದೇ ಕಥೆ. ಪಂಜರವಿಲ್ಲದೆಯೂ ಮನುಷ್ಯರ ಸಾಂಗತ್ಯ ಬೆಳೆಸಿದ ಗಿಳಿಯ ಕಥೆ!

ಪರಿಸರದ ಮಡಿಲಲ್ಲಿರುವ 78 ಮನೆಗಳ ಪುಟ್ಟ ಊರು ಧರ್ಮಸ್ಥಳದ ಬಳಿಯ ನಡುಗುಡ್ಡೆ. ಏಳು ತಿಂಗಳಿಂದ ಇಲ್ಲಿಯ ನಿವಾಸಿಗಳಿಗೆ ಗಿಳಿಯ ಗೆಳೆತನದ ಯೋಗ ಒದಗಿದೆ. ಇಲ್ಲಿನ ನಿವಾಸಿ ಚೆಲುವಮ್ಮನ ಮನೆಯ ಬಳಿ ಪುಟ್ಟ ಗಿಳಿಮರಿಯೊಂದು ಹಾರಿಬಂತು. ಕುತೂಹಲದಿಂದ ಚೆಲುವಮ್ಮ ಗಿಳಿಯತ್ತ ಕೈಚಾಚಿದಳು. ಆವತ್ತಿನಿಂದ ಗಿಳಿ ಕುಟುಂಬದ ಸದಸ್ಯನೇ ಆಗಿಹೋಯ್ತು. ವಠಾರದ ಜನರ ಪ್ರೀತಿಯನ್ನೂ ಗಳಿಸಿತು.

ಅದೇ ವಠಾರದ ಹುಡುಗಿ ಚೈತ್ರಾ. ಚೆಲುವಮ್ಮನ ಗಿಳಿರಾಮ, ಚೈತ್ರಾಳ ಜೊತೆಗೂ ಸಖ್ಯ ಬೆಳೆಸಿತು. ಈಗ ಇಬ್ಬರದೂ ಒಟ್ಟಿಗೆ ಆಟ ಪಾಠ. ಚೈತ್ರಾ ಇಲ್ಲದಿದ್ದರೆ ಗಿಳಿರಾಮ ಏನನ್ನೋ ಕಳೆದುಕೊಂಡವನಂತೆ ವರ್ತಿಸುತ್ತದೆ. ಬರೆಯುವಾಗ ಪೆನ್ನು ಕಚ್ಚುತ್ತದೆ. ಆಕೆಯ ತಲೆ ಮೇಲೆ ಏರಿ ಕೂರುತ್ತದೆ. ಸಾಕುಪ್ರಾಣಿಗಳಿಲ್ಲದ ಚೈತ್ರಾಳ ಮನೆಗೆ ಈ ಗಿಳಿ ಹೊಸ ಜೀವ ತಂದಿದೆ.

ಚೆಲುವಮ್ಮನ ಮಗ ಮಂಜುಷಾ ಆಟೋ ಚಾಲನೆ ಮಾಡುತ್ತಾರೆ. ಅವರ ಆಟೋದ ಶಬ್ದ ಕೇಳಿದ ತಕ್ಷಣ ಗಿಳಿ ಎಲ್ಲಿದ್ದರೂ ಹಾರಿ ಬಂದು ಆಟೋದ ಮೇಲೆ ಕೂರುತ್ತದೆ. ವಠಾರದ ಜನರೆಲ್ಲ ಗಿಳಿರಾಮನಿಗೆ ಆಹಾರ ನೀಡಿ ಸಂಭ್ರಮಿಸುತ್ತಾರೆ. ಈಗ ಅಕ್ಕಪಕ್ಕದ ನಾಲ್ಕೈದು ಮನೆಗೂ ಗಿಳಿರಾಮ ಭೇಟಿ ನೀಡುತ್ತಾನೆ. ಅವನಿಲ್ಲದಿದ್ದರೆ ದಿನ ಅಪೂರ್ಣ ಅನಿಸುತ್ತದೆ ಎನ್ನುವಷ್ಟು ಹಚ್ಚಿಕೊಂಡಿದ್ದಾರೆ ಆ ಕಾಡ ಹಕ್ಕಿಯನ್ನು. ಪ್ರಕೃತಿ ಮತ್ತು ಮನುಷ್ಯನ ಸಹಬಾಳ್ವೆ ಹೀಗೇ ಉಳಿಯಲಿ.

– ಗುರು ಗಣೇಶ್‌ ಭಟ್‌, ಡಬ್ಲುಳಿ

ಟಾಪ್ ನ್ಯೂಸ್

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.