ಟೆನಿಸ್‌ ದೊರೆ ಫೆಡರರ್‌ ವಿರುದ್ಧ ಭಾರತದ ಸುಮಿತ್‌


Team Udayavani, Aug 25, 2019, 5:12 AM IST

Untitled-1

ನ್ಯೂಯಾರ್ಕ್‌: ಭಾರತದ 22ರ ಹರೆಯದ ಯುವ ಟೆನಿಸಿಗ ಸುಮಿತ್‌ ನಾಗಲ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯಲ್ಲಿ “ಕನಸಿನ ಪದಾರ್ಪಣೆ’ಯ ಖುಷಿಯಲ್ಲಿದ್ದಾರೆ. ಯುಎಸ್‌ ಓಪನ್‌ ಅರ್ಹತಾ ಸುತ್ತು ದಾಟಿ ಬಂದ ನಾಗಲ್‌, ಸೋಮವಾರ ಪ್ರಧಾನ ಸುತ್ತಿನ ಮೊದಲ ಪಂದ್ಯ ಆಡಲಿದ್ದಾರೆ. ಇಲ್ಲಿ ಅವರು “ಟೆನಿಸ್‌ ದೇವರು’ ರೋಜರ್‌ ಫೆಡರರ್‌ ಅವರನ್ನು ಎದುರಿಸಲಿದ್ದಾರೆ ಎಂಬುದು ಈ ಹೊತ್ತಿನ ಕುತೂಹಲ!

ಭಾರತದ ಮತ್ತೋರ್ವ ಭರವಸೆಯ ಆಟಗಾರ ಪ್ರಜ್ಞೆàಶ್‌ ಗುಣೇಶ್ವರನ್‌ ಕೂಡ ಯುಎಸ್‌ ಓಪನ್‌ ಪ್ರಧಾನ ಸುತ್ತಿಗೆ ನೆಗೆದಿದ್ದು, ಇಲ್ಲಿ ರಶ್ಯದ ಇನ್‌ಫಾರ್ಮ್ ಆಟಗಾರ ಡ್ಯಾನಿಲ್‌ ಮೆಡ್ವಡೇವ್‌ ವಿರುದ್ಧ ಸೆಣಸಲಿದ್ದಾರೆ.

ಇದರೊಂದಿಗೆ 1998ರ ಬಳಿಕ ಭಾರತದ ಇಬ್ಬರು ಆಟಗಾರರು ಗ್ರ್ಯಾನ್‌ಸ್ಲಾಮ್‌ ಮುಖ್ಯ ಸುತ್ತಿನಲ್ಲಿ ಆಡುವ ಅರ್ಹತೆ ಪಡೆದಂತಾಯಿತು. ಅಂದಿನ ವಿಂಬಲ್ಡನ್‌ ಪಂದ್ಯಾವಳಿಯಲ್ಲಿ ಲಿಯಾಂಡರ್‌ ಪೇಸ್‌ ಮತ್ತು ಮಹೇಶ್‌ ಭೂಪತಿ ಆಡಿದ್ದರು.

“ಟೆನಿಸ್‌ ಗಾಡ್‌’ ಅರ್ಹತಾ ಸುತ್ತಿನ ಕೊನೆಯ ಪಂದ್ಯದಲ್ಲಿ ಬ್ರಝಿಲ್‌ನ ಜೊ ಮಿನೆಜಸ್‌ ವಿರುದ್ಧ ಕೊನೆಯ ಸುತ್ತಿನಲ್ಲಿ ಸೆಣಸುತ್ತಿರುವಾಗ, ತಾನಿಲ್ಲಿ ಗೆದ್ದರೆ 20 ಗ್ರ್ಯಾನ್‌ಸ್ಲಾಮ್‌ಗಳ ಒಡೆಯ, “ಗ್ಲೋಬಲ್‌ ಸೂಪರ್‌ಸ್ಟಾರ್‌’ ರೋಜರ್‌ ಫೆಡರರ್‌ ಅವರನ್ನು ಎದುರಿಸುವ ಬಗ್ಗೆ ಸುಮಿತ್‌ ನಾಗಲ್‌ ಬಹುಶಃ ಕಲ್ಪಿಸಿಯೂ ಇರಲಿಕ್ಕಿಲ್ಲ. ಆದರೀಗ “ಟೆನಿಸ್‌ ಗಾಡ್‌’ ವಿರುದ್ಧ ಆಡುವ ಕನಸು ನನಸಾಗುವ ಮಹಾ ಸಂಭ್ರಮದಲ್ಲಿದ್ದಾರೆ ನಾಗಲ್‌!

ಮಿನೆಜಸ್‌ ವಿರುದ್ಧ 5-7 ಅಂತರದಿಂದ ಮೊದಲ ಸೆಟ್‌ ಕಳೆದುಕೊಂಡ ನಾಗಲ್‌, ಉಳಿದೆರಡು ಸೆಟ್‌ಗಳನ್ನು 6-4, 6-3ರಿಂದ ಗೆದ್ದು ಪ್ರಧಾನ ಸುತ್ತಿಗೆ ನೆಗೆದರು. ಇದರೊಂದಿಗೆ ಈ ದಶಕದಲ್ಲಿ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ ಸ್ಪರ್ಧೆಯ ಪ್ರಧಾನ ಸುತ್ತಿಗೆ ಪ್ರವೇಶ ಪಡೆದ ಭಾರತದ 5ನೇ ಟೆನಿಸಿಗನೆನಿಸಿದರು. ಉಳಿದವರೆಂದರೆ ಸೋಮ್‌ದೇವ್‌ ದೇವ್‌ವರ್ಮನ್‌, ಯುಕಿ ಭಾಂಬ್ರಿ, ಸಾಕೇತ ಮೈನೇನಿ, ಪ್ರಜ್ಞೆàಶ್‌ ಗುಣೇಶ್ವರನ್‌.

ವಿಶ್ವ ರ್‍ಯಾಂಕಿಂಗ್‌ನಲ್ಲಿ 190ನೇ ಸ್ಥಾನದಲ್ಲಿರುವ ಸುಮಿತ್‌ ನಾಗಲ್‌ ಜೂನಿಯರ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಭಾರತದ 6ನೇ ಟೆನಿಸಿಗನೂ ಆಗಿದ್ದಾರೆ. 2015ರ ವಿಂಬಲ್ಡನ್‌ ಬಾಲಕರ ಡಬಲ್ಸ್‌ ನಲ್ಲಿ ಅವರು ವಿಯೆಟ್ನಾಮ್‌ನ ನಾಮ್‌ ಹಾಂಗ್‌ಲಿ ಜತೆಗೂಡಿ ಪ್ರಶಸ್ತಿ ಜಯಿಸಿದ್ದರು. ಹರ್ಯಾಣದ ಜಜ್ಜರ್‌ನವರಾದ ಸುಮಿತ್‌ ನಾಗಲ್‌, 2017ರಲ್ಲಿ ಬೆಂಗಳೂರಿನಲ್ಲಿ ಚಾಲೆಂಜರ್‌ ಪ್ರಶಸ್ತಿ ಗೆದ್ದ ಬಳಿಕ ಯಾವುದೇ ಮಹತ್ತರ ಸಾಧನೆಗೈದಿಲ್ಲ.

ಪಂದ್ಯದ ಸಮಯ
ನಾಗಲ್‌-ಫೆಡರರ್‌ ನಡುವಿನ ಪಂದ್ಯ ಭಾರತೀಯ ಕಾಲಮಾನದಂತೆ ಮಂಗಳವಾರ ಬೆಳಗ್ಗೆ 5.45ಕ್ಕೆ, ಪ್ರಜ್ಞೆàಶ್‌-ಮೆಡ್ವಡೇವ್‌ ಪಂದ್ಯ ಸೋಮವಾರ ರಾತ್ರಿ 9.45ಕ್ಕೆ ಆರಂಭವಾಗಲಿದೆ. ಆದರೆ ಇದು ಅಧಿಕೃತ ಸಮಯವಲ್ಲ. ಇದಕ್ಕೂ ಮೊದಲಿನ ಪಂದ್ಯಗಳು ವಿಳಂಬಗೊಂಡರೆ ಈ ಸ್ಪರ್ಧೆಗಳೂ ತಡವಾಗಿ ಆರಂಭವಾಗಲಿವೆ.

ಆರ್ಥರ್‌ ಆ್ಯಶ್‌ ಸ್ಟೇಡಿಯಂನಲ್ಲಿ ಟೆನಿಸ್‌ ಸ್ಟಾರ್‌ ರೋಜರ್‌ ಫೆಡರರ್‌ ಅವರನ್ನು ಎದುರಿಸುವುದೇ ಒಂದು ಮಹಾನ್‌ ಅವಕಾಶ. ಅವರು ಟೆನಿಸ್‌ನ ದೇವರು. ನಾನೀಗ ಸೂಪರ್‌ ಹ್ಯಾಪ್ಪಿ. ಈ ಸ್ಪರ್ಧೆಯನ್ನು ಭಾರೀ ಕುತೂಹಲದಿಂದ ಎದುರು
ನೋಡುತ್ತಿದ್ದೇನೆ.
-ಸುಮಿತ್‌ ನಾಗಲ್‌

ಟಾಪ್ ನ್ಯೂಸ್

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

Bandipura ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಪ್ರಕರಣ: ಅರಣ್ಯಾಧಿಕಾರಿಗಳಿಂದ ಓರ್ವ ಆರೋಪಿಯ ಬಂಧನ

9-

KMC: ಅಂತರಾಷ್ಟ್ರೀಯ ಥಲಸ್ಸೇಮಿಯಾ ದಿನ ಆಚರಣೆ; ಥಲಸ್ಸೆಮಿಯಾ ಕ್ಲಿನಿಕ್ ಪ್ರಾರಂಭ

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌

Kollywood: ಒಂದೇ ದಿನ ಧನುಷ್‌ ʼರಾಯನ್‌ʼ, ವಿಕ್ರಮ್‌ ʼತಂಗಲಾನ್‌ʼ ರಿಲೀಸ್?‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1——wqwqe

IPL ರಾಜಸ್ಥಾನ ವಿರುದ್ಧ ಗೆದ್ದ ಡೆಲ್ಲಿ ಪ್ಲೇಆಫ್ ಭರವಸೆ ಜೀವಂತ: ಆರ್ ಸಿಬಿಗೆ ಸವಾಲು

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

T20 World Cup: India jersey sold for Rs 6000!

T20 World Cup: ಭಾರತದ ಜೆರ್ಸಿ 6000 ರೂ.ಗೆ ಮಾರಾಟ!

No plan fro rest to Bumrah

Mumbai Indians; ಬುಮ್ರಾಗೆ ವಿಶ್ರಾಂತಿ: ಯಾವುದೇ ಯೋಜನೆಯಿಲ್ಲ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

Agartala; ಫೆಬ್ರವರಿಯಲ್ಲಿ ತ್ರಿಪುರ ಮೈದಾನ ಲೋಕಾರ್ಪಣೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Sangeeth Sivan: ಮಾಲಿವುಡ್‌, ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

Thirthahalli ಕುಪ್ಪಳ್ಳಿ; ಮನೆಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ!

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

ಎಲ್ಲಾ ಶೆಡ್ಯೂಲ್ ಮುಗಿದ ಬಳಿಕವಷ್ಟೇ ʼ‌KGF -3ʼ.. ಬಿಗ್‌ ಅಪ್ಡೇಟ್ ಕೊಟ್ಟ ನಿರ್ದೇಶಕ ನೀಲ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

Goa ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿದೆ: ಸಿಎಂ ಪ್ರಮೋದ್ ಸಾವಂತ್

10-thekkatte

ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.