ಆತ್ಮವಿಶ್ವಾಸದ ನಗು ಮುಖದಲ್ಲಿರಲಿ


Team Udayavani, Sep 9, 2019, 5:16 AM IST

sss4

ನಗು ಎಲ್ಲರ ಬದುಕಿಗೂ ಆಭರಣವೇ ಸರಿ. ಎದುರಾಗುವ ಅದೆಷ್ಟೋ ಕಷ್ಟಕರ ಸಂದರ್ಭಗಳನ್ನು ಸಮಾಧಾನಿಸುವ, ಬದಲಾಯಿಸುವ ಶಕ್ತಿಯುತ, ಯಾವುದೇ ಹಾನಿಯನ್ನು ಮಾಡದ ಆಯುಧವೂ ಹೌದು. ಕೆಲವೊಮ್ಮೆ ಸಂಬಂಧಗಳನ್ನು ಬೆಸೆಯುವ, ಇನ್ನು ಕೆಲವೊಮ್ಮೆ ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಅಮೂಲ್ಯ ಸಾಧನ ಇದು. ಈ ಒಡವೆಯನ್ನು ತೊಟ್ಟುಕೊಂಡವರಿಗೆ ಜೀವನದ ಅದೆಷ್ಟೋ ಕ್ಲಿಷ್ಟಕರ ಕತ್ತಲ ದಾರಿ ಸುಲಭದಲ್ಲಿ ಬೆಳಕಿನತ್ತ ತೆರೆದುಕೊಳ್ಳುತ್ತದೆ. ನಗುವಿಗೆ ಅಂತಹ ಶಕ್ತಿ ಇದೆ. ಮನಸ್ಸಿನ ಆತ್ಮಸ್ಥೈರ್ಯ ಎಂಬ ಬ್ಯಾಟರಿ ಒಂದಿದ್ದರೆ ಸಾಕು, ನಗು ಎಂಬ ಬೆಳಕು ಸದಾ ಬೆಳಗುತ್ತದೆ.

ಆತ್ಮವಿಶ್ವಾಸದ ವ್ಯಕ್ತಿಯೊಬ್ಬನನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಇತ್ತೀಚೆಗೆ ಬಂದ ಸಿನೆಮಾವೊಂದು ಪೂರಕವಾಗಿದೆ. ಆಕೆ ಕನಸು ಕಂಗಳ ಹುಡುಗಿ. ತಾನೊಬ್ಬ ಪೈಲಟ್‌ ಆಗಬೇಕು, ಆಕಾಶದಲ್ಲಿ ಹಾರಾಡಬೇಕು ಎನ್ನುವ ಕನಸು ಹೊತ್ತವಳು. ಪ್ರತಿನಿತ್ಯವೂ ಶ್ರಮ, ಸತತ ಅಭ್ಯಾಸಗಳನ್ನು ನಡೆಸುತ್ತಿದ್ದಾಕೆ. ಉತ್ಸಾಹಕ್ಕೆ ಸಮಾನಾರ್ಥಕ ಪದವೇ ಆ ಹುಡುಗಿ. ಹೀಗೆ ಪ್ರತಿನಿತ್ಯ ತನ್ನ ಕನಸನ್ನು ಸಾಕಾರ ರೂಪಕ್ಕೆ ತರಲು ಪ್ರಯತ್ನಿಸುವ ಆಕೆಗೆ ಆ ಅವಕಾಶವೂ ಒದಗಿ ಬರುತ್ತದೆ. ಇನ್ನೇನು ತನ್ನ ಸ್ವಪ್ನ ಸಾಧನೆಯಾಗುವ ದಿನ ಹತ್ತಿರ ಬಂತು ಎನ್ನುವಾಗ ನಗುವಿನ ಚಿಲುಮೆಯ ಮುಖ ಆ್ಯಸಿಡ್‌ ದಾಳಿಗೆ ತುತ್ತಾಗುತ್ತದೆ. ಅವಳ ಕನಸು ಕಮರುತ್ತದೆ. ಇನ್ನೇನು ತನ್ನ ಬದುಕೇ ಮುಗಿಯಿತಲ್ಲಾ ಎನ್ನುವ ನೋವಿನಲ್ಲಿ ಕೆಲಕಾಲ ಕೊರಗಿದ ಆಕೆಗೆ ಮತ್ತೆ ತಾನು ಇಚ್ಛೆಪಟ್ಟಂತೆಯೇ ಬದುಕು ಸಾಗಿಸಬೇಕು ಎನ್ನುವ ಮನೋಸ್ಥೈರ್ಯ ಹುಟ್ಟುತ್ತದೆ. ಪ್ರೋತ್ಸಾಹ ನೀಡಿ ನೀರೆರೆಯುವುದಕ್ಕೆ ಹೆತ್ತವರು ಮತ್ತು ಗೆಳೆಯರೂ ಜತೆಯಾಗುತ್ತಾರೆ. ಆಕೆ ತನ್ನ ಛಲ, ಹಠ, ಬುದ್ಧಿವಂತಿಕೆ, ಹೆಚ್ಚಾಗಿ ಆತ್ಮವಿಶ್ವಾಸದ ಮೂಲಕ ಪ್ರಯತ್ನಿಸಿ ಪೈಲಟ್‌ ಆಗುತ್ತಾಳೆ.

ಇದು ಚಲನಚಿತ್ರಕ್ಕೆ ಸಂಬಂಧಿಸಿದ ಕತೆಯೇ ಇರಬಹುದು. ಆದರೆ ಇಂತಹ ಕ್ರೂರ ಸಂದರ್ಭಗಳು ಎಲ್ಲರ ಜೀವನದಲ್ಲಿಯೂ ಒಂದಿಲ್ಲೊಂದು ರೀತಿಯಲ್ಲಿ ತನ್ನ ದರ್ಪ ಮೆರೆಯುತ್ತದೆ. ಕೆಲವು ಘಟನೆಗಳು ಬದುಕನ್ನೇ ಮೂರಾಬಟ್ಟೆ ಮಾಡುವಷ್ಟರ ಮಟ್ಟಿಗೆ ಹೈರಾಣಾಗಿಸಿಬಿಡುತ್ತವೆ. ಹೀಗಾದಾಗೆಲ್ಲಾ ಅಯ್ಯೋ ಎಲ್ಲಾ ಮುಗಿಯಿತಲ್ಲಾ ಎನ್ನುವ ಭಾವನೆ ಬೇಡ. ಬದಲಾಗಿ ಮತ್ತೆ ನಮ್ಮ ಸಂತೋಷ, ನಗುವನ್ನು ಸೃಷ್ಟಿಸುವ ಸಂದರ್ಭಗಳನ್ನು ಸೃಷ್ಟಿ ಮಾಡಿಕೊಳ್ಳುವತ್ತ ಗಮನ ಹರಿಸಬೇಕು.

ಯಾರಿದ್ದಾರೋ ಇಲ್ಲವೋ ಒಟ್ಟಿನಲ್ಲಿ ನಮ್ಮ ಬದುಕು ನಮ್ಮ ಕೈಯೊಳಗಿರಬೆಕು ಎನ್ನುವ ಒಂದೇ ಒಂದು ಅಚಲ ನಿರ್ಧಾರ ಸಾಕು ನಮ್ಮ ಬದುಕು ಬದಲಾಗುವುದಕ್ಕೆ. ಎಲ್ಲಾ ಸಂದರ್ಭಗಳನ್ನೂ ಎದುರಿಸಿ ಮತ್ತೆ ಗಟ್ಟಿಯಾಗಿ ಎದ್ದು ನಿಲ್ಲುವುದಕ್ಕೆ. ಮತ್ತೆ ಗೆಲುವಿನ ಜತೆಗಿನ ಮುಗುಳ್ನಗುವಿನ ಜತೆಗೆ ಎಲ್ಲರಿಗೂ ಮಾದರಿಗಳಾಗುವುದಕ್ಕೆ. ಏಕೆಂದರೆ ಕಷ್ಟ ಕಷ್ಟವೇ ಅಲ್ಲ ಆತ್ಮವಿಶ್ವಾಸದ ನಗು ನಮ್ಮೊಂದಿಗಿದ್ದರೆ.

 - ಭುವನ ಬಾಬು,ಪುತ್ತೂರು

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.