ಮಿಣಜಗಮ್ಮ ದೇವಿ ಕಳಸ ಹೊರುವುದು ಬಾಲ ಮುತ್ತೈದೆ!


Team Udayavani, Oct 6, 2019, 3:08 AM IST

minajagamma

ಕಲಬುರಗಿ: ನಾಡಿನಾದ್ಯಂತ ಇರುವ ದೇವಸ್ಥಾನಗಳಲ್ಲಿ ಒಂದೊಂದು ಬಗೆಯ ಆಚರಣೆಗಳನ್ನು ನೋಡುತ್ತೇವೆ. ಹಲವು ಆಚರಣೆಗೆ ಪೂರಕವಾಗಿದ್ದರೆ, ಇನ್ನು ಕೆಲವು ವಿಶಿಷ್ಟವಾಗಿರುತ್ತವೆ. ಆದರೆ ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಎಲ್ಲೂ ಆಚರಣೆಯಲ್ಲಿರದ ಪದ್ಧತಿಯೊಂದು ನಡೆದುಕೊಂಡು ಬರುತ್ತಿದೆ.

ಕಲಬುರಗಿ ಮಹಾನಗರದಿಂದ 15 ಕಿ.ಮೀ. ದೂರದಲ್ಲಿರುವ ತಾಲೂಕಿನ ಮಿಣಜಗಿಯಲ್ಲೇ ಈ ವಿಶಿಷ್ಟ ಪದ್ಧತಿ ಜಾರಿಯಲ್ಲಿದೆ. ವರ್ಷಕ್ಕೊಮ್ಮೆ ಮಿಣಜಗಮ್ಮ ದೇವಿ ಜಾತ್ರೋತ್ಸವದಲ್ಲಿ ಕುಂಭ-ಕಳಸ (ಬಿಂದಿಗೆ) ಹೊರುವವರು ಮದುವೆಯಾಗಿರಬೇಕು. ಆದರೆ ಋತುಮತಿ ಆಗಿರಬಾರದು. ಅಂದರೆ ಬಾಲ ಮುತ್ತೆçದೆಯೇ ಆಗಿರಬೇಕು ಎಂಬುದು ಪದ್ಧತಿ.

ಬಾಲ್ಯದಲ್ಲಿಯೇ ಮದುವೆಯಾದವರು ಕುಂಭ-ಕಳಶ ಹೊರಬೇಕು. ಆದರೆ ದೊಡ್ಡವಳಾಗಿರ ಬಾ ರದು(ಋತುಮತಿ) ಎನ್ನುವ ಪದ್ಧತಿ ಶತಮಾನ ಗಳಿಂದ ಆಚರಣೆಯಲ್ಲಿದೆ. ಪ್ರತಿವರ್ಷ ಮಹಾಲಯ ಅಮಾ ವಾಸ್ಯೆ ಮುನ್ನ ಬರುವ ಶುಕ್ರವಾರದಂದು ಜಾತ್ರಾ ಮಹೋತ್ಸವ ನಡೆಯುತ್ತದೆ. ಇಲ್ಲಿಗೆ ನಾಡಿನಾದ್ಯಂತ 10 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸುತ್ತಾರೆ. ಅದರಂತೆ ಕಳೆದ ಸೆ. 27ರಂದು ಶುಕ್ರ ವಾರ ದಂದು ಮಿಣಿಜಗಮ್ಮ ಜಾತ್ರಾ ಮಹೋತ್ಸವ ಜರುಗಿದೆ.

ಜಾತ್ರೆ ಸಂದರ್ಭದಲ್ಲಿ ಗ್ರಾಮದ ಸೀಮಾಂತರದಲ್ಲಿ ಇರುವ ಶಿವರಾಯ ದೇವಾಲಯದಿಂದ ಭೀಮಾ ನದಿಯಿಂದ ತರಲಾದ ಬಿಂದಿಗೆಯನ್ನು ಮದುವೆಯಾದ ಬಾಲಕಿಯೊಬ್ಬಳು ತಲೆ ಮೇಲೆ ಇಟ್ಟುಕೊಂಡು, ಗ್ರಾಮ ದಲ್ಲಿರುವ ಮಿಣಿಜಗಮ್ಮ ದೇವಾಲಯಕ್ಕೆ ತಂದು ಪೂಜೆ ನೆರವೇರಿಸುತ್ತಾಳೆ. ಜಾತ್ರೆಯ ಪ್ರಮುಖ ಆಕರ್ಷ ಣೆಯೇ ಬಾಲ ಮುತ್ತೆçದೆ ಬಿಂದಿಗೆ ಹೊರುವ ದೃಶ್ಯ.

ಜಾತ್ರೆ ದಿನದಂದು ಬೆಳಗಿನ ಜಾವ 3ಕ್ಕೆ ಮಿಣಜಗಿ ಗ್ರಾಮದ ಗೌಡರ ಮನೆಯಿಂದ ವ್ಯಕ್ತಿಯೊಬ್ಬ ಬಿಂದಿಗೆ ತೆಗೆದುಕೊಂಡು 12 ಕಿ.ಮೀ. ದೂರದ ಹಾಗರಗುಂಡಗಿ ಬಳಿಯ ಭೀಮಾ ನದಿಯಿಂದ ಬಿಂದಿಗೆಯಲ್ಲಿ ನೀರು ತುಂಬಿಕೊಂಡು, ಶಿವರಾಯ ದೇವಾಲಯದಲ್ಲಿ ತಂದಿಡಲಾಗುತ್ತದೆ. ಈ ದೇವಾಲಯದಿಂದ ಮಿಣಜಗಿ ಗ್ರಾಮದಲ್ಲಿರುವ ಮಿಣಜಗಮ್ಮ ದೇವಾಲಯಕ್ಕೆ ಮಾತ್ರ ಮದುವೆಯಾದ ಬಾಲಕಿಯೇ ಬಿಂದಿಗೆ ಹೊರುವ ಪದ್ಧತಿ ರೂಢಿಯಲ್ಲಿದೆ. ಇದು ಗ್ರಾಮಸ್ಥರಿಗಲ್ಲದೇ ಜಾತ್ರೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಎಲ್ಲೂ ಬಹಿರಂಗವಾಗಿಲ್ಲ.

ಕೊನೇ ಘಳಿಗೆಯಲ್ಲಿ ಸಿಕ್ಕ ಬಾಲ ಮುತ್ತೈದೆ!: ದಶಕಗಳ ಹಿಂದೆ ಮಿಣಜಗಮ್ಮ ದೇವಿ ಜಾತ್ರೆಯಲ್ಲಿ ಬಿಂದಿಗೆ ಹೊರಲೆಂದೇ ಮಿಣಜಗಿ ಗ್ರಾಮದಲ್ಲಿ ಬಾಲಕಿಯರಿಗೆ ಮದುವೆ ಮಾಡಿಸಿ ಬಿಂದಿಗೆ ಹೊರಿಸಲಾಗುತ್ತಿತ್ತು. ಬಿಂದಿಗೆ ಹೊತ್ತ ಬಾಲಕಿ ಸಂಸಾರ ಬಹಳ ಚೆನ್ನಾಗಿರುತ್ತದೆ ಎಂಬುದು ಜನರ ನಂಬಿಕೆ. ಇದಕ್ಕೆ ಗ್ರಾಮದ ಹಿರಿಯರು ಹಲವಾರು ಉದಾಹರಣೆ ನೀಡುತ್ತಾರೆ. ಆದರೆ ಬಾಲ್ಯ ವಿವಾಹ ಕಾನೂನಿಗೆ ವಿರುದ್ಧ ಎಂದು ಗೊತ್ತಾದ ನಂತರ ಮದುವೆ ನಿಂತು ಹೋದವು.

ಈಗ ಎಲ್ಲಾದರೂ ಬಾಲ್ಯ ವಿವಾಹವಾದ ಬಾಲ ಮುತ್ತೆçದೆಯನ್ನು ಹುಡುಕಿ ತಂದು ಬಿಂದಿಗೆ ಹೊರಿಸುವುದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವಂತೂ ಮದುವೆಯಾಗಿ ಋತುಮತಿಯಾಗದ ಬಾಲಕನ್ಯೆ ಎಲ್ಲೂ ಸಿಗಲಿಲ್ಲ. ಜಾತ್ರೆ ಇನ್ನೂ ಎರಡು ದಿನ ಇರುವಾಗಲೇ ಮದುವೆಯಾದ 3ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ತಂದು ಬಿಂದಿಗೆ ಹೊರಿಸಿ ಜಾತ್ರಾ ಮಹೋತ್ಸವದ ಬಿಂದಿಗೆ ಕಾರ್ಯಕ್ರಮ ಮುಗಿಸಲಾಗಿದೆ.

7 ಹೆಣ್ಣು ಮಕ್ಕಳನ್ನು ಹೊಂದಿದ್ದ ತಂದೆ-ತಾಯಿ, ಮಗಳೊಬ್ಬಳಿಗೆ ಹತ್ತಿರದ ಸಂಬಂಧಿಯೊಬ್ಬರಿಗೆ ಬಾಲ್ಯದಲ್ಲೇ ಮದುವೆ ಮಾಡಿಸಿದ್ದು, ಅದನ್ನು ಪತ್ತೆ ಹಚ್ಚಿ ಬಿಂದಿಗೆ ಹೊರಿಸಲಾಗಿದೆ. ಆದರೆ ಬಾಲಕಿ ಹೆಸರು ಬಹಿರಂಗ ಮಾಡುವುದು ಸೂಕ್ತವಲ್ಲ ಎನ್ನುತ್ತಾರೆ ಗ್ರಾಮಸ್ಥರು. ಮಿಣಿಜಗಮ್ಮ ದೇವಾಲಯದಲ್ಲಿ ಜವುಳ ತೆಗೆಯುವುದು ಸೇರಿದಂತೆ ಇತರ ಕಾರ್ಯಕ್ರಮಗಳು ನಡೆದಿವೆ. ಆದರೆ ಮದುವೆ ಕಾರ್ಯಕ್ರಮಗಳು ಆಗಿಲ್ಲ.

ಪರಿಹಾರಕ್ಕೆ ನಡೆದಿದೆ ಸಜ್ಜು: ಇಂತಹ ಪದ್ಧತಿಯನ್ನು ಕಾಲಾನುಕಾಲದಿಂದ ಆಚರಣೆ ಮಾಡುತ್ತ ಬರಲಾಗಿದೆ. ಇನ್ಮುಂದೆ ಇದು ಕಠಿಣವಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಪರಿಹಾರ ಕಂಡುಕೊಳ್ಳುವುದು ಅಗತ್ಯವಿದೆ ಎನ್ನುತ್ತಾರೆ ಗ್ರಾಮದ ಪ್ರಜ್ಞಾವಂತ ಯುವಕರು-ಹಿರಿಯರು. ನಾಡಿನ ಖ್ಯಾತ ಮಠಾಧೀಶರು ಹಾಗೂ ಜಗದ್ಗುರುಗಳ ಬಳಿ ತೆರಳಿ ಪರಿಹಾರ ಕಂಡುಕೊಳ್ಳಲಾಗುವುದು ಎನ್ನುತ್ತಾರೆ.

ಅಕ್ಕಮಹಾದೇವಿ ವಚನದಂತೆ ಲಿಂಗ ದೀಕ್ಷೆ ಮಾಡಿಕೊಂಡರೆ ಶಿವನೇ ಪತಿ ಎನ್ನುವಂತೆ ಬಾಲಕಿಗೆ ಲಿಂಗ ದೀಕ್ಷೆ ಇಲ್ಲವೇ, ಶಿವದೀಕ್ಷೆ ಕೊಡಿಸಿ, ಅವಳಿಗೆ ಬಿಂದಿಗೆ ಹೊರಿಸಿಕೊಂಡು ಮುನ್ನಡೆಸಿಕೊಂಡು ಹೋದರೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಈಗಾಗಲೇ ನಾನಿದನ್ನು ಪ್ರಸ್ತಾಪಿಸಿದ್ದೇನೆ. ಕಾರ್ಯರೂಪಕ್ಕೆ ಬರಬೇಕಷ್ಟೇ.
-ವೇದಮೂರ್ತಿ ಕರಬಸಯ್ಯ ಸ್ವಾಮಿ ಹಿರೇಮಠ, ಮಿಣಜಗಿ

* ಹಣಮಂತರಾವ ಭೈರಾಮಡಗಿ

ಟಾಪ್ ನ್ಯೂಸ್

ambarish

Rebel star ಅಂಬರೀಶ್‌ ಹುಟ್ಟುಹಬ್ಬ; ಕಂಠೀರವ ಸ್ಟುಡಿಯೋದತ್ತ ಫ್ಯಾನ್ಸ್

Shortage of players: Aussies coach, head of selection committee fielded against Namibia

AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ; ಮೇ 31ಕ್ಕೆ ಶಾಲಾರಂಭೋತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ಮೇಲ್ಮನೆ ಚುನಾವಣೆ; ಕಾಂಗ್ರೆಸ್‌ ಟಿಕೆಟ್‌ಗೆ ದಿಲ್ಲಿಯಲ್ಲಿ ಕಸರತ್ತು

Congress ಮೇಲ್ಮನೆ ಚುನಾವಣೆ; ಕಾಂಗ್ರೆಸ್‌ ಟಿಕೆಟ್‌ಗೆ ದಿಲ್ಲಿಯಲ್ಲಿ ಕಸರತ್ತು

CM, ಸಚಿವ ನಾಗೇಂದ್ರ ತಲೆದಂಡಕ್ಕೆ ವಿಪಕ್ಷ ಪಟ್ಟು !

CM, ಸಚಿವ ನಾಗೇಂದ್ರ ತಲೆದಂಡಕ್ಕೆ ವಿಪಕ್ಷ ಪಟ್ಟು !

ರಾಜೀನಾಮೆ ಮಾತೇ ಇಲ್ಲ: ಸಚಿವ ನಾಗೇಂದ್ರ

ಚಂದ್ರಶೇಖರ್‌ ಆತ್ಮಹತ್ಯೆ ಪ್ರಕರಣ: ರಾಜೀನಾಮೆ ಮಾತೇ ಇಲ್ಲ; ಸಚಿವ ನಾಗೇಂದ್ರ

HD Revanna ಜಾಮೀನು ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ

HD Revanna ಜಾಮೀನು ರದ್ದುಪಡಿಸುವಂತೆ ಹೈಕೋರ್ಟ್‌ ಮೊರೆ

penPen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

Pen Drive Case ಪ್ರಜ್ವಲ್‌ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್‌ಐಟಿ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

ambarish

Rebel star ಅಂಬರೀಶ್‌ ಹುಟ್ಟುಹಬ್ಬ; ಕಂಠೀರವ ಸ್ಟುಡಿಯೋದತ್ತ ಫ್ಯಾನ್ಸ್

Shortage of players: Aussies coach, head of selection committee fielded against Namibia

AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.