ಶುಭೇಂದ್ರರಾವ್ ಸಿತಾರ್ ಮುರಿದ ಏರಿಂಡಿಯಾ
Team Udayavani, Nov 2, 2019, 11:32 PM IST
ಮುಂಬಯಿ: ಭಾರತದ ಖ್ಯಾತ ಸಿತಾರ್ ವಾದಕ ಶುಭೇಂದ್ರ ರಾವ್ ಅವರು ಏರ್ಇಂಡಿಯಾ ತಮ್ಮ ಸಿತಾರ್ ಮುರಿದು ಹಾಕಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಏರಿಂಡಿಯಾ ಸಿಬಂದಿಗೆ ಸಂಗೀತ ಪರಿಕರವನ್ನು ಎಷ್ಟು ಸೂಕ್ಷ್ಮವಾಗಿ ನಿರ್ವಹಿಸಬೇಕು ಎಂದು ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್ಬುಕ್ನಲ್ಲಿ ಬರೆದಿರುವ ಅವರು, “ನನ್ನ ಸಿತಾರನ್ನು ಮತ್ತೂಮ್ಮೆ ಹಾನಿಗೀಡು ಮಾಡಲಾಗಿದೆ. ಈ ಬಾರಿ ಅದಕ್ಕೆ ಹಾನಿ ಮಾಡಿದ್ದು ನಮ್ಮ ಏರ್ಇಂಡಿಯಾ ಸಿಬಂದಿ. ಕಾರ್ಯಕ್ರಮವೊಂದರ ಸಲುವಾಗಿ ನ್ಯೂಯಾರ್ಕ್ಗೆ ಬಂದಿಳಿದೆ. ನೋಡುವಾಗ, ಸಿಬಂದಿ ಇದನ್ನು ಮಧ್ಯ ಸೀಳುವಂತೆ ಮುರಿದುಹಾಕಿದ್ದಾರೆ’ ಎಂದು ಅವರು ಬರೆದಿದ್ದಾರೆ. ಜೊತೆಗೆ ಚೇಂಜ್ ಆರ್ಗ್ನಲ್ಲಿ ವಿಮಾನ ಸಿಬಂದಿ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲೂ ಮುಂದಾಗಿದ್ದಾರೆ.