ಇನ್ನಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ

115 ವರ್ಷಗಳ ಇತಿಹಾಸ ಇರುವ ಕನ್ನಡ ಶಾಲೆ

Team Udayavani, Nov 6, 2019, 4:08 AM IST

dd-11

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

1905 ಶಾಲೆ ಸ್ಥಾಪನೆ
ಇತರ ಕನ್ನಡ ಮಾಧ್ಯಮ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆ

ಬೆಳ್ಮಣ್‌: ಕಾರ್ಕಳ ತಾಲೂಕಿನ ಇನ್ನಾ ಗ್ರಾ.ಪಂ.ನಲ್ಲಿ ಕಳೆದ 115 ವರ್ಷಗಳ ಹಿಂದೆ ಆರಂಭಗೊಂಡ ಇನ್ನಾ ಸರಕಾರಿ ಮಾದರಿ ಹಿ.ಪ್ರಾ. ಶಾಲೆ ಪ್ರಸ್ತುತ 50 ವಿದ್ಯಾರ್ಥಿಗಳನ್ನು ಹೊಂದಿದ್ದು ಇತರ ಕನ್ನಡ ಮಾಧ್ಯಮ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದೆ.

1905ರಲ್ಲಿ ಇನ್ನ ಶೇಷಪ್ಪನಯ್ಯನವರು ತನ್ನ ಮನೆಯಂಗಳದ ಚಪ್ಪರದಲ್ಲಿ ಆರಂಭಿಸಿದ ಇನ್ನ ಶಾಲೆಯಲ್ಲಿ ಅವರ ಮನೆಯವರೇ ಆದ ಗೋವಿಂದ ರಾಯರು, ಗೋಪಾಲ ರಾಯರು, ವೆಂಕಟರಾಯರು ಹಾಗೂ ಮಂಜುನಾಥ ರಾಯರು ಒಂದೊಂದು ದಿನ ಒಬ್ಬೊಬ್ಬರಾಗಿ ಪಾಠ ಹೇಳಿಕೊಡುತ್ತಿದ್ದರು. ಬಳಿಕ ಶೇಷಪ್ಪಯ್ಯನವರು ಇನ್ನ ಸುವರ್ಣಪಡು³ವಿನಲ್ಲಿ ಇನ್ನದ ಗುತ್ತಿನವರ ಮೂಲಗೇಣಿಯಲ್ಲಿ ಜಾಗ ಪಡೆದು ಶಾಲೆ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಹಲವು ಶಿಕ್ಷಕರು, ಮುಖ್ಯ ಶಿಕ್ಷಕರು ಈ ಶಾಲೆಯಲ್ಲಿ ನಿರಂತರವಾಗಿ ದುಡಿದು ಸಹಸ್ರಾರು ಮಂದಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.

ಬೇಡಿಕೆಗಳು
ಬಲು ದೊಡ್ಡ ಹಳೆಯ ಕಟ್ಟಡ ಇದ್ದರೂ ಮಕ್ಕಳು ಕೂರುವ ಬೆಂಚು, ಓದಲು, ಬರೆಯುವ ಡೆಸ್ಕ್ಗಳು ಸರಿ ಇಲ್ಲ. ಶಾಲೆಯಕಿಟಕಿ ಬಾಗಿಲುಗಳು ಸರಿ ಇಲ್ಲ, ಮಕ್ಕಳಿಗೆ ಉಣ್ಣಲು ಊಟದ ಬಟ್ಟಲುಗಳಿಲ್ಲ, ಶಾಲೆಗೆ ಸರಿಯಾದ ಪ್ರಯೋಗಾಲಯವೇ ಇಲ್ಲ. ಈ ಇಲ್ಲಗಳ ನಡುವೆ ಇಲ್ಲಿನ ಶಿಕ್ಷಕರು ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದ್ದಾರೆ.ಮುಂಬಯಿ ಸಹಿತ ಇತರ ಹೊರ ರಾಜ್ಯದ
ದಾನಿಗಳು ಹಳೆ ವಿದ್ಯಾರ್ಥಿಗಳ ನೆರವಿನಿಂದ ಈ ಹಿಂದೆ ಸಂಭ್ರಮದ ಶತಮಾನೋತ್ಸವ ಕಂಡ ಶಾಲೆಯತ್ತ ಹಳೆ ವಿದ್ಯಾರ್ಥಿಗಳು ಇನ್ನಷ್ಟು ಗಮನ ಹರಿಸಬೇಕಾದ ಅಗತ್ಯವಿದೆ.

ದಾನಿಗಳ ಕೊಡುಗೆ
ಶತಮಾನ ಕಂಡ ಈ ಕನ್ನಡ ಶಾಲೆ 2005ರಲ್ಲಿ ಶತಮಾನೋತ್ಸವ ಆಚರಿಸಿದ್ದು ಪ್ರಸ್ತುತ ಈ ಶಾಲೆ ದಾನಿಗಳು, ಹಳೆ ವಿದ್ಯಾರ್ಥಿಹಾಗೂ ಪೋಷಕರ ನೆರವಿನಿಂದ ಮುಂದುವರಿದು ಬಂದಿದೆ. ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ, ಕಂಪ್ಯೂಟರ್‌ ಕಲಿಕೆ, ಕುಡಿಯುವ ನೀರಿಗಾಗಿ ಬೋರ್‌ವೆಲ್‌, ರಂಗಮಂಟಪ, ಉದ್ಯಾನವನ ನಿರ್ಮಾಣ, ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿಕೆ,
ಗೌರವ ಶಿಕ್ಷಕರ ವೇತನ ಕೊಡುಗೆಗಳೆಲ್ಲವೂ ದಾನಿಗಳ ಕೊಡುಗೆಯಾಗಿದೆ. ಹಳೆ ವಿದ್ಯಾರ್ಥಿಗಳ ಸಾಧನೆ
ಈ ಶಾಲೆಯಲ್ಲಿ ಕಲಿತವರು ಮುಂಬಯಿ, ಬೆಂಗಳೂರು, ಮದ್ರಾಸ್‌ ಹಾಗೂ ವಿದೇಶಗಳಲ್ಲಿ
ಉನ್ನತ ಸ್ಥಾನದಲ್ಲಿದ್ದಾರೆ. ವೈದ್ಯರಾಗಿ, ಎಂಜಿನಿಯರ್‌ರಾಗಿ, ವಕೀಲರಾಗಿ, ರಾಜಕಾರಣಿಗಳಾಗಿ, ಉದ್ಯಮಿಗಳಾಗಿ, ಕೃಷಿಕರಾಗಿ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ. ಒಂದು ಕಾಲದಲ್ಲಿ
ಎಲ್ಲ ಕನ್ನಡ ಶಾಲೆಗಳಂತೆ ತುಂಬಿ ತುಳುಕುತ್ತಿದ್ದ ಈ ಶಾಲೆಯಲ್ಲಿ ಈಗ 50 ವಿದ್ಯಾರ್ಥಿಗಳಿದ್ದು ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕಿ ಸಹಿತ 4 ಖಾಯಂ ಶಿಕ್ಷಕರು,ಓರ್ವ ಗುಬ್ಬಚ್ಚಿ ಇಂಗ್ಲಿಷ್‌ ಸ್ಪೀಕಿಂಗ್‌
ಕೋರ್ಸ್‌ನ ಅತಿಥಿ ಶಿಕ್ಷಕಿ ಹಾಗೂ ದಾನಿಗಳ ನೆರವಿನ ಓರ್ವ ಗೌರವ ಶಿಕ್ಷಕಿ ಇದ್ದಾರೆ.

ಉಳಿದ ಕನ್ನಡ ಶಾಲೆಗಳಂತೆ ವಿದ್ಯಾರ್ಥಿಗಳ ಕೊರತೆ ಇದ್ದರೂ ಈ ಶಾಲೆಗೆ ದಾನಿಗಳ ಕೊರತೆ ಇಲ್ಲ. ಇನ್ನೂ ಹಲವು ಮೂಲ ಸೌಕರ್ಯಗಳ ಕೊರತೆ ಇದ್ದು ದಾನಿಗಳು, ಶಿಕ್ಷಣ ಪ್ರೇಮಿಗಳು, ಹಳೆ ವಿದ್ಯಾರ್ಥಿಗಳು ಸಹಕರಿಸುವ ಭರವಸೆ ಇದೆ.
-ವಸಂತಿ ಬಾೖ, , ಮುಖ್ಯ ಶಿಕ್ಷಕಿ

ಶತಮಾನ ಕಂಡ ಇನ್ನ ಶಾಲೆ ನೂರಾರು ಕೀರ್ತಿವಂತರಿಗೆ ಅಕ್ಷರ ಜ್ಞಾನ ಕಲಿಸಿದ ವಿದ್ಯಾದೇಗುಲ. ಇನ್ನದಲ್ಲಿ ಸಿಕ್ಕಿದ ಶಿಕ್ಷಣ ಇನ್ನೆಲ್ಲೂ ಸಿಕ್ಕಿಲ್ಲ. ಈ ಶಾಲೆಯ ಹಳೆ ವಿದ್ಯಾರ್ಥಿ ಎನ್ನಲು ಹೆಮ್ಮೆ ಎನಿಸುತ್ತದೆ. ಈ ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಪ್ರಯತ್ನ ನಿರಂತರ ನಡೆಯಲಿದೆ.
-ಇನ್ನಾ ಕಾಚೂರು ಪಡುಮನೆ ಶೇಖರ ಶೆಟ್ಟಿ,, ಉದ್ಯಮಿ

-  ಶರತ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.