ತುತ್ತಿಟ್ಟ ಅನ್ನಪೂರ್ಣೆಗೆ ನಮೋ ನಮಃ


Team Udayavani, Nov 12, 2019, 5:30 AM IST

3-minit-4ce527305

ದಶಕದ ಹಿಂದಿನ ಮಾತು.ಟ್ರೈನಿಂಗ್‌ ನಿಮಿತ್ತ ಬಳ್ಳಾರಿಯಿಂದ ಹೈದರಾಬಾದಿಗೆ ಪ್ರಯಾಣಿಸುವುದಿತ್ತು. ಸಂಜೆ ಸುಮಾರು ನಾಲ್ಕರ ಹೊತ್ತಿಗೆ ರೈಲು.ಮಧ್ಯಾಹ್ನದವರೆಗೆ ಕೆಲಸ ಮಾಡಿ ನಂತರ ಮನೆಗೆ ಬಂದು, ಹದಿನೈದು ದಿನಗಳ ಅವಧಿಗೆ ಬೇಕಾದ ಉಡಿಗೆ -ತೊಡಿಗೆ, ಇತರ ಅಗತ್ಯ ವಸ್ತುಗಳನ್ನಿಟ್ಟುಕೊಂಡು ಹೊರಟಿದ್ದೆ ರಾತ್ರಿ ಊಟಕ್ಕೆ ಹೇಗೋ ಮ್ಯಾನೇಜ್‌ ಮಾಡಿದರೆ ಆಯ್ತು ಅಂತ ಹೊರಟು ನಿಂತೆ. ನಾನಿದ್ದ ಬೋಗಿಗೆ ಪ್ಯಾಕ್ಡ್ ಫ‌ುಡ್‌ ಅಥವಾ ಹಣ್ಣುಹಂಪಲು ಏನೂ ಬರಲಿಲ್ಲ. ನನ್ನ ಸಹಪ್ರಯಾಣಿಕರೆಲ್ಲ ತಾವು ತಂದಿದ್ದ ಬುತ್ತಿ ಬಿಚ್ಚಿ ತಿನ್ನತೊಡಗಿದರು. ನನ್ನ ಹೊಟ್ಟೆ ತಾಳ ಹಾಕಲು ಶುರುಮಾಡಿತು.

ಆದರೆ ವಿಧಿಯಿಲ್ಲ. ಸ್ವಲ್ಪ ಹೊತ್ತು ಕಳೆದ ನಂತರ ನನ್ನ ಎದುರಿಗೆ ಕುಳಿತಿದ್ದ ಹಿರಿಯ ದಂಪತಿ, (ಗಂಗಾವತಿಯವರೆಂದು ಪರಿಚಯಿಸಿಕೊಂಡಿದ್ದರು, ಅವರ ನೆಂಟರ ಮನೆಗೆ ಹೊರಟಿದ್ದರು ) “ನೀವೂ ತಗೊಳ್ಳಿ’ಎಂದು ತಮ್ಮ ಬುತ್ತಿ ನೀಡಲು ಬಂದಾಗ ನಾನು ನಗುತ್ತಲೇ ನಿರಾಕರಿಸಿದೆ. “ನಾವೂ ಸಸ್ಯಾಹಾರಿಗಳು, ನೀವು ನನ್ನ ಮಗಳ ಹಾಗಿದ್ದೀರಿ , ಹಸಿವಿದ್ದರೆ ನಿದ್ದೆ ಹತ್ತೋಲ್ಲ ‘ ಎಂದು ಆಕೆ ಒತ್ತಾಯ ಮಾಡಿದಾಗ, ನನಗೆ ಸ್ವಲ್ಪ ಮುಜುಗರವಾಯಿತು. ಆದರೂ, ಅವರ ವಿಶ್ವಾಸಕ್ಕೆ ಮಣಿದು ಮರುಮಾತಾಡದೆ ಸ್ವೀಕರಿಸಿ, ಊಟ ಸೇವಿಸಿದ್ದೆ. ಆದರೆ, ಆಶ್ಚರ್ಯ ಏನೆಂದರೆ, ಹಸಿವಿನ ಮರ್ಮ ಆಕೆಗೆ ಹೇಗೆ ತಿಳಿಯಿತೋ ಕಾಣೆ. ನಿಜ ಹೇಳಬೇಕೆಂದರೆ, ಆವತ್ತು ಊಟ ಮಾಡದೇ ಇದ್ದಿದ್ದರೆ, ನನ್ನ ಗತಿ ಗೋವಿಂದ !. ಆ ದಂಪತಿ ಊಟ ಕೊಟ್ಟಿದ್ದರಿಂದ ಹೊಟ್ಟೆ ತಂಪಾಗಿ, ಇಡೀ ರಾತ್ರಿ ಒಳ್ಳೆ ನಿದ್ದೆ ಬಂತು. ಬೆಳಗ್ಗೆ ನಾನು ಕಣ್ಣು ಬಿಡುವ ಹೊತ್ತಿಗೆ ಅವರು ಇಳಿದು ಹೊರಟು ಬಿಟ್ಟಿದ್ದರು. ಛೇ, ಎಂಥ ಕೆಲಸ ಆಯ್ತಲ್ಲ ಅಂದು ಕೊಂಡು, ಅವರಿಗೆ ಮನದಲ್ಲೇ ವಂದಿಸಿದ್ದೆ. ಈಗಲೂ ರೈಲ್‌ ಪ್ರಯಾಣ ಮಾಡುವ ಆ ಹಸಿವು, ಆ ಅನ್ನಪೂರ್ಣೆಯ ನೆನಪು ಕಾಡುವುದುಂಟು.

ಕೆ.ವಿ.ರಾಜಲಕ್ಷ್ಮಿ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.