ಕ್ರಿಸ್ಮಸ್‌ ಸಂಭ್ರಮಕ್ಕೆ ಸಂಗೀತದ ಇಂಪು ನೀಡುವ – ಕ್ಯಾರೊಲ್


Team Udayavani, Dec 25, 2019, 2:22 AM IST

Carrol-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕ್ರೈಸ್ತರ ಎರಡು ಪ್ರಮುಖ ಹಬ್ಬಗಳಾದ ಕ್ರಿಸ್ಮಸ್‌ ಮತ್ತು ಈಸ್ಟರ್‌ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳು ವಿಶಿಷ್ಟವಾಗಿರುತ್ತವೆ. ಧಾರ್ಮಿಕ ವಿಧಿ ವಿಧಾನಗಳು ಮತ್ತು ಬಲಿ ಪೂಜೆಗಳ ಪಾವಿತ್ರ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಯಾ ಸಂದರ್ಭಕ್ಕನುಗುಣವಾದ ಭಕ್ತಿ ಗೀತೆಗಳಿವೆ. ಕ್ರಿಸ್ಮಸ್‌ ಸಂದರ್ಭದಲ್ಲಿ ಕೇಳಿ ಬರುವ ಅಥವಾ ಹಾಡುವ ಗೀತೆಗಳನ್ನು ಕ್ಯಾರೊಲ್ಸ್‌ ಎಂಬುದಾಗಿ ಹೆಸರಿಸಲಾಗಿದೆ.

ಕ್ಯಾರೊಲ್ಸ್‌ ಹಿನ್ನೆಲೆ ‘ಕ್ಯಾರೊಲ್‌’ ಎಂದರೆ ನರ್ತನ ಅಥವಾ ಸಂತಸದ ಮತ್ತು ಉಲ್ಲಾಸದ ಹಾಡು ಎಂದರ್ಥ. ಕ್ಯಾರೊಲ್‌ಗಳನ್ನು ಸಾವಿರಾರು ವರ್ಷಗಳ ಹಿಂದೆ ಯುರೋಪ್‌ನಲ್ಲಿ ಮೊದಲ ಬಾರಿ ಹಾಡಲಾಯಿತು ಎಂದು ಹೇಳಲಾಗುತ್ತಿದೆ. ಆದರೆ, ಅವುಗಳು ಕ್ರಿಸ್ಮಸ್‌ ಕ್ಯಾರೊಲ್‌ಗ‌ಳಾಗಿರಲಿಲ್ಲ. ಏಕೆಂದರೆ ಆಗ ಕ್ರೈಸ್ತ ಧರ್ಮ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಯಾವುದೇ ಧರ್ಮಕ್ಕೆ ಸೇರದವರು ಈ ಹಾಡುಗಳನ್ನು ಹಾಡುತ್ತಿದ್ದರು.

ಚಳಿಗಾಲದ ಸಂದರ್ಭದಲ್ಲಿ ಉತ್ತರಾರ್ಧ ಗೋಳದಲ್ಲಿ (ಜರ್ಮನಿ, ರಶ್ಯಾ ಮತ್ತಿತರ ದೇಶಗಳಲ್ಲಿ) ಹಗಲು ವೇಳೆ ಅತ್ಯಂತ ಕಡಿಮೆ ಇರುವ ದಿನ (ಸಾಮಾನ್ಯವಾಗಿ ಡಿ. 22) ಕಲ್ಲಿನ ಕೋಟೆಯ ಸುತ್ತ ಜನರು ಸಂಗೀತವನ್ನು ಹಾಕಿ ಹಾಡುತ್ತ ಕುಣಿಯುತ್ತ ಸಂಭ್ರಮಿಸುತ್ತಿದ್ದರು. ಕ್ರೈಸ್ತ ಧರ್ಮದ ಪ್ರಾರಂಭಿಕ ಹಂತದಲ್ಲಿ ಈ ಆಚರಣೆಯನ್ನು ತಮ್ಮ ಆಚರಣೆಯನ್ನಾಗಿ ಮಾಡಿಕೊಂಡು ಕ್ರೈಸ್ತ ಧರ್ಮದ ಹಾಡುಗಳನ್ನು ಹಾಡಲಾರಂಭಿಸಿದರು. ಹಾಗಾಗಿ ಕ್ಯಾರೊಲ್‌ಗ‌ಳನ್ನು ಎಲ್ಲಾ ಋತುಮಾನಗಳಿಗೆ ಅನುಗುಣವಾಗಿ ರಚಿಸಿ ಹಾಡುತ್ತಿದ್ದರೂ, ಕ್ರಿಸ್ಮಸ್‌ ಸಂದರ್ಭದಲ್ಲಿ ಹಾಡುವ ಕ್ಯಾರೊಲ್‌ಗ‌ಳು ಮಾತ್ರ ಅಳಿಯದೆ ಉಳಿದುಕೊಂಡು ಬಂದವು.

ಕ್ರಿ. ಶ. 129 ರಲ್ಲಿ ರೋಮ್‌ನಲ್ಲಿ ಕ್ರಿಸ್ಮಸ್‌ ಆಚರಣೆ ವೇಳೆ ‘ಆ್ಯಂಜೆಲ್ಸ್‌ ಹಿಮ್‌ನ್‌’ (ದೇವ ದೂತರ ಸ್ತೋತ್ರ ಗೀತೆ) ಹಾಡ ಬೇಕೆಂದು ಓರ್ವ ಬಿಷಪ್‌ ಹೇಳುತ್ತಿದ್ದರು. ಕ್ರಿ.ಶ. 760 ರಲ್ಲಿ ಜೆರುಸಲೆಮಿನ ಕೋಮಾಸ್‌ ಅವರು ಗ್ರೀಕ್‌ ಆರ್ಥೊಡಾಕ್ಸ್‌ ಚರ್ಚ್ ಗಾಗಿ ಪ್ರಸಿದ್ಧ ಕ್ರಿಸ್ಮಸ್‌ ಗೀತೆಯನ್ನು ರಚಿಸಿದ್ದರು.

ಆ ಬಳಿಕ ಯೊರೋಪಿನಾದ್ಯಂತ ಹಲವಾರು ಮಂದಿ ಸಂಗೀತ ಸಂಯೋಜಕರು ಕ್ರಿಸ್ಮಸ್‌ ಕ್ಯಾರೊಲ್‌ಗ‌ಳನ್ನು ಬರೆಯಲು ಆರಂಭಿಸಿದರು. ಆದರೆ ಅವೆಲ್ಲವುಗಳುಲ್ಯಾಟಿನ್‌ ಭಾಷೆಯಲ್ಲಿ ಇದ್ದ ಕಾರಣ ಜನಸಾಮಾನ್ಯರಿಗೆ ಅರ್ಥ ಆಗುತ್ತಿರಲಿಲ್ಲ. ಹಾಗಾಗಿ ಮಧ್ಯ ಯುಗದಲ್ಲಿ (ಕ್ರಿ.ಶ. 1200) ಜನರಿಗೆ ಸಾಮೂಹಿಕ ಕ್ರಿಸ್ಮಸ್‌ ಆಚರಣೆ ಬಗೆ ಆಸಕ್ತಿ ಕಡಿಮೆಯಾಗುತ್ತಾ ಬಂದಿತ್ತು.

ಆದರೆ 1223 ರಲ್ಲಿ ಅಸಿಸ್ಸಿಯ ಸಂತ ಫ್ರಾನ್ಸಿಸ್‌ ಅವರು ಇಟೆಲಿಯಲ್ಲಿ ಸ್ಥಳೀಯ ನಾಟಕಗಳನ್ನು ಆರಂಭಿಸಿದ ಬಳಿಕ ಚಿತ್ರಣ ಬದಲಾಯಿತು. ಈ ನಾಟಕಗಳಲ್ಲಿ ಜನರು ಕಥೆಯನ್ನು ಹಾಡಿನ ಮೂಲಕ ತಿಳಿ ಹೇಳುತ್ತಿದ್ದರು. ಸ್ಥಳೀಯ ಭಾಷೆಗಳಲ್ಲಿಯೇ ಗೀತೆಗಳನ್ನು ರಚಿಸಿ ಹಾಡುವ ಸಂಪ್ರದಾಯ ಆರಂಭವಾಯಿತು.

ಹಾಗೆ ಹೊಸ ಕ್ಯಾರೊಲ್‌ಗ‌ಳು ಫ್ರಾನ್ಸ್‌, ಜರ್ಮನಿ, ಸ್ಪೈನ್‌ ಮತ್ತಿತರ ಐರೋಪ್ಯ ದೇಶಗಳಿಗೆ ವ್ಯಾಪಿಸಿ ಜನಪ್ರಿಯವಾದವು. ಹೀಗೆ ಆರಂಭವಾದ ಕ್ರಿಸ್ಮಸ್‌ ಕ್ಯಾರೊಲ್‌ಗ‌ಳನ್ನು ಹಾಡುವ ಪರಂಪರೆ ಇವತ್ತಿಗೂ ಮುಂದುವರಿದುಕೊಂಡು ಬಂದಿದೆ. ಈ ಕ್ರಿಸ್ಮಸ್‌ ಗೀತೆಗಳು ಸಾಮಾನ್ಯವಾಗಿ ಯೇಸು ಕ್ರಿಸ್ತರ ಜನನದ ಸಂದರ್ಭದ ಘಟನಾವಳಿಯನ್ನು ಆಧರಿಸಿ ಇರುತ್ತವೆ.

ಪ್ರಸ್ತುತ ಸಂದರ್ಭದಲ್ಲಿ ಕ್ರಿಸ್ಮಸ್‌ ಕ್ಯಾರೊಲ್‌ಗ‌ಳನ್ನು ಸಾಮಾನ್ಯವಾಗಿ ಕ್ರಿಸ್ಮಸ್‌ ಹಬ್ಬದ ಮುಂಚಿನ ದಿನ ಅಂದರೆ ಡಿ.24ರಂದು ರಾತ್ರಿ ಚರ್ಚ್‌ಗಳಲ್ಲಿ ನಡೆಯುವ ಸಂಭ್ರಮದ ಬಲಿ ಪೂಜೆಗೆ ಮುಂಚಿತವಾಗಿ ಒಂದು ತಾಸು ಕಾಲ ಹಾಡಲಾಗುತ್ತಿದೆ. ಈ ಕ್ರಿಸ್ಮಸ್‌ ಗೀತೆಗಳ ಗಾಯನಕ್ಕೆ ಸಂಬಂಧಿಸಿ ಗಾಯನ ತಂಡಕ್ಕೆ ಹಲವು ದಿನಗಳ ಪೂರ್ವಭಾವಿ ತರಬೇತಿ ನೀಡಲಾಗುತ್ತದೆ. ಸುಮಧುರ ಸಂಗೀತ ಮತ್ತು ಗಾಯನದ ಮೂಲಕ ಕ್ರಿಸ್ಮಸ್‌ ಆಚರಣೆಗೆ ಮತ್ತಷ್ಟು ಮೆರುಗನ್ನು ನೀಡುತ್ತವೆ ಈ ಕ್ಯಾರೊಲ್‌ಗ‌ಳು.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.