ಅಭ್ಯುದಯ ಪತ್ರಿಕೋದ್ಯಮ ಜಿಲ್ಲೆಯ ಅಭಿವೃದ್ಧಿಯ ವೇಗವರ್ಧಕ

ಉದಯವಾಣಿಯ ಕುಗ್ರಾಮ ಗುರುತಿಸಿ ಯೋಜನೆ

Team Udayavani, Jan 1, 2020, 7:34 AM IST

ms-16

ಈ ಐವತ್ತು ವರ್ಷಗಳಲ್ಲಿ ಉದಯವಾಣಿ ತನ್ನ ಸಾಮಾಜಿಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಅಭಿವೃದ್ಧಿ ಮತ್ತು ಪ್ರಗತಿಗೆ ಬೆಂಗಾವಲಾಗಿದೆ. 80ರ ದಶಕದಲ್ಲಿ ನಡೆದ “ಕುಗ್ರಾಮ ಗುರುತಿಸಿ’ ಅಭಿಯಾನ ಪತ್ರಿಕೋದ್ಯಮದಲ್ಲಿ ಇಂದಿಗೂ ಒಂದು ಮೈಲುಗಲ್ಲು.

ಉ  ದಯವಾಣಿ ಪತ್ರಿಕೆಯ ಜತೆಜತೆಗೇ ನಿರಂತರವಾಗಿ ಗುರುತಿಸಿಕೊಳ್ಳುತ್ತಿದೆ ಉದಯವಾಣಿಯ “ಕುಗ್ರಾಮ ಗುರುತಿಸಿ’ ಯೋಜನೆ. ಅಭ್ಯುದಯ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯವನ್ನು ಬರೆದ ಈ ಅಭಿಯಾನಕ್ಕೆ ರಾಜ್ಯ, ರಾಷ್ಟ್ರ ಮಾತ್ರವಲ್ಲ; ಅಂತಾರಾಷ್ಟ್ರೀಯ ಮನ್ನಣೆಯೂ ಲಭಿಸಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆಮೂಲೆಗೂ ತಲುಪಿದ ಈ ಅಭಿಯಾನ ಜಿಲ್ಲೆಯ ಸಮಗ್ರ- ವಿಶೇಷವಾಗಿ, ಯಾವುದೇ ಮೂಲ ಸೌಕರ್ಯಗಳು ಇಲ್ಲದಿದ್ದ ಗ್ರಾಮೀಣ ಪ್ರದೇಶಗಳ ಪ್ರಗತಿಗೆ ಮುನ್ನುಡಿ ಬರೆಯಿತು. ಜಿಲ್ಲೆ ದ. ಕನ್ನಡ ಮತ್ತು ಉಡುಪಿ ಜಿಲ್ಲೆಗಳಾಗಿ ವಿಭಜನೆ ಗೊಂಡಿದೆ. ಆದರೆ, ಕುಗ್ರಾಮ ಗುರುತಿಸಿಗೆ ಸಂಬಂಧಿಸಿ ಉಭಯ ಜಿಲ್ಲೆಗಳು ಇಂದಿಗೂ ಫಲಾನುಭವಿಗಳಾಗಿವೆ.

ವಿಶೇಷವೆಂದರೆ, ಇದು
ಗ್ರಾಮೀಣ ಪ್ರದೇಶ ಮತ್ತು ಆಡಳಿತ ವ್ಯವಸ್ಥೆಯ ನಡು ವಣ ಸೇತುವೆಯಾಯಿತು. ಜನತೆ ತಮ್ಮ ಅಗತ್ಯಗಳ ಬಗ್ಗೆ ಸ್ಪಂದಿಸುವಂತಾಯಿತು. ಗ್ರಾಮೀಣ ಜನತೆ, ಸಂಘ ಸಂಸ್ಥೆಗಳು, ಸರಕಾರದ ವಿವಿಧ ಇಲಾಖೆಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಹಿತ ಹಣಕಾಸು ಸಂಸ್ಥೆಗಳು, ವಿವಿಧ ಸ್ತರಗಳ ಚುನಾಯಿತ ಜನಪ್ರತಿನಿಧಿ ಗಳು, ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳು, ಸಾರಿಗೆ ಸಹಿತ ಉದ್ಯಮ ಸಂಸ್ಥೆಗಳು ಮುಂತಾದವುಗಳೆಲ್ಲ ಒಟ್ಟಾಗಿ ಸ್ಪಂದಿಸಿದರು. ಸಮಾಜದ ಅತ್ಯಂತ ತುರ್ತಾದ ಅಗತ್ಯಗಳಿಗೆ ಅವರೆಲ್ಲರನ್ನು ಜತೆಯಾಗಿಸಿದ ವೇಗವರ್ಧಕ ಮತ್ತು ಸ್ಫೂರ್ತಿಯ ಶಕ್ತಿ ಎಂಬ ಮನ್ನಣೆಗೆ ಉದಯವಾಣಿ ಪಾತ್ರವಾಯಿತು.

80ರ ದಶಕದ ಕ್ರಾಂತಿ
ಕುಗ್ರಾಮ ಗುರುತಿಸಿ ಎಂಬ ಪರಿಕಲ್ಪನೆ ಸೃಷ್ಟಿಯಾದದ್ದು ಮತ್ತು ಯಶಸ್ವಿಯಾಗಿ ಅನುಷ್ಠಾನಗೊಂಡದ್ದು 80ರ ದಶಕದಲ್ಲಿ. ಪತ್ರಿಕೆಯ ಸ್ಥಾಪಕ ವ್ಯವಸ್ಥಾಪಕ ಸಂಪಾದಕ ಟಿ. ಮೋಹನದಾಸ ಪೈ ಅವರು ಮಾರ್ಗದರ್ಶಕರಾಗಿದ್ದರು. ಸ್ಥಾಪಕ ಸಂಪಾದಕ ಟಿ. ಸತೀಶ್‌ ಪೈ ಸಹಕಾರವಿತ್ತರು. ಆಗಿನ ಬೆಂಗಳೂರಿನ ಸುದ್ದಿ ವಿಭಾಗ ಮುಖ್ಯಸ್ಥ ಈಶ್ವರ ದೈತೋಟ (ಬಳಿಕ ಈ ಬಗ್ಗೆ ಕೃತಿಯನ್ನೂ ಪ್ರಕಟಿಸಿದ್ದಾರೆ) ಅವರು ಸಮಗ್ರ ಸಮನ್ವಯಕಾರರಾಗಿದ್ದರು.

ಈ ಯೋಜನೆಯ ಮೂಲ ಆಶಯದ ಉಲ್ಲೇಖೀತ ಸಾರಾಂಶ: ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ರಾಜ್ಯ ಅಥವಾ ಕೇಂದ್ರ ಸರಕಾರಗಳ ಪ್ರಾಯೋಜಿತ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪರಿಕಲ್ಪಿಸಲಾಗಿದೆ. ಆದರೆ, ಈ ಯೋಜನೆಗಳು ಜನತೆಗೆ- ವಿಶೇಷವಾಗಿ ಗ್ರಾಮೀಣ ಜನತೆಯ ಜೀವನ ವಿಧಾನದ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬ ಪ್ರಶ್ನೆ ಆಗಾಗ ಉದ್ಭವಿಸುತ್ತಿರುತ್ತದೆ. ಆಶ್ವಾಸನೆಗಳಿಗೂ ಅನುಷ್ಠಾನಕ್ಕೂ ಅಜಗಜಾಂತರವಿದೆ. ಈ ಅಂತರ ನಿವಾರಣೆಗೆ ಅಥವಾ ಕಡಿಮೆಗೊಳಿಸಲು ಜನತೆ ತಮ್ಮ ಮೂಲ ಸೌಕರ್ಯ ಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕು ಮತ್ತು ಅದನ್ನು ಪರಿಹರಿಸಿ ಕೊಳ್ಳಲು ಮುಂದಾಗಬೇಕು. ಮಣಿಪಾಲದಿಂದ ಪ್ರಕಟವಾದ ಉದಯವಾಣಿ ದಿನಪತ್ರಿಕೆ ಈ ಹಿನ್ನೆಲೆಯಲ್ಲಿ ಕುಗ್ರಾಮ ಗುರುತಿಸಿ ಎಂಬ ಯೋಜನೆಯ ಅನುಷ್ಠಾನಕ್ಕೆ ಮುಂದಾಯಿತು.

ಈ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ 2-1-1981ರಂದು ಯೋಜನೆಯ ಸ್ವರೂಪದ ಕುರಿತಾದ ಜಾಹೀರಾತು ಪ್ರಕಟವಾಯಿತು: ವಿವಿಧ ಸರಕಾರೀ ಸವಲತ್ತು, ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿ ಉದಯವಾಣಿಯು ಕುಗ್ರಾಮ ಗುರುತಿಸಿ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಇದರಲ್ಲಿ ಪತ್ರಿಕೆಯ ಓದುಗರ ಪಾತ್ರವೇ ನಿರ್ಣಾಯಕ. ಓದುಗರು 1) ತಮ್ಮ ಜಿಲ್ಲೆಯಲ್ಲಿ 2) ತಮ್ಮ ತಾಲೂಕಿನಲ್ಲಿ ಅತ್ಯಂತ ಹಿಂದುಳಿದ ಹಳ್ಳಿಗಳನ್ನು ಗುರುತಿಸಿ ಉದಯವಾಣಿಗೆ ತಿಳಿಸಬೇಕು. ಆಯ್ಕೆಯಾದ ವಿಜೇತರಿಗೆ ನಗದು ಬಹುಮಾನಗಳಿರುತ್ತವೆ.

ನಿರಂತರ ಮಾಹಿತಿ
ಎಲ್ಲ ಕುಗ್ರಾಮಗಳ ಅಭಿವೃದ್ಧಿ ಕಾರ್ಯಗಳ ನಿರಂತರ ಮಾಹಿತಿಯನ್ನು ಉದಯವಾಣಿ ಓದುಗರಿಗೆ ನೀಡುತ್ತಾ ಬಂತು. 1984ರಲ್ಲಿ ಈ ಅಭಿಯಾನ ಅದ್ಭುತವಾಗಿ ಸಾಕಾರಗೊಂಡ ಬಳಿಕದ ಎರಡು ವರ್ಷಗಳಲ್ಲಿ ಮತ್ತೆ ಇದೇ ರೀತಿಯ ಪ್ರಯತ್ನವನ್ನು ಮುಂದುವರಿದ ಭಾಗವಾಗಿ ನಡೆಸಿ, ಜನಜಾಗೃತಿಯನ್ನು ನಿರಂತರವಾಗಿರಿಸಲಾಯಿತು. ಈ ವೇಳೆಗೆ ಬಹುತೇಕ ಎಲ್ಲ ಕುಗ್ರಾಮಗಳ ಸಹಿತ ಜಿಲ್ಲೆಯ ಹಳ್ಳಿಗಳು ಸೌಲಭ್ಯಗಳನ್ನು ಪಡೆಯುವಂತಾಗಿತ್ತು. ಆ ಬಳಿಕ, ಉದಯವಾಣಿಯ 40ರ ಸಂದರ್ಭದಲ್ಲಿ ಪತ್ರಿಕೆಯ ವರದಿಗಾರರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಂಘಸಂಸ್ಥೆಗಳ ಸಹಯೋಗದಲ್ಲಿ ಅಗತ್ಯ ಸೌಲಭ್ಯಗಳ ಬಗ್ಗೆ ಒದಗಿಸಿದ ಮಾಹಿತಿಯನ್ನು ಪತ್ರಿಕೆ ಪ್ರಕಟಿಸಿ, ಸಂಬಂಧಿಸಿದವರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಅಪೂರ್ವ ಸ್ಪಂದನೆ
ಈ ಪ್ರಸ್ತಾವಕ್ಕೆ ಉದಯವಾಣಿ ಓದುಗರು ಅಪೂರ್ವ ಎಂಬ ರೀತಿಯಲ್ಲಿ ಸ್ಪಂದಿಸಿದರು. ಕುಗ್ರಾಮವೆಂದು ಗುರುತಿಸಲು ಆಯಾ ಪ್ರದೇಶದ 10 ಕೊರತೆಗಳ ಮಾನದಂಡವನ್ನು ಓದುಗರಿಗೆ ನೀಡಲಾಯಿತು: ಪ್ರಾಥಮಿಕ ಶಾಲೆ, ಮಾಧ್ಯಮಿಕ ಶಾಲೆ, ವಿದ್ಯುತ್‌, ಅಂಚೆ ಕಚೇರಿ, ದೂರವಾಣಿ, ವೈದ್ಯರು, ಆಸ್ಪತ್ರೆ, ಕುಡಿಯುವ ನೀರು, ರಸ್ತೆ, ಬಸ್‌ ಸೌಲಭ್ಯ. 35 + 15 ದಿನಗಳ ಅವಧಿ ಓದುಗರಿಗೆ ದೊರೆಯಿತು. 456 ಮಂದಿ ಓದುಗರು 417 ಹಳ್ಳಿಗಳು ಮತ್ತು ಹ್ಯಾಮ್ಲೆಟ್‌ಗಳನ್ನು ಅತ್ಯಂತ ಹಿಂದುಳಿದ ಕುಗ್ರಾಮಗಳೆಂದು ತಮ್ಮ ಅಭಿಪ್ರಾಯ ಬರೆದು ತಿಳಿಸಿದರು. 107 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಆಗ ಅವಿಭಜಿತ ಜಿಲ್ಲೆಯಲ್ಲಿ 8 ತಾಲೂಕುಗಳಿದ್ದವು. ಇಲ್ಲಿ ಮುಂದಿನ ಹಂತದ ಆಯ್ಕೆಗೆ ಶಾಸಕರ ಸಹಕಾರ ಕೋರಲಾಯಿತು. ಆಗ 15 ಶಾಸಕರಿದ್ದರು. ಹೀಗೆ, ಮುಂದಿನ ಹಂತದಲ್ಲಿ ಆರಿಸಲಾದ 30 ಹಳ್ಳಿಗಳಿಗೆ ಸಮನ್ವಯಕಾರರು ಭೇಟಿ ನೀಡಿದರು. ಮಾಹಿತಿ ಸಂಗ್ರಹಿಸಿದರು. ಆಲಂತಾಯ, ಬೆಳ್ಳರ್ಪಾಡಿ, ಬೊಳ್ಮನೆ, ದಿಡುಪೆ, ಕೆಮೂ¤ರು, ಕುದ್ಯಾಡಿ, ಮಾಳಚೌಕಿ, ಮಂಡೆಕೋಲು, ಮಾಣಿಲ, ನಾವುರಗಳನ್ನು ಗುರುತಿಸಲಾಯಿತು.

ಬೆಳ್ತಂಗಡಿಯ ದಿಡುಪೆ
ಅಂತಿಮವಾಗಿ, ಬೆಳ್ತಂಗಡಿ ತಾಲೂಕಿನ ದಿಡುಪೆ ಎಂಬ ಹಳ್ಳಿಯನ್ನು ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶವಾಗಿ -ಕುಗ್ರಾಮವೆಂದು ಗುರುತಿಸಿ, ಘೋಷಿಸಲಾಯಿತು. ಅದರ ವಿವರಗಳ ಜತೆ ಇತರ ಹಿಂದುಳಿದ ಹಳ್ಳಿಗಳ ಮಾಹಿತಿಯನ್ನೂ ಪ್ರಕಟಿಸಲಾಯಿತು. ಪಶ್ಚಿಮ ಘಟ್ಟದ ಬುಡದಲ್ಲಿನ ದಿಡುಪೆ ಪ್ರಕೃತಿ ಸೌಂದರ್ಯ-ಚಿಕ್ಕಪುಟ್ಟ ಅನೇಕ ಝರಿಗಳ ಸಹಿತವಾದ ಪ್ರದೇಶವಾಗಿತ್ತು. ಆಗ 1,300 ಜನಸಂಖ್ಯೆ. ದಟ್ಟ ಕಾನನದ ನಡುವಣ ಕಚ್ಚಾರಸ್ತೆಯಷ್ಟೇ ಸಂಪರ್ಕ ಮಾಧ್ಯಮ. ವೈದ್ಯಕೀಯ ಸೌಲಭ್ಯಕ್ಕೆ ಕನಿಷ್ಠ 11 ಕಿ.ಮೀ. ಕಾಲ್ನಡಿಗೆ. ಇದರ ಮುಂದಿನ ಹಂತ ಸ್ವಾರಸ್ಯಕರವಾಗಿತ್ತು. ಬಹುತೇಕ ಎಲ್ಲ ಇಲಾಖೆಗಳವರೂ ಸ್ಪಂದಿಸಿದರು. ರಸ್ತೆ ಮುಂತಾದ ಎಲ್ಲ ಮೂಲಸೌಕರ್ಯ ಆ ಊರಿಗೆ ಲಭಿಸಿತು. ಇದೇ ರೀತಿಯಲ್ಲಿ ಉದಯವಾಣಿ ಕುಗ್ರಾಮವೆಂದು ಗುರುತಿಸಿದ ವಸ್ತುಶಃ ಎಲ್ಲ ಪ್ರದೇಶಗಳಿಗೂ ಮೂಲಸೌಕರ್ಯ ದೊರೆಯಲಾರಂಭಿಸಿತು. ಮಾಣಿಲ ಮುಂತಾದ ಪ್ರದೇಶಗಳಿಗೆ ಬ್ಯಾಂಕ್‌ ಶಾಖೆಗಳೂ ದೊರೆತವು.ಉದಯವಾಣಿಯ ಈ ಯೋಜನೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಿತು. ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಕೆಲವು ದೇಶಗಳ ಪ್ರತಿನಿಧಿಗಳೂ ಅಧ್ಯಯನಕ್ಕೆ ಬಂದರು ಅನ್ನುವುದು ಈ ಪ್ರಸಿದ್ಧಿಗೆ ಸಾಕ್ಷಿ.

- ಮನೋಹರ ಪ್ರಸಾದ್‌

ಟಾಪ್ ನ್ಯೂಸ್

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

6-bantwala

Bantwala: ನೀರಿನ ಅಭಾವದಿಂದ ಕೃಷಿ ಹಾನಿ; ಮನನೊಂದು ಕೃಷಿಕ ಆತ್ಮಹತ್ಯೆ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

Viral: 1 ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡು ಗಿನ್ನೆಸ್​ ವಿಶ್ವ ದಾಖಲೆ ಬರೆದ ಯುವಕ

3-kollegala

Kollegala: ಖಾಸಗಿ ಬಸ್ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Revanna 2

Extended;ಎಚ್.ಡಿ.ರೇವಣ್ಣ ನ್ಯಾಯಾಂಗ ಬಂಧನ ಮೇ 14ರವರೆಗೆ ವಿಸ್ತರಣೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ

Bhupal: ʼಭೂಪೇಂದ್ರ ಜೋಗಿʼ ರೀಲ್ಸ್‌ ಖ್ಯಾತಿಯ ವ್ಯಕ್ತಿಗೆ ಅಪರಿಚಿತರಿಂದ ಚಾಕುವಿನಿಂದ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

15

Heavy Rain: ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನ ಗೋಡೆ ಕುಸಿದು 7 ಮಂದಿ ಸಾವು

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

ಚಿಕ್ಕಮಗಳೂರು: 436 ಗ್ರಾಮಗಳಲ್ಲಿ ಕುಡಿವ ನೀರಿನ ಅಭಾವ

7-

ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು: ಕೃತಜ್ಞತೆ, ಗೌರವ

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಏಕಾಏಕಿ ಯು-ಟರ್ನ್ ತೆಗೆದ ಟ್ರಕ್ ಚಾಲಕ… ಕಾರು ಡಿಕ್ಕಿ ಹೊಡೆದು 6 ಮಂದಿ ಸ್ಥಳದಲ್ಲೇ ಮೃತ್ಯು

ಪ್ರಜ್ವಲ್‌ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ

ಪ್ರಜ್ವಲ್‌ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.