ಚಿನ್ನು ಮೊಲ ಮತ್ತು ಬೇಟೆ ನಾಯಿ


Team Udayavani, Jan 2, 2020, 4:37 AM IST

aa-5

ಒಮ್ಮೆ ಚಿನ್ನು ಮೊಲ ತನ್ನ ಆಹಾರವನ್ನು ಹುಡುಕುತ್ತ ಹೊರಟಿತ್ತು.
“ಹಾಯ…, ಹುಲುಸಾದ ಹುಲ್ಲು ಇಲ್ಲಿದೆ! ದಿನಾಲೂ ಇಲ್ಲಿಗೆ ಬಂದರೆ ಸಾಕು, ನೆಮ್ಮದಿಯಿಂದ ಹೊಟ್ಟೆ ತುಂಬಿಸಿಕೊಳ್ಳಬಹುದು.’ ಎಂದುಕೊಳ್ಳುವಷ್ಟರಲ್ಲಿ
“ಬೌ ಬೌ, ಬೌ’ ನಾಯಿಯೊಂದು ಬೊಗಳಿದ ಸದ್ದು ಕೇಳಿಸಿತು.
ಬೇಟೆನಾಯಿ ಬರುತ್ತಿರಬಹುದು ಎಂದುಕೊಂಡ ಮೊಲ ಹುಷಾರಾಗಿಬಿಟ್ಟಿತು. ಅದರ ಕಿವಿ ನಿಮಿರಿ ನಿಂತಿತು.

“ಬೌ ಬೌ ಬೌ’ ಮತ್ತೆ ಸದ್ದು ಕೇಳಿತು.
ಬರುತ್ತಿರುವುದು ಬರೀ ನಾಯಿಗಳು ಮಾತ್ರವಲ್ಲ, ಅದರ ಜೊತೆ ಬೇಟೆಗಾರರೂ ಇರಬಹುದು ಎಂದು ಚಿನ್ನು ಮೊಲಕ್ಕೆ ಅನುಮಾನ ಬಂದಿತು. ತಾನು ಅವರ ಬಲೆಗೆ ಬೀಳುವ ಮುನ್ನ ತಪ್ಪಿಸಿಕೊಳ್ಳಬೇಕೆಂದು ಓಡಲು ಶುರು ಮಾಡಿತು ಮೊಲ. ಓಡುವಾಗ ದಾರಿಯಲ್ಲಿ ಕುದುರೆಯೊಂದನ್ನು ನೋಡಿತು. ಅದು ಮೊಲಕ್ಕಿಂತಲೂ ವೇಗವಾಗಿ ಓಡುತ್ತಿತ್ತು. ಮೊಲ ಕುದುರೆಯನ್ನು ಕೂಗಿ ಕರೆದು “ಕುದುರೆಯಣ್ಣಾ ನನ್ನನ್ನು ಹೇಗಾದರೂ ಮಾಡಿ ಕಾಪಾಡು!’ ಎಂದು ವಿನಂತಿಸಿಕೊಂಡಿತು.

“ಏನಾಯ್ತು?’ ಕುದುರೆ ಕೇಳಿತು.
“ಬೇಟೆ ನಾಯಿಗಳು ನನ್ನನ್ನು ಅಟ್ಟಿಸಿಕೊಂಡು ಬರುತ್ತಿವೆ. ನನ್ನನ್ನು ನಿನ್ನ ಬೆನ್ನ ಮೇಲೆ ಕೂರಿಸಿಕೊಂಡು ಈ ಜಾಗದಿಂದ ಕರೆದೊಯ್ದು ನನ್ನ ಪ್ರಾಣ ಉಳಿಸು’ ಎಂದು ಕೇಳಿಕೊಂಡಿತು ಚಿನ್ನು ಮೊಲ.
ಕುದುರೆಯಣ್ಣ “ನಾನೀಗ ತುರ್ತಾಗಿ ಬೇರೆ ಜಾಗಕ್ಕೆ ಹೋಗುತ್ತಿದ್ದೇನೆ. ಆದ್ದರಿಂದ ನಿನಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ.’ ಎಂದು ಹೇಳಿ ಕುದುರೆ ವೇಗದಿಂದ ಮುಂದೋಡಿತು.
ಚಿನ್ನು ಮೊಲ ಇನ್ನೇನು ಮಾಡುವುದೆಂದು ಯೋಚಿಸುತ್ತಿದ್ದಾಗ ದಾರಿಯಲ್ಲಿ ಎತ್ತು ಎದುರಾಯಿತು.

“ಎತ್ತಣ್ಣ… ನನ್ನನ್ನು ಕಾಪಾಡು’ ಎಂದು ಚಿನ್ನು ಮೊಲ ನಡೆದಿದ್ದನ್ನೆಲ್ಲಾ ಹೇಳಿತು.
ಎತ್ತು “ಅಯ್ಯೋ ನಾನೀಗ ಹೊಲ ಉಳಲು ಹೋಗಬೇಕಿದೆ. ಇಲ್ಲದಿದ್ದರೆ ರೈತ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತಾನೆ’ ಎಂದಿತು.

ಮೊಲ ತನ್ನ ಓಟವನ್ನು ಮುಂದುವರಿಸಿತ್ತು. ಇತರರ ಸಹಾಯವನ್ನು ಕೇಳಿದರೆ ಸಮಯ ಹಾಳು ಎಂದದಕ್ಕೆ ಅರ್ಥವಾಯಿತು. ಇನ್ನು ಯಾರ ಸಹಾಯವನ್ನೂ ಕೇಳದೆ ಇದೇ ವೇಗದಲ್ಲಿ ಓಡಿದರೆ ತಾನು ಬೇಟೆನಾಯಿಗಳಿಂದ ಬಚಾವಾಗುತ್ತೇನೆ ಎಂಬುದನ್ನರಿತ ಮೊಲ ಓಡಿತು. ಓಡುತ್ತಾ ಓಡುತ್ತಾ ಬೇಟೆನಾಯಿಗಳಿಂದ ರಕ್ಷಣೆ ಪಡೆಯಿತು.

– ಮೇಘನಾ

ಟಾಪ್ ನ್ಯೂಸ್

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Water Supply

Water scarcity; ಮಂಗಳೂರು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

1-CKDY

Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.