ನೀರ ನಡುವೆ ನರೇಂದ್ರ


Team Udayavani, Jan 11, 2020, 5:30 AM IST

39

ಹುಬ್ಬಳ್ಳಿಯ ಉಣಕಲ್ಲ ಕೆರೆಯ ಮಧ್ಯಭಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನೋಡುವುದೇ ಒಂದು ಪುಳಕ…

ಸುತ್ತಲೂ ನೀಲಿಸಾಗರ. ಆಳೆತ್ತರದ ಅಲೆಗಳು ಬಂಡೆಗಲ್ಲಿಗೆ ಬಡಿಯುವ ನಿರಂತರ ದೃಶ್ಯ. ಆ ಬಂಡೆಯ ಮೇಲಿನ ದಿವ್ಯಮಂದಿರದ ಒಳಗೆ, ವಿವೇಕಾನಂದರ ಧೀರೋದಾತ್ತ ಮೂರ್ತಿ ತನ್ನ ಧ್ಯಾನಾವಸ್ಥೆಯಿಂದಲೇ ರೋಮಾಂಚನ ಹುಟ್ಟಿಸುತ್ತದೆ… ಇದು ಕನ್ಯಾಕುಮಾರಿಯ ನೋಟ. ಹುಬ್ಬಳ್ಳಿಯಲ್ಲಿನ ವಿವೇಕಾನಂದರ ಮೂರ್ತಿ ಇರುವುದೂ, ನೀರಿನ ನಡುವೆಯೇ. ಇಲ್ಲಿ ಅಲೆಗಳಿಲ್ಲ. ಅಂಥ ದೊಡ್ಡ ಬಂಡೆಗಳೂ ಇಲ್ಲ. ಆದರೆ, ಪ್ರವಾಸಿಗರನ್ನು ಸೆಳೆಯುವಲ್ಲಿ ಈ ನರೇಂದ್ರನೂ ಹಿಂದೆ ಬಿದ್ದಿಲ್ಲ.

ಇಲ್ಲಿನ ಉಣಕಲ್ಲ ಕೆರೆಯ ಮಧ್ಯಭಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನೋಡುವುದೇ ಒಂದು ಪುಳಕ. ಸುಮಾರು 213 ಎಕರೆ ವಿಸ್ತೀರ್ಣದಲ್ಲಿರುವ ಕೆರೆಯ ಮಧ್ಯ ಭಾಗದಲ್ಲಿ 16 ವರ್ಷಗಳ ಹಿಂದೆ ಪ್ರತಿಷ್ಠಾಪನೆಗೊಂಡಿರುವ ಸ್ವಾಮಿ ವಿವೇಕಾನಂದರ 14 ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರವಾಸಿಗರಿಗೆ ಆಕರ್ಷಣೀಯ ಸ್ಥಳ.

12ನೇ ಶತಮಾನದಲ್ಲಿ ಉಳವಿ ಚನ್ನಬಸವೇಶ್ವರರು ಪೂಜಿಸಿದ ಸ್ಥಳ ಉಣಕಲ್ಲ ಕೆರೆ. ಅದಾದ ನಂತರ ಸರ್‌ ಎಂ. ವಿಶ್ವೇಶ್ವರಯ್ಯನವರು ಹುಬ್ಬಳ್ಳಿ ಮಹಾನಗರಕ್ಕೆ ಕುಡಿವ ನೀರು ಸರಬರಾಜು ಮಾಡುವ ಯೋಜನೆಗೆ ಉಣಕಲ್ಲ ಕೆರೆಯನ್ನು ಆಯ್ಕೆ ಮಾಡಿ, ನೀಲನಕ್ಷೆ ತಯಾರಿಸಿದ್ದರು. ಆ ಬಳಿಕ ಹುಬ್ಬಳ್ಳಿಯ ಮನೆಗಳಿಗೆ, ಇಲ್ಲಿಂದಲೇ ಕುಡಿವ ನೀರು ಪೂರೈಕೆ ಆಯಿತು.

ಈ ಕೆರೆಗೆ ವಿವೇಕ ಕಳೆ ಬಂದಿದ್ದು, 2004ರಲ್ಲಿ. ಮುಂಬೈಯಿಂದ ತಂದ 14 ಅಡಿ ಎತ್ತರದ ಕಂಚಿನ ಮೂರ್ತಿ, ಉಣಕಲ್ಲ ಜಲರಾಶಿಯ ರೂಪವನ್ನೇ ಬದಲಿಸಿತು. ಪ್ರತಿವರ್ಷ ವಿವೇಕಾನಂದ ಜಯಂತಿ ಬಂದಾಗಲೆಲ್ಲ, ಇಲ್ಲಿ ವಿದ್ಯುತ್‌ ದೀಪಾಲಂಕಾರ, ಈ ಮೌನಮೂರ್ತಿಯನ್ನು ಬೆಳಗುತ್ತವೆ. ಧೀರಸನ್ಯಾಸಿಯನ್ನು ಹತ್ತಿರದಿಂದ ದರ್ಶಿಸಿ ಬರಲು, ಬೋಟಿಂಗ್‌ ವ್ಯವಸ್ಥೆಯೂ ಇಲ್ಲುಂಟು.

– ಬಸವರಾಜ ಹೂಗಾರ

ಟಾಪ್ ನ್ಯೂಸ್

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

ಸಿ.ಟಿ.ರವಿ

Belagavi; ಪ್ರಜ್ವಲ್ ಪ್ರಕರಣವು ಚುನಾವಣೆಗೆ ಪ್ರಭಾವ ಬೀರುತ್ತದೆ: ಸಿ.ಟಿ.ರವಿ

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

BJP 2

UP; ಬ್ರಿಜ್ ಭೂಷಣ್ ಪುತ್ರನನ್ನು ಕಣಕ್ಕಿಳಿಸಿದ ಬಿಜೆಪಿ: ರಾಯ್ ಬರೇಲಿಯಿಂದ ಸಚಿವ

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

Gujjadi: ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

Gujjadi: ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

Road mishap: ಮಿನಿ ಟೆಂಪೋ ಚಾಲಕನಿಗೆ ಅಪರಿಚಿತ ವಾಹನ ಢಿಕ್ಕಿ; ತೀವ್ರ ಗಾಯ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.