ಗಾಳಿಯಲ್ಲಿ ಪಟ ಚಿತ್ರವು

ಮಂಗಳೂರಿನ ಆಗಸದಲ್ಲಿ ಬಣ್ಣದ‌ ಹಕ್ಕಿಗಳು

Team Udayavani, Jan 19, 2020, 4:42 AM IST

meg-7

ಎರಡು ಊರುಗಳ ನಡುವಣ ದೂರವನ್ನು ಅಳೆಯಲು, ಸೇನಾ ಮಾಹಿತಿಯನ್ನು ಕಳುಹಿಸಲು ಅಥವಾ ಒಂದೆಡೆಯಿಂದ ಇನ್ನೊಂದೆಡೆಗೆ ಸಂದೇಶ ರವಾನಿಸಲು ಹಿಂದಿನ ಕಾಲದಲ್ಲಿ ಗಾಳಿಪಟವನ್ನು ಬಳಸುತ್ತಿದ್ದರಂತೆ. ಚೀನಾದವರಂತೂ ಈ ಗಾಳಿಪಟ ತಂತ್ರವನ್ನೇ ಬಳಸಿ ಯುದ್ಧ ತಂತ್ರ ಹೂಡಿದ ಕತೆಗಳಿವೆ. ಅದಿರಲಿ, ತುಳುನಾಡಿನ ಮುಟ್ಟಾಳೆಯನ್ನೋ, ಕೇರಳದ ಕಥಕ್ಕಳಿಯನ್ನೋ ಅಥವಾ ನಮ್ಮ ಯಕ್ಷಗಾನವನ್ನೊ ವಿದೇಶಗಳಲ್ಲಿ ಪರಿಚಯಿಸಲು ಟೀಮ್‌ ಮಂಗಳೂರು ಗಾಳಿಪಟವನ್ನೇ ಬಳಸಿಕೊಂಡಿದೆ.

ಕಲಾವಿದ ಸರ್ವೇಶ್‌ ರಾವ್‌ ರೂಪಿಸಿರುವ ಟೀಮ್‌ ಮಂಗಳೂರು ಹಲವು ಬಾರಿ ವಿದೇಶಗಳಲ್ಲಿ ನಡೆದ ಗಾಳಿಪಟ ಉತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಿದೆ. ಅದೇ ರೀತಿ ಗಾಳಿಪಟ ಹಾರಿಸುವ ಪ್ರಕ್ರಿಯೆಯನ್ನು ಮಂಗಳೂರಿನಲ್ಲಿಯೂ ಹಬ್ಬವಾಗಿಸಿ, ಸ್ಥಳೀಯರಿಗೂ ಪಟದ ವೈವಿಧ್ಯವನ್ನು ಉಣಬಡಿಸಿದವರು. ಚಳಿಗಾಲದ ತಂಪು ಗಾಳಿಯನ್ನು ಸೀಳಿಕೊಂಡು ಹಾರುವ ಬಣ್ಣದ ಪಟಗಳ ಉತ್ಸವ ಜನವರಿ 17ರಂದೇ ಆರಂಭವಾಯಿತು.

ಈ ಬಾರಿ, ಚೀನಾ, ಇಸ್ರೇಲ್‌, ಥೈಲ್ಯಾಂಡ್‌, ಇಂಡೋನೇಷ್ಯಾ, ನೆದರ್‌ಲ್ಯಾಂಡ್‌, ಸ್ವೀಡನ್‌ನ್‌ ದೇಶಗಳ ಪಟಗಳು ಪಣಂಬೂರು ಕಡಲ ದಂಡೆಯಲ್ಲಿ ಹಾರಾಡಿದವು. ವಿದೇಶಗಳ ಏರೋಫಾಯಿಲ್‌ ಗಾಳಿಪಟಗಳ ಜೊತೆಗೆ ಮಂಗಳೂರಿನ ಕಲಾಕುಸುರಿಯ ಪಟಗಳು ಮತ್ತಷ್ಟು ಆಕರ್ಷಕವಾಗಿ ಕಂಡವು. ಹೈದರಾಬಾದ್‌, ಬೆಂಗಳೂರು, ಮುಂಬೈ, ಉದಯ್‌ಪುರ ಸೇರಿದಂತೆ ಒಟ್ಟು 21 ತಂಡಗಳು ಗಾಳಿಪಟ ಹಾರಿಸಿ ಸಂಭ್ರಮಿಸಿದವು.

ಈ ಗಾಳಿಪಟ ಉತ್ಸವದಲ್ಲಿ ಮಾತಿಗೆ ಸಿಕ್ಕ ನೆದರ್‌ಲ್ಯಾಂಡ್ಸ್‌ನ ಎಂಜಿನಿಯರ್‌ ರೇಮಂಡ್‌ ಡಿ ಗ್ರಾಫ್ ಭಾರತದ ಗಾಳಿಪಟಗಳನ್ನು ತುಂಬ ಇಷ್ಟಪಟ್ಟವರು. “ಭಾರತ ಸಾಂಸ್ಕೃತಿಕ ಹಿನ್ನೆಲೆಯೇ ಅತ್ಯಂತ ಶ್ರೀಮಂತವಾಗಿದೆ. ಆದ್ದರಿಂದ ಕಥಕಳಿ, ಯಕ್ಷಗಾನದ ಗಾಳಿಪಟಗಳಲ್ಲಿ ಬಣ್ಣಗಳ ವೈಭವ ಎದ್ದು ಕಾಣುತ್ತದೆ. ಫ್ರಾನ್ಸ್‌ನಲ್ಲಿ ಟೀಮ್‌ ಮಂಗಳೂರು ತಂಡದ ಸದಸ್ಯರು ಹಾರಿಸಿದ ಪಟಗಳನ್ನು ನೋಡಿ, ನನಗೆ ಭಾರತಕ್ಕೆ ಭೇಟಿ ನೀಡಬೇಕು ಎನಿಸಿತು. ಇಲ್ಲಿ ಈ ಹಿಂದೆಯೂ ಬಂದಿದ್ದೇನೆ. ಇಲ್ಲಿನ ಆಯುರ್ವೇದ ಔಷಧೀಯ ಬಗ್ಗೆಯೂ ನನಗೆ ಬಹಳ ಗೌರವ ಮೂಡಿದೆ. ಅದು ನನ್ನ ಅನಾರೋಗ್ಯವನ್ನು ಗುಣಪಡಿಸಿದೆ. ಮಂಗಳೂರು ನಗರದಲ್ಲಿ ನಾನು ಸ್ಥಳೀಯ ಕಲಾಪ್ರಕಾರಗಳ ಬಗ್ಗೆ ತುಂಬಾ ಹುಡುಕಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಇಲ್ಲಿ ಬಣ್ಣಗಳ ಮೇಳೈಸುವಿಕೆಯು ನನ್ನ ಕಲ್ಪನೆಯನ್ನು ತುಂಬ ವಿಸ್ತರಿಸಿದೆ’ ಎಂದು ಹೇಳುತ್ತ ಪಟ ಹಾರಿಸಲು ಸಜ್ಜಾದರು.

2006ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಅಂತ‌ರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮೊತ್ತಮೊದಲು ಗಾಳಿಪಟ ಹಾರಿಸಿದ ಟೀಮ್‌ ಮಂಗಳೂರು ತಂಡ ಇದೀ ಗಾಳಿಪಟ ಸಂಸ್ಕೃತಿಯನ್ನು ರೂಪಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿನೇಶ್‌ ಹೊಳ್ಳ, ಗಿರಿಧರ್‌ ಕಾಮತ್‌, ಪ್ರಶಾಂತ ಉಪಾಧ್ಯಾಯ, ವಿ.ಕೆ. ಸನಿಲ್‌, ಸತೀಶ್‌ ರಾವ್‌, ಪ್ರಾಣೇಶ್‌, ಅರುಣ್‌ ಕುಮಾರ್‌, ಶಶಾಂಕ್‌, ಸುಭಾಷ್‌ ಪೈ, ಪ್ರಾಣ್‌, ಜನಾರ್ದನ್‌ ಗಾಳಿಪಟ ಪ್ರೀತಿಯ ಕಲಾವಿದರು. ಇಂದು (ಜ.19) ಸಂಜೆ ಗಾಳಿಪಟ ಉತ್ಸವದ ಸಮಾರೋಪದಲ್ಲಿ ಮಂಗಳೂರಿನ ಪಣಂಬೂರು ಕಡಲ ದಂಡೆಯ ಆಕಾಶದಲ್ಲಿ ಟೀಮ್‌ ಮಂಗಳೂರು ಬಣ್ಣ ಬಣ್ಣದ ಪಟಗಳ ಮೂಲಕ ಚಿತ್ರಬಿಡಿಸಲಿದೆ.

ಶಾಲಿನಿ

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.