ಮಳೆ ಬಂದರೆ ಹುಲ್ಲು, ಬರ ಬಂದರೆ ಬಣವೆ…


Team Udayavani, Feb 3, 2020, 5:00 AM IST

filler–Keelu-Banive

ವರ್ಷ ಪೂರ್ತಿ ಮೇವನ್ನು ಕೆಡದ ಹಾಗೆ ಸಂರಕ್ಷಿಸಲು ರೈತರು ಬಣವೆಯನ್ನು ಒಟ್ಟುತ್ತಾರೆ. ಮಳೆ- ಬಿಸಿಲಿನಿಂದ ಹಾನಿಯಾಗದಂತೆ ಬಣವೆಯನ್ನು ಒಟ್ಟುವುದು ಜಾಣ್ಮೆಯ ಕಲೆ.

ದನ-ಕರುಗಳಿಗೆ ಆಹಾರಕ್ಕಾಗಿ ಉಪಯೋಗಿಸುವ ಮೇವು ಮರುವರ್ಷ ಬೆಳೆ ಬರುವವರೆಗೆ ಆಸರೆಯಾಗುತ್ತದೆ. ಇದನ್ನು ವರ್ಷ ಪೂರ್ತಿ ಕೆಡದ ಹಾಗೆ ಸಂರಕ್ಷಿಸಲು ಹಿಂದೆ ರೈತರು ಬಣವೆಯನ್ನು ಒಟ್ಟುತ್ತಿದ್ದರು. ಬಿಸಿಲಿಗೆ ಅದು ಬಂಗಾರದ ಬಣ್ಣ ಪಡೆಯುತ್ತಿದ್ದುದರಿಂದ ಅದನ್ನು “ಬಂಗಾರದ ಬಣವೆ’ ಎಂದೂ ಕರೆಯುತ್ತಿದ್ದರು. ಗಾಳಿ, ಸಿಡಿಲು, ಮಳೆಯಿಂದ ಯಾವುದೇ ರೀತಿ ಬಣವೆಗೆ ಅಪಾಯ ಆಗದೆ ಇರಲಿ ಎಂದು ಒಳ್ಳೆಯ ದಿನ ನಕ್ಷತ್ರ ನೋಡಿ ಒಟ್ಟಲು ಪ್ರಾರಂಭಿಸುತ್ತಾರೆ. ಅದರ ಮುಕ್ತಾಯಕ್ಕೂ ಒಳ್ಳೆಯ ದಿನ ನೋಡುತ್ತಾರೆ. ಬಣವೆಯಲ್ಲಿ ಎರಡು ವಿಧ‌ಗಳಿವೆ. ಹಿಂದಿನ ತಲೆಮಾರಿನಿಂದ ಬಂದದ್ದು “ಕೀಲು ಬಣವೆ’. ಇನ್ನೊಂದು ಹೊಲದಲ್ಲಿ ಒಟ್ಟುವುದು “ಮಾಳಿಗೆ ಬಣವೆ’.

ಒಟ್ಟುವ ಪ್ರಕ್ರಿಯೆ
ಹಿಂದಿನ ಕಾಲದಲ್ಲಿ ರಾಶಿ ಮಾಡುವ ಯಂತ್ರ ಇಲ್ಲದಿದ್ದರಿಂದ ಸುಗ್ಗಿ ಕಾಲ ಬಂದರೆ ಬಿತ್ತನೆ ಮಾಡಿದ ಬೆಳೆಯ ರಾಶಿ ಮಾಡಲು ರೈತರು ವಾರಪೂರ್ತಿ ಹೊಲದಲ್ಲಿಯೇ ಬಿಡಾರ ಹೂಡುತ್ತಿದ್ದರು. ಹೊಲದಲ್ಲಿ ತೆನೆ ಮುರಿದು ಮೇವಿನ ಚಾಪನ್ನು ಹಾಕಿ ಬಂಡಿಯಲ್ಲಿ ತಂದು, ಊರಿಗೆ ಸಮೀಪವಿರುವ ದಡ್ಡಿಯಲ್ಲಿ ಒಟ್ಟುತ್ತಿದ್ದರು. ಮಳೆಗೆ ಹಾನಿಯಾಗದಂತೆ ಬಣಿವೆಯನ್ನು ಒಟ್ಟುವುದೂ ಜಾಣ್ಮೆಯ ಕಲೆ. ಮೊದಲು ನೆಲದ ಮೇಲೆ ಕೆಂಪು ಮಣ್ಣನ್ನು ಹಾಕಿ ಅಡಿಪಾಯದಂತೆ ಕೀಲು ಸೂಡು ಹಾಕಿ ಅದರ ಮೇಲೆ ಸೂಡುದಾರ ಹಾಕುತ್ತಾ ಮಧ್ಯಭಾಗದ ಹಂತ ಬರುವವರೆಗೆ ಸ್ವಲ್ಪ ಅಗಲವನ್ನು ಕಡಿಮೆ ಮಾಡುತ್ತಾ ಪುನಃ ಅಲ್ಲಿಂದ ಅಗಲ ಮಾಡುತ್ತಾ ಬಣವೆ ಸುತ್ತಲೂ ಬಡಮಣಿಯಿಂದ ಬಡಿಯುತ್ತಾ ಕ್ರಮಬದ್ಧವಾಗಿ ಒಟ್ಟುತ್ತಾರೆ. ಮುಕ್ತಾಯದ ಹಂತ ಬರುವಷ್ಟರಲ್ಲಿ ಬಣವೆ, ಕುದುರೆ ದೇಹದ ಆಕಾರ ಪಡೆಯುತ್ತದೆ.

ಜೋಳದ ದಂಟಿನ ಬೇರು ಭಾಗವಾದ ಬುಡುಚಿಯನ್ನು 1 ಅಡಿಯಷ್ಟು ಸುತ್ತಲೂ ಹೊರಗೆ ಮುಖ ಮಾಡಿ ಅದರ ಮೇಲೆ ಅಗಸಿ ಹೊಟ್ಟು ಹಾಕಿ ಮತ್ತದರ ಮೇಲೆ ಹಾಳು ಮಣ್ಣು ಹಾಕುತ್ತಾರೆ. ನಡುವೆ ಕೀಲನ್ನು ಹಾಕುವುದರ ಉದ್ದೇಶ, ಮಳೆ- ಗಾಳಿಗೆ ಬಣವೆ ಬೀಳದಂತೆ ಗಟ್ಟಿಯಾಗಿ ಹೊಯ್ದಾಡದೆ ನಿಲ್ಲಲಿ ಎಂದು. ಮಳೆಯಾದರೆ ಹನಿ ನೀರೂ ನಿಲ್ಲದ ಹಾಗೆ ಬಣವೆ ಒಟ್ಟುವ ಈ ಕಲೆ ವಿಶಿಷ್ಟವಾದುದು.

ಚಿತ್ರ- ಲೇಖನ: ಶ್ರೀಶೈಲ ಹೊಸಮನಿ

ಟಾಪ್ ನ್ಯೂಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

1-weqwwqe

Birla; ಸಂಗೀತ ಕ್ಷೇತ್ರ ತೊರೆಯುವ ಕಠಿನ ನಿರ್ಧಾರ ತಳೆದ ಅನನ್ಯಶ್ರೀ ಬಿರ್ಲಾ

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್

ʼಸಲಾರ್‌ʼನ ʼಶಿವ್‌ ಮನ್ನಾರ್‌ʼಗೂ ʼಕೆಜಿಎಫ್‌ʼಗೂ ಇದ್ಯಾ ಲಿಂಕ್: ಸುಳಿವು ಕೊಟ್ಟ ಪೃಥ್ವಿರಾಜ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

ಆಟೋ ಚಾಲಕಿಯರ ಬ್ಯಾಂಕ್‌ ಸಾಲ ತೀರಿಸಿ ರಿಯಲ್‌ ಲೈಫ್‌ನಲ್ಲೂ ಹೀರೋ ಆದ ನಟ ರಾಘವ ಲಾರೆನ್ಸ್

1-araga

Pendrive Case: ರಾಜಕೀಯವಾಗಿ ಒಂದು ಕುಟುಂಬ ಮುಗಿಸಲು ತಂತ್ರ: ಆರಗ ಜ್ಞಾನೇಂದ್ರ

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

Mangaluru: ನೇಮೋತ್ಸವದಲ್ಲಿ ಭಾಗಿಯಾಗಿ ಹರಕೆ ಸಲ್ಲಿಸಿದ ʼಕೆಜಿಎಫ್ʼ ನಟಿ ಶ್ರೀನಿಧಿ

1-wewewqeeq

Relaxed mood; ಮೊಮ್ಮಗಳೊಂದಿಗೆ ಆಟವಾಡಿದ ಕೇಂದ್ರ ಸಚಿವ‌ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.