ಮದುವೆಯಾದ ಮಗ ಬದಲಾಗಿದ್ದೇಕೆ?

ಸ್ವಾತಂತ್ರ್ಯದ ಜೊತೆಗೆ ಹೊಣೆಗಾರಿಕೆಯೂ ಮುಖ್ಯ

Team Udayavani, Feb 5, 2020, 4:51 AM IST

feb-4

ವಿವಾಹ ವಾರ್ಷಿಕೋತ್ಸವದ ದಿನ ಹೋಟೆಲ್‌ನ ಊಟಕ್ಕೆ ಅತ್ತೆ-ಮಾವ ಬರುವುದು ಅವಳಿಗೆ ಇಷ್ಟವಿರಲಿಲ್ಲ. ಅಮ್ಮನಿಗೆ ಈ ವಿಚಾರ ತಿಳಿದರೆ, ನೋವಾಗುತ್ತದೆಂದು, ಅಪ್ಪನ ಬಳಿ ಮಗ ತನ್ನ ಸಂದಿಗ್ಧವನ್ನು ತಿಳಿಸಿದ್ದಾನೆ. “ಮನೆ ಕೆಲಸದ ಸಹಾಯಕ್ಕೆ ಬೇಕು, ಸಂಭ್ರಮಕ್ಕೆ ಬೇಡವಾದೆವಾ?’ ಎಂದು, ವಿಶ್ವನವರು ತಮ್ಮ ದೊಡ್ಡ ಮಗನಿಗೆ ಫೋನ್‌ ಮಾಡಿ, ತಕ್ಷಣವೇ ಊರಿಗೆ ವಾಪಸ್ಸು ಹೊರಡಲು ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿಸಿಯೇಬಿಟ್ಟರು.

ಹಿರಿಯರಾದ ರಾಜೇಶ್ವರಿ ಮತ್ತು ವಿಶ್ವ ದಂಪತಿಗೆ ಇಬ್ಬರು ಗಂಡುಮಕ್ಕಳು. ಇಬ್ಬರೂ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ಸೊಸೆಯಂದಿರೂ ವಿದ್ಯಾವಂತರು, ಅವರೂ ಒಳ್ಳೆಯ ಕೆಲಸದಲ್ಲಿದ್ದಾರೆ. ಮುದ್ದಿನ ಮೊಮ್ಮಕ್ಕಳಿದ್ದಾರೆ. ಕಳೆದ ವಾರವಷ್ಟೇ ಅವರಿಬ್ಬರು ತಮ್ಮ ಮಕ್ಕಳ ಮನೆಯಿಂದ ಹಿಂತಿರುಗಿದ್ದಾರೆ. ಮಕ್ಕಳ ಮನೆಯ ವಾಸ/ಪ್ರವಾಸ ಅವರಿಗೇಕೋ ಹಿತವೆನಿಸಿಲ್ಲ. ನನ್ನ ಬಳಿ ಬರುತ್ತಲೇ ಕೇಳಿದ ಪ್ರಶ್ನೆ, “ಮದುವೆಯಾದ ಮೇಲೆ ಗಂಡು ಮಕ್ಕಳು ಗುರುತು ಸಿಗದಂತೆ ಬದಲಾಗ್ತಾರಲ್ಲಾ, ಏಕೆ ಮೇಡಂ?’ ಸೊಸೆಯಂದಿರು ತಮ್ಮ ಗಂಡು ಮಕ್ಕಳನ್ನು ಹೈಜಾಕ್‌ ಮಾಡಿಕೊಂಡಿರುವ ಅನುಭವ ಅವರಿಗಾಗಿದೆ. ವಯಸ್ಸಾದ ಮೇಲೆ ಮಕ್ಕಳಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬುದು ಅವರ ಚರ್ಚೆಯ ವಿಷಯ.

ಹಿಂದೆ, ಚಿಕ್ಕ ಸೊಸೆ ಚೊಚ್ಚಲ ಗರ್ಭಿಣಿಯಾದಾಗ, ಮಗ-ಸೊಸೆಯ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಬೇರೆ ಇತ್ತು. ಅವಳಿಗೆ ಆರೈಕೆ ಮಾಡಲು ಮಗನ ಆಹ್ವಾನದ ಮೇರೆಗೆ, ಮಗನ ಮನೆಗೆ ಹೋದಾಗ, ಸೊಸೆ ಚೆನ್ನಾಗಿಯೇ ನಡೆದುಕೊಂಡಿದ್ದಳು. ಆದರೆ, ವಿವಾಹ ವಾರ್ಷಿಕೋತ್ಸವದ ದಿನ ಹೋಟೆಲ್‌ನ ಊಟಕ್ಕೆ ಅತ್ತೆ-ಮಾವ ಬರುವುದು ಅವಳಿಗೆ ಇಷ್ಟವಿರಲಿಲ್ಲ. ಅಮ್ಮನಿಗೆ ಈ ವಿಚಾರ ತಿಳಿದರೆ, ನೋವಾಗುತ್ತದೆಂದು, ಅಪ್ಪನ ಬಳಿ ಮಗ ತನ್ನ ಸಂದಿಗ್ಧವನ್ನು ತಿಳಿಸಿದ್ದಾನೆ. “ಮನೆ ಕೆಲಸದ ಸಹಾಯಕ್ಕೆ ಬೇಕು, ಸಂಭ್ರಮಕ್ಕೆ ಬೇಡವಾದೆವಾ?’ ಎಂದು, ವಿಶ್ವನವರು ತಮ್ಮ ದೊಡª ಮಗನಿಗೆ ಫೋನ್‌ ಮಾಡಿ, ತಕ್ಷಣವೇ ಊರಿಗೆ ವಾಪಸ್ಸು ಹೊರಡಲು ವಿಮಾನದಲ್ಲಿ ಟಿಕೆಟ್‌ ಬುಕ್‌ ಮಾಡಿಸಿಯೇಬಿಟ್ಟರು. ಇತ್ತ ಕಡೆ, ದೊಡ್ಡ ಸೊಸೆಗೆ ವಿಮಾನದ ಖರ್ಚನ್ನು ತನ್ನ ಗಂಡ ಹೊತ್ತನಲ್ಲಾ ಎಂದು ಬೇಜಾರು. ಅದೇ ವಿಚಾರವಾಗಿ ಮಕ್ಕಳಿಬ್ಬರ ನಡುವೆ ಅಹಿತಕರವಾದ ಮಾತುಕತೆಯಾಗಿದೆ.

ಸ್ವಲ್ಪ ದಿನಗಳ ನಂತರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ರಾಜೇಶ್ವರಿಯವರು ಬದುಕುಳಿದಿದ್ದೇ ಹೆಚ್ಚು. ಅದು ಅವರಿಗೆ ಸಿಕ್ಕಿದ ಪುನರ್ಜನ್ಮ ಅಂತಲೇ ಹೇಳಬಹುದು. ಆದರೂ, ಮಕ್ಕಳಿಬ್ಬರು ತಾಯಿಯನ್ನು ನೋಡಲು ಬರಲಿಲ್ಲ. ತಾಯಿ ಫೋನು ಮಾಡಿದರೆ, ಉತ್ತರಿಸುತ್ತಲೂ ಇರಲಿಲ್ಲ. ಸೊಸೆಯಂದಿರು ಫೋನ್‌ ತೆಗೆದರೂ ಕ್ಲುಪ್ತವಾದ ಮಾತು. “ತಾಯಿಯಾಗಿ ನಾನು ಎಲ್ಲಿ ಎಡವಿದೆ?’ ಎಂದು ರಾಜೇಶ್ವರಿ ಬಹಳವಾಗಿ ನೊಂದುಕೊಂಡರು. ಮನೋಕ್ಲೇಶೆ ಉಂಟಾಗಿದ್ದೇ ಹೀಗೆ.

ಅರಿತು ನಡೆಯಬೇಕಾದ ಮಕ್ಕಳೇಕೆ ಎಡವುತ್ತಾರೆ? ಸ್ವಾರ್ಥ ಎಂದರೇನು, ತ್ಯಾಗ ಎಂದರೇನು, ಮೋಹ ಎಂಬುದು ಎಷ್ಟಿರಬೇಕು ಎಂಬಿತ್ಯಾದಿ ಜಿಜ್ಞಾಸೆಗಳಿಂದ ಆ ದಂಪತಿಯ ತಲೆಕೆಟ್ಟಿದೆ. ಆರ್ಥಿಕವಾಗಿ ರಾಜೇಶ್ವರಿ-ವಿಶ್ವ ಸಶಕ್ತರು. ಆದರೂ, ಭಾವನಾತ್ಮಕ ಸಂಬಂಧಗಳನ್ನು ಉಳಿಸಿಕೊಳ್ಳಲು ಜೀವನದಲ್ಲಿ ಮತ್ತೆ ಹೊಸ ಪಾಠ ಕಲಿಯಬೇಕು ನೋಡಿ ಎನ್ನುವಾಗ, ಇಬ್ಬರ ಕಣ್ಣಂಚಿನಲ್ಲೂ ನೀರಾಡುತ್ತಿತ್ತು. ಈ ಘಟನೆಯಲ್ಲಿ, ಹೊಂದಿಕೊಳ್ಳಬೇಕಾಗಿರುವುದು ಮಕ್ಕಳು ಎನಿಸಿತು.

ನಾನು, ಮಕ್ಕಳ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡಲು ಅವಕಾಶ ಮತ್ತು ಅನುಮತಿ ಕೋರಿದೆ. ಮಕ್ಕಳು-ಸೊಸೆಯಂದಿರು ತಕ್ಷಣ ಒಪ್ಪಿಕೊಂಡು, ಭಾಗವಹಿಸಿದರು. ಆನಂತರ, ಕೌಟುಂಬಿಕ ವಾತಾವರಣದಲ್ಲಿ ನೈತಿಕ ಹೊಣೆಗಾರಿಕೆಯನ್ನು ನಿಭಾಯಿಸುವುದರಿಂದ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುವುದಿಲ್ಲ ಎಂಬುದು ಮಕ್ಕಳಿಗೆ ಅರಿವಾಯಿತು. ನಡೆದ ಘಟನೆಗಳ ಸರಿ-ತಪ್ಪುಗಳ ವಿಶ್ಲೇಷಣೆಗಿಂತ, ಸಹಾನುಭೂತಿಯಿಂದ ಕೂಡಿದ ಸಂವಹನ ಮುಖ್ಯವೆಂಬುದನ್ನು ಎಲ್ಲರೂ ಮನಗಂಡರು. ಭಾವನಾತ್ಮಕವಾಗಿ ಹಿರಿಯರಿಗೆ ಹೃದಯಪೂರ್ವಕವಾಗಿ ಉತ್ತೇಜನ ನೀಡಿದರೆ, ಜೀವನ ಎಷ್ಟು ಹಗುರ ಎಂದು ಮಕ್ಕಳೆಲ್ಲರೂ ಅರಿತರು.

ಕೊನೆಯ ಮಾತು: ಜನ ಒಳ್ಳೆಯವರೇ ಆದರೂ ಒಂದು ಮಿಳ್ಳೆ ತುಪ್ಪಕ್ಕಾಗಿ ಕುಟುಂಬದಲ್ಲಿ ಅಪಾರ್ಥ ಬೇಡ.

ಟಾಪ್ ನ್ಯೂಸ್

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

1——asdsad

IPL ರೋಚಕ ಪಂದ್ಯ:ರಾಜಸ್ಥಾನ್‌ ವಿರುದ್ಧ ಹೈದರಾಬಾದ್ ಗೆ 1 ರನ್ ಜಯ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweewq

Modi ಕೈ ಬಲ ಪಡಿಸಲು ಜೋಶಿ ಗೆಲ್ಲಬೇಕು : ಏಕನಾಥ ಶಿಂಧೆ

rahul gandhi (2)

ನಾನು ರಾಹುಲ್‌ ಫಿಟ್ನೆಸ್‌ ಅಭಿಮಾನಿ: ಶಿವರಾಜ್‌ಕುಮಾರ್‌

eshwarappa

Modi ಫೋಟೋ ಬಳಕೆ ಹಕ್ಕು 140 ಕೋಟಿ ಜನರಿಗೂ ಇದೆ: ಈಶ್ವರಪ್ಪ

Exam 2

ಕೆಸೆಟ್‌: ತಾತ್ಕಾಲಿಕ ಅಂಕ ಪ್ರಕಟ

35

Siddaramaiah: ಚುನಾವಣೆ ಬಂದಾಗ ಮೋದಿಗೆ ರಾಜ್ಯದ ನೆನಪು; ಸಿದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.