ಇರುವುದೊಂದೇ ಜೀವ ಇರುವುದೊಂದೇ ಬದುಕು


Team Udayavani, Feb 23, 2020, 4:17 AM IST

ram-8

ಕಳೆದ ಆರು ದಶಕಗಳಿಂದ ಕನ್ನಡ ಸಾಹಿತ್ಯಾಧ್ಯಯನ, ಸಾಹಿತ್ಯಿಕ-ಸಾಮಾಜಿಕ ಮೌಲ್ಯಗಳನ್ನು ಸಮೀಕ್ಷಿಸುವ ಉದ್ದೇಶದ ಸಂಶೋಧನ ಕಾರ್ಯಗಳಲ್ಲಿ ನಿರತರಾಗಿ ಹಲವು ವರ್ಷಗಳ ಪ್ರಾಧ್ಯಾಪಕ ಹುದ್ದೆಯಲ್ಲಿದ್ದು ವಿದ್ಯಾರ್ಥಿಗಳ ವ್ಯಕ್ತಿತ್ವ ತಿದ್ದುವ ಕೆಲಸ, ಕೆಲಕಾಲ ಪ್ರಾಂಶುಪಾಲ ಹುದ್ದೆಯಲ್ಲಿದ್ದು ಸಂಸ್ಥೆ ಕಟ್ಟುವ ಶ್ರದ್ಧಾವಂತ ಕಾಯಕದಲ್ಲಿ ತೃಪ್ತಿ ಕಂಡವರು ಕಮಲಾ ಹಂಪನಾ. ಸಣ್ಣಕತೆ, ನಾಟಕ, ಆಧುನಿಕ ವಚನಗಳ ರಚನೆ, ಸುಮಾರು 80 ಕೃತಿಗಳ ಪ್ರಕಟನೆ- ಇವುಗಳ ಮೂಲಕ ಕರ್ನಾಟಕದ ಮನೆಮಾತಾಗಿರುವ ನಾಡೋಜ ಬಿರುದಾಂಕಿತೆ, ಅತ್ತಿಮಬ್ಬೆ ಪ್ರಶಸ್ತಿ ಪುರಸ್ಕೃತ ಲೇಖಕಿಯ ಒಂಬತ್ತು ಸಮಗ್ರ ಸಾಹಿತ್ಯ ಸಂಪುಟಗಳ ಪೈಕಿ ಇದು ಎಂಟನೆಯ ಸಂಪುಟವಾಗಿದೆ. ತಮ್ಮ ಬಾಲ್ಯ, ಯೌವನ ಕಾಲದ ನೆನಪುಗಳನ್ನು, ಜತೆಗೆ ವೃತ್ತಿ-ಪ್ರವೃತ್ತಿಗಳ ಫ‌ಲಶ್ರುತಿಗಳನ್ನು ಮೆಲುಕು ಹಾಕಿರುವ ಈ ಕೃತಿಯ ಶೀರ್ಷಿಕೆ, ಇದೇ ಕಾರಣಕ್ಕಾಗಿ ಅರ್ಥವತ್ತಾಗಿದೆ.

ಬಾಲ್ಯದಲ್ಲಿ ಕಂಡ ಬಡತನವನ್ನು ವಿದ್ಯಾರ್ಜನೆಯ ಹಾಗೂ ಸಾಹಿತ್ಯಪ್ರೀತಿಯ ಮೂಲಕ ಗೆದ್ದು ಸಂಶೋಧಕ ಪತಿ, ಹಂಪ. ನಾಗರಾಜಯ್ಯನವರ ಒಡನಾಟದಲ್ಲಿ ವಿದ್ವತ್‌ ತಪಶ್ಚರ್ಯೆ ಹಾಗೂ ಅಕ್ಷರಪ್ರೀತಿಯೊಂದಿಗೆ ದಾಂಪತ್ಯದ ಮಾಗುವಿಕೆಯೆಂದರೇನೆಂದು ಕಂಡುಕೊಂಡ ಲೇಖಕಿ ಮುಂದೆ ಕನ್ನಡನಾಡಿನ ಸಂಶೋಧಕಿ-ಬರಹಗಾರ್ತಿಯಾಗಿ ನಾಡಿನ ಸಾಹಿತಿಗಳು, ತನ್ನ ವಿದ್ಯಾರ್ಥಿಗಳು, ಸಹೋದ್ಯೋಗಿಗಳೊಂದಿಗಿನ ಒಡನಾಟವನ್ನು ವಿವರಿಸಿದ ಕುತೂಹಲಕಾರಿ ಕಥನ ಇದಾಗಿದೆ. ಈ ಬರಹವನ್ನು “ಆತ್ಮಚರಿತ್ರೆ’ ಅಥವಾ “ಆತ್ಮಕಥೆ’ ಎಂದು ಕರೆದುಕೊಳ್ಳುವ ಬದಲಿಗೆ “ಜೀವನಯಾನ’ ಎಂದು ಹೇಳಿಕೊಳ್ಳುವ ಮೂಲಕ “ಇರುವುದೊಂದೇ ಜೀವ, ಇರುವುದೊಂದೇ ಬದುಕು, ಅದ ಸಾರ್ಥಕ ಮಾಡಿಕೋ’ ಎನ್ನುವ ತನ್ನ ಖಚಿತ ನಿಲುವನ್ನು ಪ್ರಕಟಪಡಿಸಿದ್ದಾರೆ. “ಬಡತನದ ಬೇಗೆ, ಪ್ರೀತಿಯ ಬೆಂಕಿ ಇವೆರಡೂ ನನ್ನನ್ನು ಪುಟಕ್ಕಿಟ್ಟ ಚಿನ್ನದಂತೆ ಅಪರಂಜಿಯಾಗಿಸಿತು’ ಎಂಬ ಸಾರ್ಥಕ್ಯ ಭಾವವನ್ನು ಈ ಸಂಪುಟದಲ್ಲಿ ಓದುಗರಿಗೂ ಮನಗಾಣಿಸಿದ್ದಾರೆ. ಇಲ್ಲಿನ ಪುಟಗಳ ನಡುವೆ ಲೇಖಕಿ ಬಳಸಿಕೊಂಡ “ಕಮಲಾಪ್ರಿಯ’ ಅಂಕಿತದ ಸ್ವಂತ ವಚನಗಳು ನಿರೂಪಿತ ವಿಷಯ/ಸಂದರ್ಭಗಳಿಗೆ ಪೂರಕವಾಗಿದ್ದು , ಹಾಳೆಗಳ ನಡುವಿನ ನವಿಲುಗರಿಗಳಂತೆ ಮುದ ನೀಡುತ್ತವೆ.

ಜಕಾ

ಟಾಪ್ ನ್ಯೂಸ್

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.