ದಾಸೋಹದ ಮಹಾಮನೆ

ಶರಣ ಬಸವೇಶ್ವರ ಸಂಸ್ಥಾನದ ಜವಾರಿ ರುಚಿ

Team Udayavani, Feb 29, 2020, 6:07 AM IST

dasohada

ಮಳೆ ಎಡೆಬಿಡದೆ ಸುರಿಯುತ್ತಿತ್ತು. ಹಾಗೆ ಸುರಿಯುತ್ತಾ ಸುಮಾರು ದಿನಗಳೇ ಆಗಿದ್ದವು. ಅಡುಗೆಮನೆಯಲ್ಲಿ ಒಲೆ ಉರಿಸಲೂ ಕಟ್ಟಿಗೆ ಇರಲಿಲ್ಲ. ಇಂಥ ಸಂದರ್ಭದಲ್ಲಿ ಮನೆಯ ಚಾವಣಿಯನ್ನು ಬೀಳಿಸಿ, ಕಟ್ಟಿಗೆಗಳನ್ನು ಒಲೆ ಉರಿಸಲು ಬಳಿಸಿ, ಹಸಿವು ನೀಗಿಸಿದ ಪುಣ್ಯಕ್ಷೇತ್ರ ಕಲಬುರಗಿಯ ಶರಣ ಬಸವೇಶ್ವರ ಮಹಾಸಂಸ್ಥಾನ. 1746ರಿಂದ ಅಂದರೆ, ಶರಣಬಸವೇಶ್ವರರ ಜೀವಿತ ಕಾಲದಿಂದ ಇಂದಿನವರೆಗೆ ದಾಸೋಹ ನಡೆದುಬಂದಿದೆ.

ದೇಶವು ಪರಕೀಯರ ದಾಸ್ಯದಲ್ಲಿದ್ದಾಗಲೂ, ದಾಸೋಹ ಕಾಯಕ ಮಾಡಿಕೊಂಡು ಬಂದ ಶರಣಬಸವೇಶ್ವರರ ದಾಸೋಹ ಮಹಾಮನೆ ಇದು. ಸಾಲ ಮಾಡಿಯೂ ದಾಸೋಹ ಬಡಿಸಿದ ಕ್ಷೇತ್ರ ಇದು. ತಾವೇ ಕೃಷಿ ಕಾಯಕ ಮಾಡಿ, ದಾಸೋಹಕ್ಕೆ ದವಸಧಾನ್ಯಗಳನ್ನು ಸಂಗ್ರಹಿಸಿದ ಶರಣ ಬಸವೇಶ್ವರರ ಸಂಸ್ಥಾನದ ದಾಸೋಹದ ಕತೆಗಳು ಮುಗಿಯುವಂಥದ್ದೇ ಅಲ್ಲ.

ಭಕ್ತರು ಮಾತ್ರವಲ್ಲ. ಈ ದಾಸೋಹದಲ್ಲಿ ಊಟ ಮಾಡಿ, ವಿದ್ಯಾಭ್ಯಾಸ ಕಲಿತು, ಪದವಿ ಪಡೆದವರು ಇಂದು ದೇಶದ ಅತ್ಯುನ್ನತ ಸ್ಥಾನಗಳಲ್ಲಿದ್ದಾರೆ. ಇಲ್ಲಿನ ತ್ರಿವಿಧ ದಾಸೋಹ ಹಲವರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಮಾಜಿ ಸಚಿವ ಬಾಬುರಾವ ಚಿಂಚನಸೂರ, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲ ಹಾಗೂ ನಿವೃತ್ತ ಎಸ್‌.ಪಿ. ಎಸ್‌. ಬಸವರಾಜ ಅವರು ಇಲ್ಲಿಯೇ ದಾಸೋಹ ಸ್ವೀಕರಿಸಿ, ಬದುಕಿನಲ್ಲಿ ಸಾಧನೆಗೈದವರು.

ನಿತ್ಯ ದಾಸೋಹ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿದಿನ ದಾಸೋಹ ನೀಡುವ ಧಾರ್ಮಿಕ ಕೇಂದ್ರಗಳೇ ಕಡಿಮೆ. ಈ ನಿಟ್ಟಿನಲ್ಲಿ ನಿತ್ಯ ದಾಸೋಹಕ್ಕೆ ಪ್ರಸಿದ್ಧಿ ಪಡೆದಿರುವ ಶರಣ ಬಸವೇಶ್ವರ ಸಂಸ್ಥಾನದಲ್ಲಿ ಕನಿಷ್ಠ 1200 ಸದ್ಭಕ್ತರು ಊಟಕ್ಕೆ ಸಾಕ್ಷಿಯಾಗುತ್ತಾರೆ. ಹೊಟ್ಟೆ ತುಂಬುವಷ್ಟು ಸಂತೃಪ್ತ ಭೋಜನ ನೀಡುವುದು ಇಲ್ಲಿನ ವಿಶೇಷ.

ಭಕ್ಷ್ಯ ಸಮಾಚಾರ: ಇಲ್ಲಿ ಅನ್ನ- ಸಾಂಬಾರ್‌ ಜತೆಗೆ ಕೆಲವೊಮ್ಮೆ ಜೋಳದ ರೊಟ್ಟಿಯನ್ನೂ ಬಡಿಸಲಾಗುತ್ತದೆ. ಇದರೊಂದಿಗೆ ಭಕ್ತರು ನೀಡಿದ ನೈವೇದ್ಯವೂ ಊಟದ ರುಚಿಯನ್ನು ಹೆಚ್ಚಿಸುತ್ತದೆ.

ಅಡುಗೆಮನೆ ಒಳಗೆ…: ಎರಡು ಬೃಹತ್‌ ಸ್ಟೀಮ್‌ಗಳನ್ನು ಬಳಸಿ ಅನ್ನ- ಸಾಂಬಾರು ತಯಾರಿಸುತ್ತಾರೆ. ಹಾಗೆಯೇ ಸಾಂಪ್ರದಾಯಿಕವಾಗಿ ಕಟ್ಟಿಗೆ ಒಲೆಯಲ್ಲಿ ಅಡುಗೆ ತಯಾರಿಸುವ ವ್ಯವಸ್ಥೆಯೂ ಇಲ್ಲಿದೆ. ಸಾವಿರಾರು ಮಂದಿಗೆ ಊಟ ತಯಾರಿಸುವಾಗ ಪಾಕಶಾಲೆಯ ಶುಚಿತ್ವ ಕಾಪಾಡುವುದೇ ದೊಡ್ಡ ಸಮಸ್ಯೆ. ಆದರೆ, ಇಲ್ಲಿನ ಅಡುಗೆಮನೆ ಸ್ವತ್ಛ, ಸುಂದರ.

ದಾಸೋಹದ ಹಿಂದಿನ ಶಕ್ತಿ: ಸುಸಜ್ಜಿತ ಅಡುಗೆಮನೆ ಜತೆಗೆ ನಿಪುಣ ಬಾಣಸಿಗರು ಇಲ್ಲಿನ ದಾಸೋಹದ ಹಿಂದಿನ ಶಕ್ತಿ ಅಂತಲೇ ಹೇಳಬಹುದು. 10 ಮಂದಿ ಬಾಣಸಿಗರು, ಜವಾರಿ ಶೈಲಿಯ ಅಡುಗೆಯನ್ನು ತಯಾರಿಸುತ್ತಾರೆ. ಇವರಿಗೆ ಸಹಾಯಕರಾಗಿ ನಾಲ್ಕೈದು ಸಿಬ್ಬಂದಿಗಳಿದ್ದಾರೆ.

ಊಟದ ಸಮಯ: ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ

ಸಂಖ್ಯಾಸೋಜಿಗ
5- ಸಹಾಯಕ ಸಿಬ್ಬಂದಿ
10- ಬಾಣಸಿಗರಿಂದ ಅಡುಗೆ ತಯಾರಿ
1200- ಭಕ್ತರಿಗೆ ನಿತ್ಯ ದಾಸೋಹ
30- ನಿಮಿಷಗಳಲ್ಲಿ ಅಡುಗೆ ತಯಾರಿ
50- ಕಿಲೋ ತರಕಾರಿ ಬಳಕೆ
4,50,000- ವಾರ್ಷಿಕ ಇಷ್ಟು ಮಂದಿಗೆ ದಾಸೋಹ (ಅಂದಾಜು)

* ಡಾ. ಸುರೇಶ ನಂದಗಾಂವ

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.