ಅತಂತ್ರ ಸ್ಥಿತಿಯಲ್ಲಿ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ
ಒಲಿಂಪಿಕ್ಸ್ ಅರ್ಹತೆಗೆ ಅನಿವಾರ್ಯವಾಗಿರುವ ಕೂಟ; ಚೀನ ಆಟಗಾರರ ಆರೋಗ್ಯ ಮಾಹಿತಿ ಕೇಳಿದ ಕೇಂದ್ರ
Team Udayavani, Mar 1, 2020, 5:08 AM IST
ಹೊಸದಿಲ್ಲಿ: ಮಾರ್ಚ್ನಲ್ಲಿ ಹೊಸದಿಲ್ಲಿಯಲ್ಲಿ ನಡೆಯಬೇಕಿರುವ ಶೂಟಿಂಗ್ ವಿಶ್ವಕಪ್ ಕೊರೊನಾ ವೈರಸ್ ಪರಿಣಾಮದಿಂದ ರದ್ದಾಗುವ ಸ್ಥಿತಿಯಲ್ಲಿದೆ. ಇದರ ನಡುವೆಯೇ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಅತ್ಯಂತ ಮಹತ್ವದ್ದಾಗಿರುವ, ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಕೂಟವೂ ಅಪಾಯಕ್ಕೆ ಸಿಲುಕಿದೆ.
ಭಾರತ ವಿದೇಶಾಂಗ ಇಲಾಖೆ ಈಗಾ ಗಲೇ ಚೀನ ಆಟಗಾರರ ಆರೋಗ್ಯದ ಬಗ್ಗೆ ಮಾಹಿತಿ ನೀಡಿ ಎಂದು ಭಾರತ ಬ್ಯಾಡ್ಮಿಂಟನ್ ಸಂಸ್ಥೆಗೆ ಸೂಚಿಸಿದೆ. ಇದನ್ನು ಭಾರತ ಬ್ಯಾಡ್ಮಿಂಟನ್ ಸಂಸ್ಥೆ, ಚೀನದ ಬ್ಯಾಡ್ಮಿಂಟನ್ ಸಂಸ್ಥೆಗೆ ರವಾನೆ ಮಾಡಿ ಉತ್ತರಕ್ಕಾಗಿ ಕಾದು ಕುಳಿತಿದೆ.
ಕೊರೊನಾ ಭೀತಿ
ಚೀನ ಬ್ಯಾಡ್ಮಿಂಟನ್ ಪಟುಗಳಿಗೆ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಈ ಪಂದ್ಯಾವಳಿ ಅನಿವಾರ್ಯವಾಗಿದೆ. ಇದನ್ನು ತಪ್ಪಿಸಿಕೊಳ್ಳಲು ಅವರು ಸಿದ್ಧರಿಲ್ಲ. ಅವರನ್ನು ಸೇರಿಸಿಕೊಂಡರೆ, ಕೊರೊನಾ ಭಾರತವನ್ನು ಪ್ರವೇಶಿಸುವ ಭೀತಿ ಎದುರಾಗಲಿದೆ. ಒಂದು ಆಶಾ ದಾಯಕ ಸಂಗತಿಯೆಂದರೆ, ಚೀನ ಬಹುತೇಕ ಬ್ಯಾಡ್ಮಿಂಟನ್ ಆಟಗಾರರೆಲ್ಲ ವಿದೇಶಗಳಲ್ಲೇ ಇದ್ದಾರೆ. ಆದ್ದರಿಂದ ಅವರನ್ನು ಭಾರತಕ್ಕೆ ಕರೆಸಿಕೊಳ್ಳು ವುದರಿಂದ ಯಾವುದೇ ಅಪಾಯ ಎದುರಾಗುವ ಸಾಧ್ಯತೆ ಇಲ್ಲ. ಸದ್ಯ ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಮುಂದಿರುವ ಆಶಾವಾದ ಇದೊಂದೇ.ಈ ನಡುವೆ ಮಾ. 24ರಿಂದ 29ರ ವರೆಗೆ ನಡೆಯಬೇಕಿರುವ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆ ಯುವ ಬಗ್ಗೆಯೇ ಅನುಮಾನವಿದೆ. ಕಡೆಯ ಹಂತದಲ್ಲಿ ಕೂಟ ರದ್ದಾದರೂ ಅಚ್ಚರಿಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?