ಕೆಲ ಗ್ರಾಮಕ್ಕಿಲ್ಲ ಮಲಪ್ರಭೆ ನೀರು


Team Udayavani, Mar 6, 2020, 2:58 PM IST

ಕೆಲ ಗ್ರಾಮಕ್ಕಿಲ್ಲ ಮಲಪ್ರಭೆ ನೀರು

ರೋಣ: ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮಲಪ್ರಭೆ ನದಿ ನೀರನ್ನು ತಾಲೂಕಿನ ಎಲ್ಲ ಹಳ್ಳಿಗಳಿಗೂ ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಇದು ಸಾಲದೆಂದು ಗ್ರಾಪಂ ಆಡಳಿತ ಬೋರ್‌ವೆಲ್‌ ಮೊರೆ ಹೋಗಿದೆ.

ಹೌದು, ತಾಲೂಕಿನ ಎಲ್ಲ ಹಳ್ಳಿಗಳಿಗೂ ಮಲಪ್ರಭೆ ನದಿಯಿಂದ ಬರುವ ನೀರಿನ ಪ್ರಮಾಣ ಸಾಲದು ಎಂದು ಗ್ರಾಪಂ ಆಡಳಿತ ಬೋರ್‌ವೆಲ್‌ಗ‌ಳಿಂದ ನೀರು ಪಡೆದು ಹಳ್ಳಿಗಳಿಗೆ ಪೂರೈಸುತ್ತಿದೆ. ಇದರಿಂದ ನದಿ ಹಾಗೂ ಕೊಳೆವೆ ಬಾವಿಯಿಂದ ಮಿಶ್ರಿತವಾದ ಅಶುದ್ಧ ನೀರು ಕುಡಿಯದ ಗ್ರಾಮೀಣ ಜನರು ಮತ್ತೆ ನೀರಿಗಾಗಿ ಶುದ್ಧ ನೀರಿನ ಘಟಕಗಳಿಗೆ ಅಲೆದಾಡುತ್ತಿದ್ದಾರೆ.

ಮಿಶ್ರಿತ ನೀರೇ ಗತಿ: ತಾಲೂಕಿನ ಮಾಡಲಗೇರಿ, ನೈನಾಪುರ, ಹಿರೇಹಾಳ, ಬಳಗೋಡ, ಕುರಹಟ್ಟಿ, ಮುದೇನಗುಡಿ, ಕೋತಬಾಳ, ಮುಗಳಿ, ಮಾರನಬಸರಿ, ನಿಡಗುಂದಿ, ಜಕ್ಕಲಿ, ಹಾಳಕೇರಿ ಸೇರಿದಂತೆ ಅನೇಕ ಗ್ರಾಮಗಳಿಗೆ ನದಿಯಿಂದ ಪೂರೈಸುವ ನೀರು ಸಾಲದಿರು ವುದರಿಂದ ಈ ಗ್ರಾಮಗಳಿಗೆ ಸ್ಥಳೀಯವಾಗಿ ಲಭ್ಯವಿರುವ ಕೊಳವೆಬಾವಿ ನೀರು ಸೇರಿಸಿಕೊಂಡು ಜನರಿಗೆ ಪೂರೈಸುತ್ತಿದ್ದಾರೆ. ಆದರೆ ಈ ಎರಡು ನೀರಿನ ಮಿಶ್ರಣದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಈ ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಮತ್ತೆ ಶುದ್ಧ ನೀರಿನ ಘಟಕಗಳಿಗೆ ಅಲೆಯುವಂತಾಗಿದೆ. ಇದರ ಮಧ್ಯೆ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕಗಳು ಸ್ಥಗಿತವಾದರೆ ಪಕ್ಕದ ಗ್ರಾಮಗಳ ಘಟಕಕ್ಕೆ ಹೋಗಿ ಕುಡಿಯಲು ನೀರು ತರುವ ದಯನೀಯ ಸ್ಥಿತಿ ಇಲ್ಲಿದೆ.

ಇಲ್ಲಿಗಿಲ್ಲ ಮಲಪ್ರಭೆ ನೀರು: ತಾಲೂಕಿನ ಬಹುಗ್ರಾಮ ಯೋಜನೆ ಪ್ರಾರಂಭವಾದ ಕೆಲವು ತಿಂಗಳ ಕಾಲ ಬಮ್ಮಸಾಗರ, ಸರ್ಜಾಪುರ, ಶಾಂತಗೇರಿ ಈ ಮೂರು ಗ್ರಾಮಗಳಿಗೆ ನೀರು ಪೂರೈಸಿದರು. ಆದರೆ ಕಳೆದ 8 ತಿಂಗಳಿಂದ ನೀರಿನ ಒತ್ತಡದ ಪ್ರಮಾಣ ಕಡಿಮೆ ಇದೆ ಎಂದು ನೆಪವಿಟ್ಟು ನೀರಿನ ಪೂರೈಕೆ ಸ್ಥಗಿತವಾಗಿದೆ. ಸದ್ಯ ಈ ಗ್ರಾಮಗಳಿಗೆ ಮಲ್ಲಾಪುರ ಗುಡ್ಡದ ಕೆರೆಯಿಂದ ನೀರು ಪೂರೈಸುತ್ತಿರುವುರಿಂದ ನೀರಿನ ಸಮಸ್ಯೆ ಇಲ್ಲ. ಗ್ರಾಮವಾರು ಜನಸಂಖ್ಯೆ ನೋಡಿದರೆ ಶಾಂತಗೇರಿ 5000, ಬಮ್ಮಸಾಗರ 2500, ಸರ್ಜಾಪುರ 2500 ಹೀಗೆ ಮೂರು ಗ್ರಾಮಗಳು ಸೇರಿ 10,000 ಜನಸಂಖ್ಯೆಗೆ ನದಿ ನೀರು ಪೂರೈಕೆಯಾಗುತ್ತಿಲ್ಲ. ಆದರೆ ಕೆರೆಯ ನೀರು ಗಡಸಿನಿಂದ ಕೂಡಿರುತ್ತದೆ. ಆದಷ್ಟು ಬೇಗೆ ಸಂಬಂಧಿ ಸಿದ ಅಧಿಕಾರಿಗಳು ಮೂರು ಗ್ರಾಮಗಳಿಗೂ ಬಹುಗ್ರಾಮ ಕುಡಿಯುವ ನೀರು ಪೂರೈಸಿದರೆ ಉತ್ತಮ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ನವ ಗ್ರಾಮಗಳಿಗಿಲ್ಲ ನೀರು: 2019ರ ಆಗಸ್ಟ್‌ನಲ್ಲಿ ಸುರಿದ ಧಾರಕಾರ ಮಳೆಗೆ ಮಲಪ್ರಭೆ ನೀರು ತಾಲೂಕಿನ 16ಕ್ಕೂ ಹೆಚ್ಚು ಗ್ರಾಮಗಳಿಗೆ ನುಗ್ಗಿತ್ತು. ಇದರಿಂದ ಹಳೆಯ ಊರುಗಳನ್ನು ಬಿಟ್ಟು ಸರ್ಕಾರ ನಿರ್ಮಾಣ ಮಾಡಿರುವ ನವಗ್ರಾಮಗಳಲ್ಲಿ ವಾಸವಿದ್ದಾರೆ. ಅಲ್ಲಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಳವಡಿಸಿಲ್ಲ. ಇದರಿಂದ ಇಲ್ಲಿನ ಜನರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಜೊತೆಗೆ ಕೊಳೆವೆಬಾವಿ ನೀರಿನ ಸಂಪರ್ಕವೂ ಇಲ್ಲ. ಇದರಿಂದ ಟ್ಯಾಂಕರ್‌ ತರುವುದು ತುಸು ವಿಳಂಬವಾದರೆ ಇಲ್ಲಿನ ಜನರು ಹಳೆ ಗ್ರಾಮಕ್ಕೆ ಹೋಗಿಯೇ ನೀರು ತರಬೇಕು.

ಮೊದಲಿನಂತಲ್ಲ ನೀರಿಗಿಲ್ಲ ಸಮಸ್ಯೆ: ರೋಣ- ನರಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರಿನ ಭವಣೆ ನೀಗಿಸಲು 448 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲೂಕಿನ ಎಲ್ಲ ಹಳ್ಳಿಗಳಿಗೆ ಪೈಪ್‌ ಲೈನ್‌ ಅಳವಡಿಸಿ ನೀರು ಪೂರೈಸುತ್ತಿರುವುದರಿಂದ 2019ರಿಂದ ಇತ್ತೀಚೆಗೆ ಪಟ್ಟಣ ಪ್ರದೇಶಗಳನ್ನು ಬಿಟ್ಟು ತಾಲೂಕಿನ ಯಾವ ಹಳ್ಳಿಗೂ ನೀರಿನ ಸಮಸ್ಯೆ ಎದುರಾಗಿಲ್ಲ.

ತಾಲೂಕಿನ ಎಲ್ಲ ಗ್ರಾಮಗಳಿಗೆ ಡಿಬಿಒಟಿ ಯೋಜನೆಯಡಿ ನೀರು ಪೂರೈಸಲಾಗುತ್ತಿದೆ. ಆದರೆ ಅತೀ ಎತ್ತರದ ಭಾಗದಲ್ಲಿರುವ ಶಾಂತಗೇರಿ, ಬಮ್ಮಸಾಗರ, ಸರ್ಜಾಪುರಗಳಿಗೆ ಡಿಬಿಒಟಿ ನೀರು ಪೂರೈಸುತ್ತಿಲ್ಲ. ಈ ಗ್ರಾಮಗಳಿಗೆ ಮಲ್ಲಾಪುರ ಗುಡ್ಡದಲ್ಲಿರುವ ಕೆರೆ ನೀರು ಕುಡಿಯಲು ಯೋಗ್ಯವಾಗಿದ್ದು, ಇದನ್ನೇ ಪೂರೈಸಲಾಗುತ್ತಿದೆ. ಜೊತೆಗೆ ಪ್ರತಿ ತಿಂಗಳು ಈ ನೀರಿನ ಪರೀಕ್ಷೆ ನಡೆಸಲಾಗುತ್ತದೆ.-ಮಹಾದೇವಪ್ಪ ಎನ್‌., ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ

ಮಲಪ್ರಭೆಯಿಂದ ಬರುವ ನೀರು ನಮ್ಮೂರಿಗೆ ಬಿಡುತ್ತಾರೆ. ಆದರೆ ಆ ನೀರು ಸಾಲದೆಂದು ಪಂಚಾಯತಿಯವರು ಗ್ರಾಮದೊಳಗಿನ ಬೋರ್‌ವೆಲ್‌ ನೀರನ್ನು ನದಿ ನೀರಿನ ಟ್ಯಾಂಕಿಗೆ ಕೂಡಿಸುತ್ತಾರೆ. ಇದರಿಂದ ಎರಡೂ ನೀರು ಕೂಡಿದ್ದರಿಂದ ಕುಡಿಯಲು ಶುದ್ಧ ನೀರು ಸಿಗದಂತಾಗಿದೆ. ಹೀಗಾಗಿ ಶುದ್ಧ ನೀರಿನ ಘಟಕದಲ್ಲಿ ದೊರೆಯುವ ನೀರು ಕುಡಿಯುತ್ತೇವೆ. -ಗುರುನಾಥ ಹಿರೇಸಕ್ಕರಗೌಡ್ರ, ಮಾಡಲಗೇರಿ ನಿವಾಸಿ

 

-ಯಚ್ಚರಗೌಡ ಗೋವಿಂದಗೌಡ್ರ

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.