ಮತ್ತೆ ಬಂದ ಶಿಷ್ಯ ದೀಪಕ್‌

ನಾನು ದುರಹಂಕಾರಿ ಅಲ್ಲ, ಸೆಟ್‌ಗೆ ಲೇಟ್‌ ಆಗಿ ಬರಲ್ಲ...

Team Udayavani, Mar 13, 2020, 4:09 AM IST

Shishya-Deepak

“ನಾನಿಲ್ಲಿ ಖುಷಿಗಿಂತ ದುಃಖ ಅನುಭವಿಸಿದ್ದೇ ಹೆಚ್ಚು. ನಾನು ದುರಹಂಕಾರಿಯಲ್ಲ. ನಾನು ಹೀರೋ ಅಲ್ಲ. ಕಲಾವಿದನಷ್ಟೇ. ನನ್ನ ನೋವನ್ನು ಎಲ್ಲರಿಗೂ ತಲುಪಿಸಿ. ನನ್ನ ಬಗ್ಗೆ ಹಬ್ಬುವ ಎಲ್ಲಾ ಮಾತುಗಳು ಸುಳ್ಳು…’

– ಇದು ದೀಪಕ್‌ ಮಾತು. ದೀಪಕ್‌ ಅಂದಾಕ್ಷಣ ಥಟ್ಟನೆ ನೆನಪಾಗೋದು ಕಷ್ಟ. “ಶಿಷ್ಯ’ ದೀಪಕ್‌ ಅಂದಾಗ, ಓ ಅವರಾ ಅನ್ನೋ ಉದ್ಘಾರ ಬರುತ್ತೆ. ಅದೇ “ಶಿಷ್ಯ’ ದೀಪಕ್‌ ಹೀಗೆ ಹೇಳಿಕೊಂಡರು. ಅಂದಹಾಗೆ, ಅವರು ಹೀಗೆ ಹೇಳ್ಳೋಕೆ ಕಾರಣ. ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಲ್ಲಿಗೆ ಒಂದೂವರೆ ದಶಕ ಕಳೆದಿದೆ. 14 ವರ್ಷ ಕಳೆದು ಈಗ 15 ನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ಅವರು, ಆ ಕುರಿತು ತಮ್ಮ ಸಿನಿಪಯಣದ ಸಿಹಿ-ಕಹಿ ಅನುಭವ ಹಂಚಿಕೊಂಡರು. ಅಂದು ಮಾತಿಗಿಳಿದ “ಶಿಷ್ಯ’ ದೀಪಕ್‌, ಹೇಳಿದ್ದಿಷ್ಟು. “ನಾನು ಬಹಳ ಗ್ಯಾಪ್‌ ಬಳಿಕ ಪುನಃ ತೆರೆ ಮೇಲೆ ಬರುತ್ತಿದ್ದೇನೆ. ಇದು ನನ್ನ 15 ನೇ ವರ್ಷದ ಪಯಣ. ಇಷ್ಟು ವರ್ಷದ ಜರ್ನಿಯಲ್ಲಿ ನಾನು ಖುಷಿಗಿಂತ ದುಃಖ ಅನುಭವಿಸಿದ್ದೇ ಹೆಚ್ಚು. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ನನ್ನ ಸೋಲು-ಗೆಲುವಿನಲ್ಲಿ ಜೊತೆಗಿದ್ದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಬಗ್ಗೆ ಸಾಕಷ್ಟು ತಪ್ಪು ಮಾಹಿತಿ ಹರಿದಾಡಿವೆ. ಅದೆಲ್ಲವೂ ಶುದ್ಧ ಸುಳ್ಳು. ನಾನು ದುರಹಂಕಾರಿ ಅಲ್ಲ. ಕಥೆಯಲ್ಲಿ ಮೂಗು ತೂರಿಸಲ್ಲ. ಸೆಟ್‌ಗೆ ಲೇಟ್‌ ಆಗಿ ಬರಲ್ಲ. ಯಾರೋ ಹೇಳಿದ್ದನ್ನು ಕೇಳಿಕೊಂಡು, ಅದು ಇನ್ನಷ್ಟು ಜನರಿಗೆ ಹರಿಯುತ್ತಿದೆ. ನಾನಿಲ್ಲಿ ಹೀರೋ ಆಗಬೇಕು ಅಂತ ಬಂದವನಲ್ಲ. ಕಲಾವಿದ ಆಗಬೇಕಷ್ಟೇ. ನನಗೆ ಸಿನಿಮಾ ಅನ್ನೋದು ಪ್ಯಾಷನ್‌. ಎಷ್ಟೋ ಜನ ಮೂರು ವರ್ಷಕ್ಕೆ ಒಂದು ಸಿನ್ಮಾ ಮಾಡಿದರೆ, ಗುರುತಿಸೋದು ಹೇಗೆ ಅಂತಾರೆ. ನಿಜವಾಗಿಯೂ ನನಗೆ ಸಿನಿಮಾ ದುಡಿಮೆ ಅಲ್ಲವೇ ಅಲ್ಲ. ಅದೊಂದು ಪ್ರೀತಿಯಷ್ಟೇ. ಹಾಗಾಗಿ, ಇಷ್ಟು ವರ್ಷದ ಕಹಿ ಅನುಭವಗಳೆಲ್ಲವನ್ನೂ ಗಂಟುಗಟ್ಟಿ ಇಟ್ಟಿದ್ದೇನೆ. ಈಗ ಹೊಸ ಇನ್ನಿಂಗ್ಸ್‌ ಶುರು ಮಾಡಿದ್ದೇನೆ. ಇನ್ನು ಮುಂದೆ ಹೀರೋ ಆಗಿ ಕಾಣಿಸಿಕೊಳ್ಳಲ್ಲ. ನೆಗೆಟಿವ್‌ ಶೇಡ್‌ನ‌ಲ್ಲಿ ಎಂಟ್ರಿಯಾಗುತ್ತಿದ್ದೇನೆ’ ಎಂದು ಹೇಳಿಕೊಂಡರು ದೀಪಕ್‌.

ಸದ್ಯಕ್ಕೆ “ಜೋಗಿ’ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರದಲ್ಲಿ ರೆಬೆಲ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು, ಪ್ರಜ್ವಲ್‌ ದೇವರಾಜ್‌ ಅಭಿನಯದ “ವೀರಂ’ ಚಿತ್ರದಲ್ಲೂ ನಾನು ಮೇಜರ್‌ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಎರಡು ಸಿನಿಮಾಗಳು ನನ್ನ ದೊಡ್ಡ ಹೆಜ್ಜೆಗಳಾಗುತ್ತವೆ ಎಂದು ನಂಬಿದ್ದೇನೆ. ಪುನಃ ನನ್ನ ಜರ್ನಿಗೆ ಈ ಎರಡು ಚಿತ್ರಗಳು ಸಾಥ್‌ ಕೊಟ್ಟಿವೆ. ಅವಕಾಶ ಕೊಟ್ಟ ಪ್ರೇಮ್‌ ಸರ್‌ಗೂ ಹಾಗು “ವೀರಂ’ ಚಿತ್ರತಂಡಕ್ಕೂ ಥ್ಯಾಂಕ್ಸ್‌’ ಎಂದರು ದೀಪಕ್‌.

ಅಂದು ಅಷ್ಟು ವರ್ಷ ಸಿನಿಪಯಣಕ್ಕೆ ಸಾಥ್‌ ಕೊಟ್ಟ, ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರನ್ನು ದೀಪಕ್‌ ಗೌರವಿಸಿದರು. ಮೊದಲ ಸಿನಿಮಾ ಮೂಲಕ ಅವಕಾಶ ಕೊಟ್ಟ ಭಾ.ಮ.ಹರೀಶ್‌, ಭಾ.ಮ.ಗಿರೀಶ್‌ ಹಾಗು ಕುಮಾರ್‌, ವಿಜಯಕುಮಾರ್‌, ಶಶಿಧರ್‌ ಕೆ.ಎಂ. ಮೊದಲ ಚಿತ್ರದ ಹಿರಿಯ ಪ್ರಚಾರಕರ್ತರಾದ ವಿಜಯಕುಮಾರ್‌, ನಾಗೇಂದ್ರ ಹಾಗು ಹಿರಿಯ ಛಾಯಾಗ್ರಾಹಕರಾದ ಕೆ.ಎನ್‌.ನಾಗೇಶ್‌ಕುಮಾರ್‌ ಅವರನ್ನು ಇದೇ ವೇಳೆ ಸನ್ಮಾನಿಸಿದರು ದೀಪಕ್‌. ಗೌರವ ಸ್ವೀಕರಿಸಿದ ಪ್ರತಿಯೊಬ್ಬರೂ, ದೀಪಕ್‌ ಅವರ ಎರಡನೇ ಇನ್ನಿಂಗ್ಸ್‌ ತುಂಬಾ ಅದ್ಭುತವಾಗಿರಲಿ ಎಂದು ಶುಭ ಹಾರೈಸಿದರು.

ಟಾಪ್ ನ್ಯೂಸ್

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.