ಹಾಸನದಲ್ಲಿ ತರಕಾರಿ ಖರೀದಿಗೆ ನೂಕು ನುಗ್ಗಲು
Team Udayavani, Apr 1, 2020, 3:03 PM IST
ಹಾಸನ: ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಜನತೆ ತರಕಾರಿ ಖರೀದಿಗೆ ಅವಕಾಶ ನೀಡಲಾಗಿದ್ದು, ತರ ಕಾರಿ ಖರೀದಿಗೆ ಮುಗಿಬಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು.
ಲಾಕ್ಡೌನ್ ಜಾರಿಯಾದ ನಂತರ ತರಕಾರಿಗಳ ದರ ಏರುತ್ತಾ ಸಾಗಿದೆ. ಈರುಳ್ಳಿ ಕೇಜಿಗೆ 40 ರೂ., ಟೊಮೆಟೋ 20 ರಿಂದ 30 ರೂ., ಆಲೂಗಡ್ಡೆ ಕೇಜಿಗೆ 40 ರೂ., ಬೆಳ್ಳುಳ್ಳಿ ಕೇಜಿಗೆ 200 ರೂ., ಬೀನ್ಸ್ 40 ರೂ., ಅವರೆಕಾಯಿ 60 ರೂ., ಬೀನ್ಸ್ 80 ರೂ., ನುಗ್ಗೆಕಾಯಿ 50 ರೂ. ಪುಟ್ಟಬಾಳೆ ಹಣ್ಣು 60 ರೂ. ದರದಲ್ಲಿ ಮಾರಾಟವಾಯಿತು. ಗ್ರಾಹಕರು ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ವ್ಯಾಪಾರಿಗಳು ಹೇಳಿದ ದರ ನೀಡಿ ತರಕಾರಿ ಖರೀದಿಸಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿ.ಎಂ.ರಸ್ತೆಯಲ್ಲಿ ವಾಹನಗಳ ಸಂಚಾ ರದ ದಟ್ಟಣೆ ಯುಂಟಾಗಿತ್ತು. ತರಕಾರಿ ಖರೀದಿ, ಪಟ್ರೋಲ್ಗಾಗಿ ಜನರು ಹೊರಬಂದಿದ್ದ ರಿಂದ ಹಾಸನಾಂಬ ದೇವಾಲಯದ ವೃತ್ತ, ಹೊಸಲೈನ್ ರಸ್ತೆಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೆಟ್ರೋಲ್ ಬಂಕ್ ಗಳನ್ನು ವಾರದಲ್ಲಿ ನಾಲ್ಕುದಿನ ಮಾತ್ರ ತೆರೆಯಲು ಅವಕಾಶ ನೀಡಿರುವ ಹಿನ್ನಲೆ ಯಲ್ಲಿ ಮಂಗಳವಾರ ಪೆಟ್ರೋಲ್ಬಂಕ್ಗಳಲ್ಲಿಯೂ ಬೈಕ್ಗಳ ಸವಾರರು ಸಾಲು ಗಟ್ಟಿ ಪೆಟ್ರೋಲ್ ತುಂಬಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್