ಕೊರೊನಾ ಓಡಿಸಲು ಮನೆಯಲ್ಲೇ ಇರಿ
Team Udayavani, Apr 8, 2020, 6:35 PM IST
ನವಲಗುಂದ: ಪುರಸಭೆ-ಇತರೆ ಇಲಾಖೆಗಳ ನೌಕರರಿಗೆ ಜೆಡಿಎಸ್ ಪಕ್ಷದ ಪುರಸಭೆ ಸದಸ್ಯರಿಂದ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ನವಲಗುಮದ: ಕೊರೊನಾ ಓಡಿಸಲು ಸಾರ್ವಜನಿಕರು ಸ್ವಯಂ ನಿರ್ಬಂಧ ವಿಧಿಸಿಕೊಂಡು ಮನೆಯಲ್ಲೇ ಇರುವ ಮೂಲಕ, ಸರಕಾರದ ಲಾಕ್ಡೌನ್ ನಿಯಮಕ್ಕೆ ಸಹಕಾರ ನೀಡಬೇಕೆಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಕರೆ ನೀಡಿದರು.
ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ, ಹೆಬಸೂರ ಹಾಗೂ ನವಲಗುಂದ ತಾಲೂಕಿನ ಯಮನೂರ ಮತ್ತು ನವಲಗುಂದದ ಕಳ್ಳಿಮಠ ಓಣಿ, ಬಸವೇಶ್ವರ ನಗರ, ದೇಸಾಯಿಪೇಟೆ, ಗಾಂಧಿ ಮಾರ್ಕೇಟ್ ಹಾಗೂ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಚರ್ಚಿಸಿದರಲ್ಲದೆ, ಸರಕಾರ ಅಗತ್ಯ ಸಹಾಯ ನೀಡಲಿ ಎಂದು ಒತ್ತಾಯಿಸಿದರು.
ನವಲಗುಂದ ತಾಲ್ಲೂಕಿನ 11 ಜನ ಶಂಕಿತರದಲ್ಲಿ 8 ಜನರ ವರದಿ ನೆಗೆಟಿವ್ ಬಂದಿದೆ. ಇನ್ನು ಮೂವರು ವರದಿ ಬರಬೇಕಿದೆ. ಅವರ ವರದಿಯೂ ನೆಗೆಟಿವ್ ಬರಲಿ ಎಂದು ಪ್ರಾರ್ಥಿಸೋಣ ಎಂದರು. ನವಲಗುಂದದಲ್ಲಿ ಪುರಸಭೆ ಹಾಗೂ ಇತರೆ ಇಲಾಖೆಗಳ ನೌಕರರಿಗೆ ಜೆಡಿಎಸ್ ಪಕ್ಷದ ಪುರಸಭೆ ಸದಸ್ಯರಿಂದ ಹೋಳಿಗೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ನಂತರ ವಿವಿಧೆಡೆ ಸಾರ್ವಜನಿ ಕರಿಗೆ ಮಾಸ್ಕ್-ಹಣ್ಣು ವಿತರಿಸಲಾಯಿತು. ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಡಲೆ ಖರೀದಿ ಕೇಂದ್ರ ಆರಂಭವಾಗಿದ್ದವಾದರೂ, ಕೊರೊನಾದಿಂದ ಖರೀದಿ ಸ್ಥಗಿತಗೊಂಡಿದ್ದು, ಪುನರಾರಂಭಿಸಬೇಕು ಕೋನರಡ್ಡಿ ಒತ್ತಾಯಿಸಿದರು.
ಜೀವನ ಪವಾರ, ಪ್ರಕಾಶ ಶಿಗ್ಲಿ, ಮಹಾಂತೇಶ ಭೋವಿ, ಮೋದಿನ ಶಿರೂರ, ಸುರೇಶ ಮೇಟಿ, ಬಾಬಾಜಾನ ಮಕಾಂದಾರ, ಹನುಮಂತಪ್ಪ ವಾಲ್ಮೀ ಕಿ, ಹುಸೇನಬಿ ಧಾರವಾಡ, ಅಪ್ಪಣ್ಣಾ ಹಳ್ಳದ, ಚಂದ್ರಲೇಖಾ ಮಳಗಿ, ಆನಂದ ಹವಳಕೋಡ, ಸೈಫುದ್ದೀನ್ ಅವರಾದಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು
Koppala; ಇಂದಿನಿಂದ ಎರಡು ದಿನ ಮೇ ಸಾಹಿತ್ಯ ಮೇಳ
Koppala; ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಿದ ಹುಲಗಿ ಕಟ್ಟೆಯ ಶಾಸನ ಪತ್ತೆ
Politics: ಕಾಂಗ್ರೆಸ್ ಗ್ಯಾರಂಟಿಗಳಲ್ಲಿಯೇ ಕಾಲಹರಣ ಮಾಡುತ್ತಿದೆ: ಎನ್ ರವಿಕುಮಾರ್ ವಾಗ್ದಾಳಿ
Gangavati; ಕಿಷ್ಕಿಂಧಾ ಅಂಜನಾದ್ರಿ ಹುಂಡಿಯಲ್ಲಿ 30.21 ಲಕ್ಷ ರೂ.ಸಂಗ್ರಹ
MUST WATCH
ಹೊಸ ಸೇರ್ಪಡೆ
Team India ಕೋಚ್ ಹುದ್ದೆಗೆ ಮೋದಿ, ಶಾ, ಧೋನಿ, ಶಾರುಖ್, ಸಚಿನ್ ಅರ್ಜಿ! ಏನಿದರ ಅಸಲೀಯತ್ತು?
Meteorite; ಕೃಷಿಭೂಮಿಗೆ ಬಿದ್ದ ಉಲ್ಕಾಶಿಲೆ; ಗುಂಡಿಯಿಂದ ಹೊರಬರುತ್ತಿದೆ ಶಾಖ
Rebel star ಅಂಬರೀಶ್ ಹುಟ್ಟುಹಬ್ಬ; ಕಂಠೀರವ ಸ್ಟುಡಿಯೋದತ್ತ ಫ್ಯಾನ್ಸ್
AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ
Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ