ಕೊನೆಗೂ ಚೆಕ್‌ಮೇಟ್‌ ಹೇಳಿದೆ!


Team Udayavani, Jul 22, 2020, 3:31 PM IST

ಕೊನೆಗೂ ಚೆಕ್‌ಮೇಟ್‌ ಹೇಳಿದೆ!

ಸಾಂದರ್ಭಿಕ ಚಿತ್ರ

ಲಾಕ್‌ಡೌನ್‌ನ ಈ ಬಿಡುವಿನ ಸಮಯದಲ್ಲಿ ನನಗೆ ಚೆಸ್‌ ಕಲಿಸಿ ಅಂತ ಯಜಮಾನರಿಗೆ ಕೇಳಿಕೊಂಡೆ. ಅವರೂ ಬಹಳ ಖುಷಿಯಿಂದ ಒಪ್ಪಿಕೊಂಡರು…

ಒಂದು ಲಾಕ್‌ಡೌನ್‌ ಮುಗಿಯಿತು ಅನ್ನುವಷ್ಟರಲ್ಲಿ ದೊಡ್ಡ ದೊಡ್ಡ ನಗರಗಳು ಮತ್ತೂಮ್ಮೆ ಬಂದ್‌ ಆಗಿಬಿಟ್ಟಿವೆ. ಇನ್ನು ಈ ಪರಿಸ್ಥಿತಿ ಎಷ್ಟು ದಿನವೋ ದೇವರೇ ಬಲ್ಲ. ಆದರೆ, ಮೊದಲ ಸಲ ಲಾಕ್‌ಡೌನ್‌ ಆದಾಗ ಇದ್ದ ಗೊಂದಲ, ಗಾಬರಿ ಈಗಿಲ್ಲ. ನಾವೆಲ್ಲಾ ಮನೆಯೊಳಗೇ ಬದುಕಲು ಕಲಿತಿದ್ದೇವೆ. ಮಾರ್ಚ್‌ನಲ್ಲಿ ಲಾಕ್‌ಡೌನ್‌ ಆದಾಗ ನನಗಂತೂ ಬಹಳ ಕಷ್ಟವಾಗಿತ್ತು. ಬೆಳಗ್ಗೆ ವಾಕಿಂಗ್‌ ಹೋಗೋ ಹಾಗಿಲ್ಲ, ಸಂಜೆ ಗೆಳತಿಯರ ಜೊತೆ ಭಜನೆಗೆ ಸೇರುವ ಹಾಗಿಲ್ಲ ಅಂದ್ರೆ… 24* 7 ಮನೆಯೊಳಗೇ ಕುಳಿತು ಮಾಡೋದೇನು? ಧಾರಾವಾಹಿಗಳಿಲ್ಲ, ನ್ಯೂಸ್‌ ಚಾನೆಲ್‌ ನೋಡೋಕೆ ಇಷ್ಟವಿಲ್ಲ.

ಅಡುಗೆ, ಪುಸ್ತಕ, ಕಸೂತಿಯನ್ನು ಹೊಸದು ಅಂತ ಕಲಿಯೋ ವಯಸ್ಸೂ ನನ್ನದಲ್ಲ. ಆಗ ನೆನಪಾಗಿದ್ದು ಹಳೆಯದೊಂದು ಬಯಕೆ. ಅದುವೇ ಚೆಸ್‌ ಕಲಿಯೋ ಆಸೆ. “ಕಾಲೇಜು ಟೈಮಲ್ಲಿ ನಾನು ಚೆಸ್‌ ಚಾಂಪಿಯನ್‌…’ ಅಂತ ಮೀಸೆ ತಿರುವಿದವರನ್ನು ಮದುವೆಯಾಗಿ ಹದಿನೈದು ವರ್ಷ ಕಳೆದರೂ, ನನಗೆ ಚೆಸ್‌ ಆಡೋಕೆ ಬರುತ್ತಿರಲಿಲ್ಲ. ರಾಜ ಯಾವುದು, ರಾಣಿ ಯಾವುದು ಅಂತಲೂ ಕನ್‌ಫ್ಯೂಸ್‌ ಆಗುತ್ತಿತ್ತು. “ಅದು ಬುದ್ಧಿವಂತರ ಆಟ’ ಅಂತ ಯಜಮಾನರು ಛೇಡಿಸುವುದೂ ನಡೆದಿತ್ತು. ನಾನೂ ಚೆಸ್‌ ಕಲಿತು ಯಜಮಾನರ “ಗರ್ವಭಂಗ’ ಮಾಡುವ ಕನಸು ಕಂಡಿದ್ದೆನೇ ಹೊರತು, ಕಲಿಯುವ ಮನಸ್ಸು ಮಾಡಿರಲಿಲ್ಲ.

ನನಗೆ ಚೆಸ್‌ ಕಲಿಸಿ ಅಂತ ಯಜಮಾನರಿಗೆ ಕೇಳಿಕೊಂಡೆ. ಅವರೂ ಬಹಳ ಖುಷಿಯಿಂದ ಒಪ್ಪಿಕೊಂಡರು. ದಿನಾ ಬೆಳಗ್ಗೆ, ಸಂಜೆಯ ಬಿಡುವಿನ ವೇಳೆಯಲ್ಲಿ ಚೆಸ್‌ ಆಡಿದ್ದೇ ಆಡಿದ್ದು. ಯಜಮಾನರು ನಿಜವಾಗ್ಲೂ ಚೆಸ್‌ ಚಾಂಪಿಯನ್‌ ಅನ್ಸುತ್ತೆ. ಬಹಳ ಬೇಗ, ಸುಲಭದಲ್ಲಿ ಅರ್ಥವಾಗುವಂತೆ ಕಲಿಸಿದರು. ಮೊನ್ನೆಯ ಆಟದಲ್ಲಿ ಅಂತೂ ಅವರಿಗೆ “ಚೆಕ್‌ ಮೇಟ…’ ಅಂತ ಹೇಳಿ ವರ್ಷಗಳ ಕನಸನ್ನು ನನಸು ಮಾಡಿಕೊಂಡೆ. ಆದ್ರೆ ಯಜಮಾನರು ಮಾತ್ರ, “ನಾನು ಬೇಕಂತಲೇ ಸೋತಿದ್ದು ಕಣೇ…’ ಅಂತಿದ್ದಾರೆ. ಇದ್ದರೂ ಇರಬಹುದು. ಆದರೂ ಆ ಮಾತನ್ನು ನಾನು ನಂಬುವುದಿಲ್ಲ ಬಿಡಿ!

ಗೀತಾ ಶಂಕರ್‌

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.