ಪೋಸ್ಟ್ ಹಾಕಿದವರು, ಗಲಭೆ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ: ಶಾಸಕ ರಾಜೇಗೌಡ ಒತ್ತಾಯ
Team Udayavani, Aug 12, 2020, 3:32 PM IST
ಚಿಕ್ಕಮಗಳೂರು: ಡಿ.ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಭೆಕೋರರ ಮೇಲೆ ನಿರ್ದಾಕ್ಷಣ್ಯ ಕ್ರಮವಾಗಲಿ ಮತ್ತು ಪೋಸ್ಟ್ ಮಾಡಿದವರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜೇಗೌಡ ಒತ್ತಾಯಿಸಿದ್ದಾರೆ.
ಯಾವುದೇ ಧರ್ಮದ ವಿರುದ್ದ ಮಾತ್ರವಲ್ಲದೆ ಯಾರ ಬಗೆಗಾಗಲಿ ಅವಹೇಳನಕಾರಿಯಾಗಿ ಮಾತನಾಡಬಾರದು. ಧಾರ್ಮಿಕ ಗುರು ಹಾಗೂ ಧಾರ್ಮಿಕತೆ ಮೇಲೆ ಹಗುರ ಹೇಳಿಕೆಯನ್ನು ಪ್ರತಿಯೊಬ್ಬರೂ ನಿಲ್ಲಿಸಬೇಕೆಂದು ಈ ವೇಳೆ ತಿಳಿಸಿದ್ದಾರೆ.
ಅನ್ಯಾಯವಾದರೆ ದೂರು ನೀಡಬೇಕು ಅಥವಾ ನ್ಯಾಯ ಕೇಳಬೇಕು. ಬದಲಾಗಿ ದಾಂಧಲೆ ನಡೆಸಿದರೆ ಯಾರೂ ಒಪ್ಪುವುದಿಲ್ಲ. ಹೇಳಿಕೆ ಕೊಟ್ಟವನು, ಗಲಾಟೆ ಮಾಡಿದವರು ಇಬ್ಬರ ಮೇಲೂ ಕ್ರಮವಾಗಬೇಕು ಎಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜೇಗೌಡ ಹೇಳಿಕೆ ನೀಡಿದ್ದಾರೆ.