ಸ್ಯಾನಿಟೈಸರ್‌ ಸಕ್ಸಸ್‌ ಸ್ಟೋರಿ

ಕರುನಾಡಲ್ಲದೆ ಗುಜರಾತ್‌, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಇವೋ ಲೈಫ್- ಲೈಫ್ ಕೇರ್‌ ಬಿಸೇಫ್ ಸ್ಯಾನಿಟೈಸರ್‌ ಉದ್ಯಮದ ಕಥೆ ಇದು...

Team Udayavani, Aug 31, 2020, 7:46 PM IST

ಸ್ಯಾನಿಟೈಸರ್‌ ಸಕ್ಸಸ್‌ ಸ್ಟೋರಿ

ಕೋವಿಡ್ ಕಾಲಿಡುವ ತನಕ ಸ್ಯಾನಿಟೈಸರ್‌ ಇಷ್ಟೊಂದು ಚಿರಪರಿ ಚಿತ ಆಗಿರಲಿಲ್ಲ. ಆದರೆ, ಈಗ ಸ್ಯಾನಿಟೈಸರ್‌ ಇಲ್ಲದ ಮನೆಯಿಂದ, ಕಿಸಾಗೋತಮಿಗೆ ಸಾಸಿವೆ ಕಾಳೂ ಸಿಗುವುದಿಲ್ಲ. ಈ ಸೋಂಕು ನಿವಾರಕ ಅಷ್ಟು ಪರಿಚಿತ.

ಈಗ ಸ್ಯಾನಿಟೈಸರ್‌ ಕೂಡ ಆತ್ಮನಿರ್ಭರ ಕೂಸು. ಬಾಗಲಕೋಟೆ ಜಿಲ್ಲೆಯ ನಿರಾಣಿ ಉದ್ಯಮ ಸಮೂಹದ ನಿರಾಣಿ ಶುಗರ್ಸ್‌ ಮತ್ತು ಸಾಯಿಪ್ರಿಯಾ ಶುಗರ್‌ನ ಎಂಥಿನಾಲ್‌ ಘಟಕದಲ್ಲಿ, ನಿತ್ಯ 50 ಸಾವಿರ ಲೀಟರ್‌ ಗೂ ಹೆಚ್ಚು ಸ್ಯಾನಿಟೈಸರ್‌ ಉತ್ಪಾದನೆ  ಯಾಗುತ್ತಿದೆ. ಮುಧೋಳದ ನಿರಾಣಿ ಶುಗರ್ಸ್‌ನಿಂದ ಬಿ-ಸೇಫ್ ಮತ್ತು ಇವೋ ಲೈಫ್ ಹೆಸರಿನಡಿ ಹಾಗೂ ಸಾಯಿ ಪ್ರಿಯಾ ಶುಗರ್ಸ್‌ ಎಂಥಿನಾಲ್‌ ಘಟಕದಿಂದ ಲೈಫ್ ಕೇರ್‌ ಹೆಸರಿನ ಸ್ಯಾನಿಟೈಸರ್‌ಗೆ ಈಗ ದೇಶದ ಹಲವು ರಾಜ್ಯಗಳಲ್ಲಿ ಬಹು ಬೇಡಿಕೆ ಇದೆ. ಕರ್ನಾಟಕದ ಎಲ್ಲ ಜಿಲ್ಲೆಗಳು, ಗುಜರಾತ್‌, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರ, ತಮಿಳುನಾಡು ಹಾಗೂ ಕೇರಳಕ್ಕೆ ಬಾಗಲಕೋಟೆಯ ಈ ಸ್ಯಾನಿ ಟೈಸರ್‌ ಪೂರೈಕೆ  ಯಾಗುತ್ತಿದೆ.

ಕೇಂದ್ರದ ಕೃಪೆ… :  ಲಾಕ್‌ಡೌನ್‌ ಆರಂಭದಲ್ಲಿ ಪ್ರತಿಷ್ಠಿತ ಕಂಪನಿಗಳ ಸ್ಯಾನಿಟೈಸರ್‌ ಮಾರುಕಟ್ಟೆಗೆ ಬರುವ ಮುನ್ನವೇ ಖಾಲಿ ಆಗಿರುತ್ತಿದ್ದವು. ಸಾಮಾನ್ಯ ಜನ ಸ್ಯಾನಿಟೈಸರ್‌ ಸಿಗದೆ ಪರದಾಡಿದ್ದರು. ಇದನ್ನು ಮನಗಂಡ ಕೇಂದ್ರ ಸರ್ಕಾರ, ದೇಶದ ಸಕ್ಕರೆ ಕಾರ್ಖಾನೆಗಳಲ್ಲಿ ಯಾವ ಕಾರ್ಖಾನೆ ಎಂಥಿನಾಲ್‌ ಉತ್ಪಾದನೆ ಮಾಡುತ್ತದೆಯೋ ಆ ಘಟಕಕ್ಕೆ, ಸ್ಯಾನಿಟೈಸರ್‌ ಉತ್ಪಾದನೆಗೂ ಅನುಮತಿ ಕೊಟ್ಟಿತ್ತು. ಹೀಗೆ ಅನುಮತಿ ಪಡೆದವರಲ್ಲಿ ಮುಧೋಳದ ನಿರಾಣಿ ಶುಗರ್ಸ್‌ (ಎರಡು ಘಟಕ), ಜಮಖಂಡಿ ತಾಲೂಕಿನ ಹಿಪ್ಪರಗಿಯ ಸಾಯಿಪ್ರಿಯಾ ಶುಗರ್ಸ್‌ ಮುಖ್ಯವಾದವು. ಆರಂಭ ದಲ್ಲಿ ಜನರಿಗೆ ಸುಮಾರು 1.50 ಕೋಟಿ ಮೊತ್ತದ ಸ್ಯಾನಿಟೈಸರ್‌ ಉಚಿತವಾಗಿ ನೀಡಿದ್ದೇ ಕಂಪನಿಗೆ ಪ್ಲಸ್‌ ಪಾಯಿಂಟ್‌ ಆಯಿತು. ಕೊರೊನಾ ಭೀತಿಯಲ್ಲಿದ್ದ ಜನರಿಗೆ, ಇದು ಸಹಕಾರಿಯೂ ಆಯಿತು. ಇತ್ತ ಇವೋ ಲೈಫ್, ಬಿ-ಸೇಫ್ ಹಾಗೂ ಲೈಫ್ ಕೇರ್‌ ಸ್ಯಾನಿಟೈಸರ್‌ ಬೇಗನೆ ಜನರ ಗಮನ ಸೆಳೆಯಿತು.

ಈ ಸ್ಯಾನಿಟೈಸರ್‌ ಉದ್ಯಮದ ಹಿಂದೆ ದೊಡ್ಡ ತಂಡವೇ ಇದೆ. ಆರಂಭದಲ್ಲಿ ಸ್ಯಾನಿಟೈಸರನ್ನು ಮುರುಗೇಶ ನಿರಾಣಿ ಅವರು ಉಚಿತವಾಗಿ ಜನರಿಗೆ ವಿತರಿಸಲು ಸಲಹೆ ನೀಡಿದರೆ, ಅದಕ್ಕೆ ಉತ್ತಮ ಮಾರ್ಕೆಟ್‌ ತಂದುಕೊಡಲು ಸಮೂಹದ ಸಿಎಂಡಿ ಸಂಗಮೇಶ ನಿರಾಣಿ, ವಿಜಯನಿರಾಣಿ,ವಿಶಾಲ್‌ ನಿರಾಣಿ ಹಾಗೂ ಪ್ರಜ್ವಲ್‌ ನಿರಾಣಿ ಒಟ್ಟಾಗಿ ಶ್ರಮಿಸಿದರು. ಪ್ರಸ್ತುತ, ಸ್ಯಾನಿಟೈಸರ್‌ ಮಾರಾಟದ ಮಾರುಕಟ್ಟೆ ವ್ಯವಸ್ಥೆ ಹೊಣೆ ಹೊತ್ತಿರುವವರು, ಅಭಿಷೇಕ ಜನವಾದ.

ತಯಾರಿ ಹೇಗೆ?:  ಶೇ.80ರಷ್ಟು ಅಲ್ಕೋಹಾಲ್‌ ಆಧಾರಿತ ಈ ಸ್ಯಾನಿಟೈಸರ್‌ ಉತ್ಪಾದನೆಗೆ ಎಂಥಿನಾಲ್, ಹೈಡ್ರೋಜನ್‌ ಪೆರಾಕ್ಸೆ„ಡ್‌, ಗ್ಲಿಸರಿನ್‌, ಪರ್ಫ್ಯೂಮ್‌ ಹಾಗೂ ಡಿಸ್ಟಲರಿ ವಾಟರ್‌ ಬಳಸಲಾ ಗುತ್ತಿದೆ. 100 ಎಂ.ಎಲ್‌.ನಿಂದ ಹಿಡಿದು 500 ಎಂ.ಎಲ್., 5 ಲೀಟರ್‌, 10 ಲೀಟರ್‌ ಹಾಗೂ 20 ಲೀಟರ್‌ ಕ್ಯಾನ್‌ಗಳೂ ಲಭ್ಯ ಇವೆ. 100 ಎಂ.ಎಲ್. ಸ್ಯಾನಿಟೈಸರ್‌ಗೆ 28 ರೂ. ದರವಿದೆ. ನಿರಾಣಿ ಉದ್ಯಮ ಸಮೂಹದ ವಿಜಯ ಸೌಹಾರ್ದ ಸಹಕಾರಿ ಸಂಘದ 50 ಶಾಖೆಗಳಲ್ಲೂ ಮುಖ್ಯ ಬೆಲೆಯಲ್ಲಿ ಮಾರಾಟ ವ್ಯವಸ್ಥೆ ಮಾಡಲಾಗಿದೆ.

ಎಲ್ಲೆಲ್ಲಿಗೆ ಮಾರಾಟ? :  ಗುಜರಾತ್‌, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಮುಖ್ಯ ಡೀಲರ್‌ಗಳು ಈ ಸ್ಯಾನಿಟೈಸರ್‌ಗೆ ಮಾರುಕಟ್ಟೆ ಕಲ್ಪಿಸಿದ್ದಾರೆ.

ಟಾಪ್ ನ್ಯೂಸ್

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ

ಈಶ್ವರ ಖಂಡ್ರೆ

ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.