ಗಾವಸ್ಕರ್ ಹೇಳಿಕೆಗೆ ಅನುಷ್ಕಾ ಕಿಡಿ
Team Udayavani, Sep 26, 2020, 6:24 AM IST
ಮುಂಬಯಿ: ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಯವರ ಕಳಪೆ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಯಿಂದ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಕೆರಳಿದ್ದಾರೆ.
ಗಾವಸ್ಕರ್ ಅವರು ತಮ್ಮ ಹೇಳಿಕೆಯ ಅರ್ಥವನ್ನು ವಿವರಿಸಬೇಕೆಂದು ಆಗ್ರಹಿಸಿದ್ದಾರೆ.
ಆರ್ಸಿಬಿ-ಪಂಜಾಬ್ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಗಾವಸ್ಕರ್, “ಲಾಕ್ಡೌನ್ ಅವಧಿಯಲ್ಲಿ ಕೊಹ್ಲಿ ಕ್ರಿಕೆಟ್ ಅಭ್ಯಾಸ ನಡೆಸಿಲ್ಲ. ಅವರು ಕೇವಲ ಅನುಷ್ಕಾ ಬೌಲಿಂಗ್ ಮಾತ್ರ ಎದುರಿಸಿದ್ದಾರೆ ಎನ್ನಿಸುತ್ತದೆ. ಹಾಗಾಗಿಯೇ ಅವರ ಪ್ರದರ್ಶನ ಕಳಪೆಯಾಗಿದೆ’ ಎಂದಿದ್ದರು. ಇದಕ್ಕೆ ಕೊಹ್ಲಿ ಅಭಿಮಾನಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಾವಸ್ಕರ್ ಅವರನ್ನು ಕಮೆಂಟ್ರಿ ತಂಡದಿಂದ ಕಿತ್ತುಹಾಕಬೇಕೆಂದು ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅನುಷ್ಕಾ, “ಗೌರವಾನ್ವಿತ ಗಾವಸ್ಕರ್ ಅವರೇ, ನೀವು ಜಂಟ್ಲಮನ್ ಕ್ರೀಡೆಯ ಲೆಜೆಂಡ್. ನಿಮ್ಮ ಹೇಳಿಕೆ ಅಸಹ್ಯ ಹುಟ್ಟಿಸುವಂತಿದೆ. ಪ್ರತೀ ಬಾರಿಯೂ ಕೊಹ್ಲಿ ವಿಫಲವಾದಾಗ ಅದಕ್ಕೆ ನಾನೇ ಕಾರಣ ಎಂಬಂತೆ ಮಾತನಾಡುವುದೇಕೋ ತಿಳಿಯದು. ಈ ಚಾಳಿ ಎಲ್ಲಿಗೆ ಕೊನೆಗೊಳ್ಳುತ್ತದೋ ನಾ ಕಾಣೆ. ದಯವಿಟ್ಟು ತಮ್ಮ ಹೇಳಿಕೆಯನ್ನು ವಿವರಿಸಿ ಹೇಳಬೇಕು…’ ಎಂದಿದ್ದಾರೆ.
ಗಾವಸ್ಕರ್ ಸ್ಪಷ್ಟನೆ
ಅನುಷ್ಕಾ ಅವರ ಹೇಳಿಕೆಗೆ ಸುನೀಲ್ ಗಾವಸ್ಕರ್ ಸ್ಪಷ್ಟನೆ ನೀಡಿದ್ದಾರೆ.ತನ್ನ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿದ್ದೇ ವಿವಾದಕ್ಕೆ ಕಾರಣ ಎಂದಿದ್ದಾರೆ.
“ನನ್ನ ಹೇಳಿಕೆಯನ್ನು ಮತ್ತೂಮ್ಮೆ ಕೇಳಿ. ನಾನು ಎಲ್ಲೂ ಅನುಷ್ಕಾ ಅವರನ್ನು ಬೈಯ್ದಿಲ್ಲ. ಲಾಕ್ಡೌನ್ ಅವಧಿಯಲ್ಲಿ ಕೊಹ್ಲಿ ಮನೆಯಲ್ಲೇ ಕ್ರಿಕೆಟ್ ಅಭ್ಯಾಸ ಮಾಡಿರಬೇಕು. ಆಗ ಅವರು ಕೇವಲ ಅನುಷ್ಕಾ ಅವರ ಬೌಲಿಂಗ್ ಅನ್ನು ಎದುರಿಸುತ್ತಾರೆ. ಬಹುಶಃ ಮನೆಯಲ್ಲಿ ಅವರು ಟೆನಿಸ್ ಬಾಲ್ನಿಂದ ಅಭ್ಯಾಸ ನಡೆಸಿರಬೇಕು. ಹಾಗಾಗಿ ವೃತ್ತಿಪರರ ಬೌಲಿಂಗ್ ಎದುರಿಸುವಾಗ ಅವರಿಗೆ ಸಮಸ್ಯೆಯಾಗುತ್ತಿದೆ ಎಂಬರ್ಥದಲ್ಲಿ ಹೇಳಿದ್ದೆ’ ಎಂಬುದಾಗಿ ಗಾವಸ್ಕರ್ ಸ್ಪಷ್ಟನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.