ಮಾರುತಿ 800 ಗೆ ಈಗ 37 ವರ್ಷ!


Team Udayavani, Dec 21, 2020, 8:34 PM IST

ಮಾರುತಿ 800 ಗೆ ಈಗ 37 ವರ್ಷ!

1980-90ದಶಕದಲ್ಲಿ ಮಾರುತಿ 800 ಕಾರು ಹೊಂದುವುದು ಪ್ರತಿಷ್ಠೆಯ ಸಂಗತಿಯಾಗಿತ್ತು. ಕಾರ್‌ ಸಿಗಬೇಕೆಂದರೆ ಆಗ ವರ್ಷಗಟ್ಟಲೇಕಾಯಬೇಕಾಗಿತ್ತು.

ಭಾರತೀಯರಕಾರು ಕನಸನ್ನು ಈಡೇರಿಸಿದ್ದು ಮಾರುತಿ 800. ಸರಿಸುಮಾರು37 ವರ್ಷಗಳ ಹಿಂದೆ ಭಾರತದ ರಸ್ತೆಗಿಳಿದ ಈ ಕಾರು, ಈಗಲೂ ಹಲವರಿಗೆ ಬಹುಪ್ರಿಯವಾದಕಾರು. ಈ ಕಾರಿನ ಬಗ್ಗೆ ನಿಮಗೆ ಗೊತ್ತಿಲ್ಲದಕೆಲವು ಸಂಗತಿಗಳು ಇಲ್ಲಿವೆ.

ದೇಶದ ಮೊದಲ ಫ್ರಂಟ್‌ ವೀಲ್‌ ಡ್ರೈವ್‌ ಕಾರು :  ಮಾರುತಿ 800ಕಾರು ಮಾರುಕಟ್ಟೆಗೆ ಪ್ರವೇಶಿಸಿದಾಗ ಪ್ರೀಮಿಯರ್‌ ಪದ್ಮಿನಿ ಮತ್ತು ಹಿಂದೂಸ್ತಾನ್‌ ಅಂಬಾಸಿಡರ್‌ ಪ್ರಸಿದ್ಧಿಯಾಗಿದ್ದವು. ಆದರೆ,1983ರಲ್ಲಿ ಮಾರುತಿ ಕಾರು ಬಂದಾಗ, ಆ ಕಾಲದ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಈ ಕಾರು ರಸ್ತೆಗಿಳಿಯಿತು.ಅಂದರೆ, ದೇಶದ ಮೊದಲ ಫ್ರಂಟ್‌ ವೀಲ್‌ ಡ್ರೈವ್‌ ಕಾರು ಎಂಬ ಪ್ರಸಿದ್ಧಿ ಪಡೆಯಿತು. ಈ ಕಾರು ಲಾಂಚ್‌ ಆದಾಗ, ಲೀ. ಪೆಟ್ರೋಲ್‌ಗೆ25.95 ಕಿ.ಮೀ. ಮೈಲೇಜ್‌ ಕೊಡುವ ಭರವಸೆ ನೀಡಿತ್ತು.

ಮೊದಲ ಮಾರುತಿ ಕಾರಿನ ಬೆಲೆ 47,500 ರೂ.  : 1983 ರಲ್ಲಿ ಕಾರು ಲಾಂಚ್‌ ಆದಾಗ ಇದರ ಬೆಲೆ47,500 ರೂ.(ಎಕ್ಸ್ ಶೋ ರೂಂ.) ಹೀಗಾಗಿಯೇ ಇದು ಜನರ ಕಾರು ಎಂಬ ಖ್ಯಾತಿ ಗಳಿಸಿಕೊಂಡಿದ್ದು.  ಬಿಡುಗಡೆಯಾಯಿತು. ಇದರ ಬೆಲೆ 70 ಸಾವಿರ ರೂ.

ವರ್ಷಗಟ್ಟಲೇ ಕಾಯ ಬೇಕಿತ್ತು! :

ಇವತ್ತು ನಿಮಗೆಕಾರು ಬೇಕು ಎಂದರೆ, ಒಂದೆರಡು ದಿನದಲ್ಲೇ ಸಿಗಬಹುದು.ಕೆಲವೊಂದು ವಾರಗಟ್ಟಲೇ ಹಿಡಿಯಬಹುದು. ಆದರೆ,1980-90ರ ದಶಕದಲ್ಲಿ ಮಾರುತಿ 800ಕಾರು ಸಿಗಬೇಕು ಎಂದರೆ ವರ್ಷಗಟ್ಟಲೇಕಾಯಬೇಕಾಗಿತ್ತು. ಆರಂಭದಲ್ಲಿಕಾರುಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ನೀಡಲಾಗುತ್ತಿತು.

2.7ದಶ ಲಕ್ಷ ಕಾರು ಮಾರಾಟ :

ಭಾರತದಲ್ಲಿ27 ಲಕ್ಷ ಮಾರುತಿ 80 0ಕಾರುಗಳು ಮಾರಾಟವಾಗಿವೆ.1980ರ ವೇಳೆಗೆ 40 ಸಾವಿರ ಕಾರುಗಳು ಮಾರಾಟವಾಗಿದ್ದವು. ನಂತರದಲ್ಲಿ ಪ್ರತಿ ವರ್ಷ 1 ಲಕ್ಷ ಕಾರುಗಳು ಮಾರಾಟವಾಗುತ್ತಿದ್ದವು. ಹೀಗಾಗಿಯೇ 1997 ರ ವೇಳೆಗೆ ದೇಶದ ಟಾಪ್‌10ಕಾರುಗಳಲ್ಲಿ ಮಾರುತಿ ಕಂಪನಿಯ 8 ಕಾರುಗಳಿದ್ದವು.

ಮಾರುತಿ ಬ್ರ್ಯಾಂಡ್ ವಿದೇಶಗಳಿಗೆ ರಫ್ತು :

ಮಾರುತಿ 800ಕಾರಿನ ಮೂಲ ಬ್ರ್ಯಾಂಡ್ ಜಪಾನ್‌ನ ಸುಜುಕಿ. ಈ ಬ್ರ್ಯಾಂಡ್‌ ನಲ್ಲೇ ವಿದೇಶಗಳಿಗೆ ರಫ್ತಾಗುತ್ತಿತ್ತು. ಆದರೆ, ಭಾರತದಲ್ಲಿ ಮಾರುತಿ ಬ್ರ್ಯಾಂಡ್ ಯಶಸ್ವಿಯಾದ‌ ಮೇಲೆ ಫ್ರಾನ್ಸ್, ಇಂಗ್ಲೆಂಡ್‌, ಇಟಲಿ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಇದೇ ಹೆಸರಿನಲ್ಲಿಯೇ ರಫ್ತು ಮಾಡಲಾಯಿತು. ವಿಶೇಷ ‌ವೆಂದರೆ, ಸುಜುಕಿ ಎಂಬ ಹೆಸರನ್ನೇ ತೆಗೆಯಲಾಯಿತು.

2014ರಲ್ಲಿ ಮಾರುತಿ 800 ಜಮಾನ ಅಂತ್ಯ :

ಹೊಸ ‌ ತಂತ್ರಜ್ಞಾನದೊಂದಿಗೆ ಕಾರುಗಳು ಮಾರುಕಟ್ಟೆಗೆ ಬರಲು ಶುರುವಾದವು, ಮಾರುತಿ ಸುಜುಕಿ ಕೂಡ ಬೇರೆ ಬೇರೆ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡಿತು. ಹೀಗಾಗಿ,2014ರಲ್ಲಿ ಈ ಕಾರಿನ ‌ ಉತ್ಪಾದನೆ ನಿಲ್ಲಿಸಲಾಯಿತು.

 

­ಸೋಮಶೇಖರ ಸಿ.ಜೆ.

ಟಾಪ್ ನ್ಯೂಸ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.