ಆಡಳಿತಾತ್ಮಕವಾಗಿ ಎರಡಾಗಲಿ ಉತ್ತರ ಕನ್ನಡ ಜಿಲ್ಲೆ


Team Udayavani, Feb 10, 2021, 5:50 PM IST

ಆಡಳಿತಾತ್ಮಕವಾಗಿ ಎರಡಾಗಲಿ ಉತ್ತರ ಕನ್ನಡ ಜಿಲ್ಲೆ

ಹೊನ್ನಾವರ: ಶಿರಸಿಯನ್ನೊಳಗೊಂಡ ಘಟ್ಟದ ಮೇಲಿನ 6 ತಾಲೂಕುಗಳು ಸೇರಿ ಒಂದು ಜಿಲ್ಲೆಯಾಗಬೇಕು ಎಂಬ ಧ್ವನಿಗೆ ಬಲಬರುತ್ತಿದೆ. ಹೋರಾಟ ಸಮಿತಿ ರಾಜಕಾರಣಿಗಳನ್ನು ಭೇಟಿ ಮಾಡಿ ಬೆಂಬಲ ಕೇಳಿದೆ.

ಶಿರಸಿ ಬಂದ್‌ ಆಚರಿಸಿ ಬಲ ಪ್ರದರ್ಶನಕ್ಕೆ ಹೊರಟಿದೆ. ಆಡಳಿತಾತ್ಮಕವಾಗಿ ಜಿಲ್ಲೆ ಎರಡಾಗಿ ಭಾವನಾತ್ಮಕವಾಗಿ ಒಂದೇ ಉಳಿಯುವಂತಾದರೆ ಚೆಂದ ಅಲ್ಲವೇ? ಸ್ವಾತಂತ್ರ್ಯನಂತರ ರಾಜ್ಯ, ಜಿಲ್ಲೆ, ತಾಲೂಕುಗಳ ಪುನರ್ವಿಂಗಡನೆ ನಡೆಯಿತು. ನಂತರವೂ ಕೂಡ ಆಡಳಿತಾತ್ಮಕವಾಗಿ ಪಂಜಾಬ-ಹರಿಯಾಣ,ಆಂಧ್ರ-ತೆಲಂಗಾಣ ಹೀಗೆ ರಾಜ್ಯಗಳುವಿಭಜನೆಗೊಂಡವು. ಕರ್ನಾಟಕದಲ್ಲಿ ಹಲವುಜಿಲ್ಲೆ, ತಾಲೂಕುಗಳ ವಿಭಜನೆಯಾಗಿದೆ. 9 ತಾಲೂಕುಗಳುಳ್ಳ ದಕ್ಷಿಣ ಕನ್ನಡವಿಭಜನೆಯಾಯಿತು. ಇತ್ತೀಚಿನ ವರ್ಷದಲ್ಲಿಗದಗ, ರಾಮನಗರ ಜಿಲ್ಲೆಗಳಾದವು. ಮೊನ್ನೆವಿಜಯನಗರ ಜಿಲ್ಲೆ ರಚನೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ವಿಭಜನೆಯಾಗಲು ಅಂದಿನ ಸಚಿವ ಡಾ| ವಿ.ಎಸ್‌. ಆಚಾರ್ಯ ಮಂಚೂಣಿಯಲ್ಲಿದ್ದರು.

ಹ್ಯಾಗೆ, ಯಾಕೆ ಒಂದೇ ಧ್ವನಿಯಾಗಿ ಜಿಲ್ಲೆಯನ್ನು ವಿಭಜಿಸಿಕೊಂಡಿರಿ ಡಾಕ್ಟ್ರೇ ಎಂದು ಕೇಳಿದಾಗ, ದಕ್ಷಿಣ ಕನ್ನಡ ಜಿಲ್ಲೆಯ ಜನ ಭಾವನಾತ್ಮಕವಾಗಿ ಒಂದಾಗಿಯೇ ಇದ್ದೇವೆ, ಆಡಳಿತಾತ್ಮಕವಾಗಿ ವಿಭಜನೆಗೊಂಡಿದ್ದೇವೆ. ಇದರಿಂದ ಎರಡು ಜಿಲ್ಲಾಕೇಂದ್ರಗಳ ಜಿಲ್ಲಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಮತ್ತು ಇತರ ಎಲ್ಲ ಇಲಾಖೆಗಳ ಕಾರ್ಯಾಲಯಗಳ ಭೌಗೋಳಿಕ ವ್ಯಾಪ್ತಿ ಕಿರಿದಾಗಿ ಪರಿಣಾಮಕಾರಿ ಆಡಳಿತ ಸಾಧ್ಯವಾಗುತ್ತದೆ. ಜಿಲ್ಲಾವಾರು ಹೆಚ್ಚು ಹಣಕಾಸು ಬರುತ್ತದೆ.ಮಂತ್ರಿಸ್ಥಾನವೂ ಹೆಚ್ಚಾಗುತ್ತದೆ. ಜನರಿಗೂಆಡಳಿತಯಂತ್ರ ಕೈಗೆಟಕುವಂತಿರುತ್ತದೆ. ರಾಜಕೀಯ ಏನೇ ಇದ್ದರೂ ಅಭಿವೃದ್ಧಿಗೆ ನಾವೆಲ್ಲರೂ ಒಂದು ಎಂದಿದ್ದರು.

ಅಂತಹ ತಿಳಿವಳಿಕೆ ಇದ್ದಿದ್ದರೆ ಉತ್ತರಕನ್ನಡ ಜಿಲ್ಲೆ ಎಂದೋ ಅಭಿವೃದ್ಧಿ ಆಗುತ್ತಿತ್ತು. ಉ.ಕ. ಭಾವನಾತ್ಮಕವಾಗಿ ಒಂದಲ್ಲ, ಕೇವಲ ಆಡಳಿತಾತ್ಮಕವಾಗಿ ಒಂದಾಗಿದೆ. 11 ತಾಲೂಕುಗಳುಳ್ಳ ಉತ್ತರ ಕನ್ನಡ ರಾಜ್ಯದ 10ನೇ ದೊಡ್ಡ ಜಿಲ್ಲೆಯಾಗಿದೆ. 144 ಕಿಮೀ ಕರಾವಳಿಯಿದೆ. ಜಿಲ್ಲೆಯ ಭೌಗೋಳಿಕ ಪ್ರದೇಶ 10,24,679ಹೆಕ್ಟೇರ್‌ ಆಗಿದ್ದು, ಇದರಲ್ಲಿ 8,15,202 ಹೆಕ್ಟೇರ್‌ ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಿದೆ.ಗ್ರಾಮೀಣ ಜನಸಂಖ್ಯೆ 9 ಲಕ್ಷ, ನಗರದಲ್ಲಿ 4ಲಕ್ಷ ದಷ್ಟಿದೆ. ಜಿಲ್ಲೆಯ ಭಟ್ಕಳದಿಂದ ಜೊಯಿಡಾಕ್ಕೆಹೋಗಲು 10 ತಾಸು ಬೇಕು, 200 ಕಿಮೀ ದೂರ. ಆಡಳಿತಾತ್ಮಕವಾಗಿ ಸಮಗ್ರ ಜಿಲ್ಲೆಯನ್ನು ಪರಿಚಯ ಮಾಡಿಕೊಡಲು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಒಂದು ವರ್ಷ ಬೇಕು. ಒಬ್ಬ ಜಿಲ್ಲಾಧಿಕಾರಿ, ಒಬ್ಬ ಪೊಲೀಸ್‌ ವರಿಷ್ಠ ಜಿಲ್ಲೆಯ ನಾಡಿ ಹಿಡಿಯುವಷ್ಟರಲ್ಲಿ ವರ್ಗವಾಗಿ ಹೋಗುತ್ತಾರೆ. ಭೌಗೋಳಿಕವಾಗಿ, ನಕಾಶೆ ನೋಡಿದರೆ ಉ.ಕ. ಒಂದು ಜಿಲ್ಲೆ. ಕರಾವಳಿಯ ಸಮುದ್ರ, ಅರಮಲೆನಾಡು, ಕಾಡು, ಬಯಲುಸೀಮೆಯನ್ನೊಳಗೊಂಡ 400 ಮಿಮೀಯಿಂದ 4000ಮಿಮೀ ಮಳೆ ಸುರಿಯುವ ಬೆಟ್ಟ, ಘಟ್ಟ, ಕರಾವಳಿ, ಈ ಮೂರು ಅಂತಸ್ಥಿನ ಮಹಡಿಯಂತಿದೆ ಉತ್ತರಕನ್ನಡ ಜಿಲ್ಲೆ. ಕಲೆ, ಸಂಸ್ಕೃತಿ, ಜನಜೀವನ, ಊಟೋಪಚಾರ, ಉದ್ಯೋಗ,ಎಲ್ಲವೂ ಭಿನ್ನ. ಸಾಮಾನ್ಯವಾಗಿ ಕೃಷಿಕರು, ಮೀನುಗಾರರು ಎಂದು ವಿಭಜಿಸಬಹುದು. ಕೈಗಾರಿಕೆಗಳು ತೀರ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆ ಎರಡಾದರೆ ಅಭಿವೃದ್ಧಿಗೆ ಅನುಕೂಲ, ಮನಸ್ಸು ಕೂಡ ಹೆಚ್ಚು ಅಭಿಮಾನಪಡುವಂತೆ ಆಗುವ ಸಾಧ್ಯತೆ ಇದೆ.

ಇಂತಹ ಚಿಂತನೆಗಳಲ್ಲಿ ಸದಾ ಮುಂದಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತನ್ನಆಡಳಿತಕ್ಕಾಗಿ ಕರಾವಳಿ, ಘಟ್ಟದ ಮೇಲೆ ಎಂದು ವಿಭಜಿಸಿಕೊಂಡ ಮೇಲೆ ಹೆಚ್ಚು ವೇಗ ಪಡೆದುಕೊಂಡಿದೆ. ಕಾಗೇರಿಯವರು ಸಚಿವರಾಗಿದ್ದಾಗ ಎರಡು ಶೈಕ್ಷಣಿಕ ಜಿಲ್ಲೆ ಮಾಡಿದ ಕಾರಣ ಎರಡೂ ಜಿಲ್ಲೆ ಶೈಕ್ಷಣಿಕವಾಗಿ ಹೆಚ್ಚು ಸಾಧಿಸಲು ಸಾಧ್ಯವಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಇಬ್ಬರೂ ಜಿಲ್ಲೆಯ ಒಟ್ಟಾಭಿಪ್ರಾಯವಿದ್ದರೆ ವಿಭಜಿಸಿಕೊಡಲು ತೊಂದರೆಯೇನಿಲ್ಲ ಎಂದಿದ್ದರು. ವಿಧಾನಸಭಾಪತಿ ಕಾಗೇರಿ, ಸಂಸದ

ಅನಂತಕುಮಾರ ಈ ಕುರಿತು ಜಾಣಮೌನ ವಹಿಸಿದ್ದಾರೆ. ದೂರದರ್ಶಿತ್ವದ ನಾಯಕ ರಾಮಕೃಷ್ಣಹೆಗಡೆ ಆ ಕಾಲದಲ್ಲೇ ಸಾರಿಗೆ, ತೋಟಗಾರಿಕೆ, ವಿದ್ಯುತ್‌ ಜಿಲ್ಲಾಮುಖ್ಯಾಲಯಗಳನ್ನು ಶಿರಸಿಯಲ್ಲಿಆರಂಭಿಸಿದ್ದರು. ವಿಭಜನೆಗೊಂಡ ಜಿಲ್ಲೆಗಳು ಪ್ರಗತಿಸಾಧಿಸಿದ್ದು ಕಣ್ಣಮುಂದಿದೆ. ಹೀಗಿರುವಾಗ ಜಿಲ್ಲಾ ವಿಭಜನೆಯಾದರೆ ಚೆಂದವಲ್ಲವೇ?ಕರಾವಳಿಯ ತಾಲೂಕಿಗೆ ಹಾನಿಯಿಲ್ಲ ಎಂದು ಮೌನವಾಗಿದ್ದು ವಿಭಜನೆಯನ್ನು ಬೆಂಬಲಿಸಿದಂತಿದೆ.ವಸ್ತುನಿಷ್ಠವಾಗಿ ಆಲೋಚಿಸುವಂತಾಗಲಿ.

 

-ಜೀಯು, ಹೊನ್ನಾವರ

ಟಾಪ್ ನ್ಯೂಸ್

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

Karnataka Govt.ಹೊರಗುತ್ತಿಗೆ ನೌಕರರ ನೇಮಕಕ್ಕೂ ಮೀಸಲಾತಿ

vJune 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ

June 13: 11 ಮೇಲ್ಮನೆ ಸ್ಥಾನಗಳಿಗೆ ಚುನಾವಣೆ, ಅಂದೇ ಫ‌ಲಿತಾಂಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-sirsi

Sirsi: ತಂಜಾವೂರಿನಲ್ಲಿ ನಡೆಯುವ ಭಾರತದ ರಾಜವಂಶಸ್ಥರ ಬೈಟಕ್ ಗೆ ಸೋಂದಾ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

Gokarna: ಪ್ರವಾಸಿ ಬೋಟ್ ಪಲ್ಟಿ ; 40 ಪ್ರವಾಸಿಗರ ರಕ್ಷಣೆ

3-sirsi

Sirsi: ಬಾರದ ಹೈನು ಪ್ರೋತ್ಸಾಹ; ಶೀಘ್ರ ಬಿಡುಗಡೆಗೆ ಒತ್ತಾಯ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

ಗೋರ್ಕಲ್ಲುಮನೆ ಕೆರೆ ಹೂಳೆತ್ತಿದರೆ ಹತ್ತಾರು ಎಕರೆ ಕೃಷಿಗೆ ವರದಾನ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

SSLC ಪರೀಕ್ಷೆ -2, 3ಕ್ಕೆ ಕೃಪಾಂಕ ಇಲ್ಲ; ಸಚಿವ ಮಧು ಬಂಗಾರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.