ಕಣ್ಮರೆಯಾದ ಮೋಹಕ ತಾರೆ, ಎಣೆಯಿಲ್ಲದ ಪ್ರತಿಭೆ ಶ್ರೀದೇವಿ


Team Udayavani, Feb 26, 2018, 8:25 AM IST

sridevi.jpg

ಮೋಹಕ ತಾರೆ ಶ್ರೀದೇವಿ ನಿಧನದಿಂದ ಹಿಂದಿ ಚಿತ್ರರಂಗ ಮಾತ್ರವಲ್ಲದೆ ಇಡೀ ದೇಶ ಆಘಾತಕ್ಕೊಳಗಾಗಿದೆ. ಬಾಲಿವುಡ್‌ನ‌ಲ್ಲಂತೂ ಅಕ್ಷರಶಃ ಸೂತಕದ ವಾತಾವರಣವಿದೆ. 54 ಸಾಯುವ ವಯಸ್ಸೇನೂ ಅಲ್ಲ ಹಾಗೂ ಶ್ರೀದೇವಿಗೆ ಸಾಯುವಂತಹ ಕಾರಣಗಳೂ ಇರಲಿಲ್ಲ. ಬಂಧುವಿನ ಮದುವೆ ಸಮಾರಂಭದಲ್ಲಿ ಭಾಗವಹಿಸಲು ದುಬಾಯಿಗೆ ಹೋಗಿದ್ದ ನಟಿಯನ್ನು ಜವರಾಯ ಅಲ್ಲಿಂದಲೇ ಸದ್ದಿಲ್ಲದೆ ಕರೆದೊಯ್ದಿದ್ದಾನೆ. ಭಾರತೀಯ ಚಿತ್ರರಂಗದಲ್ಲಿ ಅನೇಕ ಪ್ರತಿಭಾವಂತ, ಚೆಲುವಿನ, ಬೆಡಗು ಬಿನ್ನಾಣದ ನಟಿಯರು ಬಂದು ಹೋಗಿದ್ದಾರೆ. ಆದರೆ ಅವರು ಯಾರಿಂದಲೂ ತಲುಪಲಾಗದ ಎತ್ತರವನ್ನು ತಲುಪಿದ್ದರು ಎಂಬ ಕಾರಣಕ್ಕೆ ಶ್ರೀದೇವಿ ಮುಖ್ಯರಾಗುತ್ತಾರೆ.

ಬಾಲಿವುಡ್‌ನ‌ಲ್ಲಿ 80 ಮತ್ತು 90ರ ದಶಕ ಶ್ರೀದೇವಿಯದ್ದು. ಜನಪ್ರಿಯತೆ ಯಲ್ಲಿ ಆ ಕಾಲದ ನಟಿಯರು ಬಿಡಿ ನಟರನ್ನು ಕೂಡ ಮೀರಿಸಿದ್ದರು ಈ ನಟಿ. ಮುಗ್ಧ ಮುಖ, ಭಾವಪೂರ್ಣ ಕಣ್ಣುಗಳು, ಚಿಗರೆಯಂತೆ ಕುಣಿ ಯುವ ಹುಬ್ಬುಗಳು, ತುಟಿಯಂಚಿನಲ್ಲಿ ತುಂಟ ನಗು… ಇದರ ಒಡತಿ ಯನ್ನು ನೋಡಲು ಸಿನೇಮಾ ರಸಿಕರು ಮುಗಿಬೀಳುತ್ತಿದ್ದರು. ಶ್ರೀದೇವಿ ಇದ್ದರೆ ಕನಿಷ್ಠ ಹಾಕಿದ ಅಸಲಿಗೆ ಮೋಸವಾಗುವುದಿಲ್ಲ ಎಂಬ ಖಾತರಿ ಯಿತ್ತು. ಆಕೆಯನ್ನು ಮಿನಿಮಮ್‌ ಗ್ಯಾರಂಟಿ ನಟಿ ಎಂದು ಕರೆಯುತ್ತಿದ್ದರು. ನಾಯಕರ ಪಾರಮ್ಯವಿದ್ದ ಸಿನೇಮಾ ಲೋಕದಲ್ಲಿ ಈ ಟ್ರೆಂಡನ್ನು ಉಲ್ಟಾ ಮಾಡಿ ನಾಯಕಿಯೂ ಸಿನೇಮಾ ಗೆಲ್ಲಿಸಬಲ್ಲಳು ಎಂದು ತೋರಿಸಿಕೊಟ್ಟದ್ದು ಶ್ರೀದೇವಿ ಸಾಧನೆ. ಸರಿಸುಮಾರು ಎರಡು ದಶಕ ಶ್ರೀದೇವಿಯದ್ದೇ ಕಾರುಬಾರು. ಅಮಿತಾಭ್‌ ಬಚ್ಚನ್‌ನಂತಹ ಮೇರುನಟನೇ ಶ್ರೀದೇವಿ ಜತೆಗೆ ನಟಿಸುವ ಅವಕಾಶ ಸಿಗಬೇಕೆಂದು ಅಪೇಕ್ಷಿಸಿದ್ದು ಇದೆ. ಎರಡು ಪೀಳಿಗೆಯ ಬಹುತೇಕ ನಟರಿಗೆ ನಾಯಕಿಯಾಗಿದ್ದಾರೆ ಶ್ರೀದೇವಿ. ಕನ್ನಡದ ಬೆರಳೆಣಿಕೆಯ ಚಿತ್ರಗಳೂ ಸೇರಿದಂತೆ ಐದು ಭಾಷೆಗಳಲ್ಲಿ 300 ಚಿತ್ರಗಳಲ್ಲಿ ನಟಿಸಿರುವ ಈ ನಟಿಯ ಖಾತೆಯಲ್ಲಿ ಸೋಲುಗಳ ಲೆಕ್ಕ ಬಹಳ ಕಡಿಮೆ. ನೃತ್ಯ ಮತ್ತು ಅಭಿನಯ ಎರಡರಲ್ಲೂ ಸೈ ಎನಿಸಿದ್ದ ಅಪರೂಪದ ಕಲಾವಿದೆ ಈಕೆ. ಹವಾ ಹವಾಯಿಯಂತಹ ಶ್ರೀದೇವಿಯ ನೃತ್ಯಗಳು ಈಗಲೂ ಜನಪ್ರಿಯವಾಗಿವೆ. 1983 ಮತ್ತು 1987ರ ನಡುವೆ ಬರೀ ನಾಲ್ಕು ವರ್ಷಗಳಲ್ಲಿ ಶ್ರೀದೇವಿ ನಟಿಸಿದ್ದ 33 ಚಿತ್ರಗಳು ಬಿಡುಗಡೆಯಾಗಿದ್ದವು ಎನ್ನುವುದು ಆ ಕಾಲದಲ್ಲಿ ಈ ನಟಿ ಎಷ್ಟು ಜನಪ್ರಿಯರಾಗಿದ್ದರು ಮತ್ತು ಉದ್ಯಮಕ್ಕೆ ಎಷ್ಟು ಅನಿವಾರ್ಯವಾಗಿದ್ದರು ತಿಳಿಸುತ್ತದೆ.

ವೈಜಯಂತಿಮಾಲಾ, ದಿವ್ಯಭಾರತಿ, ಹೇಮಮಾಲಿನಿ, ರೇಖಾ ಹೀಗೆ ಬಾಲಿವುಡ್‌ ಆಳಿದ ದಕ್ಷಿಣದ ನಾಯಕಿಯರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಶ್ರೀದೇವಿ. ಆದರೆ ಅಲ್ಲಿಗೆ ಈ ಪರಂಪರೆಯೂ ನಿಂತು ಹೋಯಿತು. ಶ್ರೀದೇವಿ ಬಳಿಕ ದಕ್ಷಿಣದ ಬೇರೆ ಯಾವ ನಟಿಗೂ ನಂಬರ್‌ ಒನ್‌ ಸ್ಥಾನಕ್ಕೆ ಏರಲು ಸಾಧ್ಯವಾಗಲಿಲ್ಲ. ಇದಕ್ಕೆ ಚಿತ್ರರಂಗದ ಬದಲಾದ ಸ್ವರೂಪವೂ ಕಾರಣವಾಗಿರಬಹುದು.

ಎಲ್ಲರಿಗೂ ಆಗುವಂತೆ ಶ್ರೀದೇವಿ ಮೇಲೂ ವಯಸ್ಸು ಪ್ರಭಾವ ಬೀರ ತೊಡಗಿತು. 90ರ ದಶಕದ ಉತ್ತರಾರ್ಧದಲ್ಲಿ ಬಾಲಿವುಡ್‌ ಆಗಲೇ ಮಾಧುರಿ ದೀಕ್ಷಿತ್‌ ಆಕರ್ಷಣೆಗೊಳಗಾಗಿತ್ತು. ಜೂಹಿ ಚಾವ್ಲಾ ಅವರಂತಹ ಹೊಸ ನಟಿಯರೂ ಮುನ್ನೆಲೆಗೆ ಬರುವ ಸಂದರ್ಭದಲ್ಲಿ ಶ್ರೀದೇವಿ ನೇಪಥ್ಯಕ್ಕೆ ಸರಿಯುವುದು ಅನಿವಾರ್ಯವಾಗಿತ್ತು. ಕೊನೆಯ ಚಿತ್ರ ಎಂದು ಭಾವಿಸಿ ನಟಿಸಿದ್ದ ಭಾರೀ ಬಜೆಟ್ಟಿನ ರೂಪ್‌ ಕಿ ರಾಣಿ ಚೋರೋಂ ಕಿ ರಾಜಾ ಗಲ್ಲಾ ಪೆಟ್ಟಿಗೆಯಲ್ಲಿ ಮಕಾಡೆ ಮಲಗಿದಾಗ ಶ್ರೀದೇವಿ ಯುಗ ಮುಗಿಯಿತು ಎಂದು ಹೇಳಲಾಗಿತ್ತು. ಆದರೆ ಹಠ ಬಿಡದ ಶ್ರೀದೇವಿ 1997ರಲ್ಲಿ ಜುಡಾಯಿ ಎಂಬ ಹಿಟ್‌ ಚಿತ್ರ ನೀಡಿಯೇ ಬಾಲಿವುಡ್‌ಗೆ ವಿದಾಯ ಹೇಳಿದರು. ನಿರ್ಮಾ ಪಕ ಬೋನಿ ಕಪೂರ್‌ ಅವರನ್ನು ವಿವಾಹವಾಗುವ ಮೂಲಕ ಸಾಂಸಾ ರಿಕ ಜೀವನ ಪ್ರಾರಂಭಿಸಿದ ಶ್ರೀದೇವಿ ಅಪ್ಪಟ ಗೃಹಿಣಿಯಾಗಿ ಬದಲಾ ದರು. ಇಬ್ಬರು ಹೆಣ್ಣು ಮಕ್ಕಳಿಗೆ ತಾಯಿಯಾದರು. ಸಿನೇಮಾ ಲೋಕ ದಿಂದ ಸಂಪೂರ್ಣ ದೂರವಿದ್ದು, ಮಕ್ಕಳ ಲಾಲನೆಪಾಲನೆ ಮಾಡಿದರು.

15 ವರ್ಷದ ಸುದೀರ್ಘ‌ ಇಂಟರ್‌ವಲ್‌ ಬಳಿಕ ಇಂಗ್ಲೀಶ್‌ ವಿಂಗ್ಲೀಶ್‌ ಚಿತ್ರದಲ್ಲಿ ಮಾಗಿದ ಪಾತ್ರವನ್ನು ಮಾಡಿ ತನ್ನೊಳಗಿನ ಅಭಿನೇತ್ರಿಗಿನ್ನೂ ವಯಸ್ಸಾಗಿಲ್ಲ ಎಂದು ಸಾಬೀತುಪಡಿಸಿದರು.ಅನಂತರ ಮಾಮ್‌ ಎಂಬ ಥ್ರಿಲ್ಲರ್‌ ಚಿತ್ರದಲ್ಲಿ ನಟಿಸಿದರು. ಇದೀಗ ಹಿರಿಯ ಮಗಳು ಜಾಹ್ನವಿ ನಾಯಕಿಯಾಗಿದ್ದಾಳೆ. ಮಗಳ ಚೊಚ್ಚಲ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗ ಲಿದೆ. ಆದರೆ ಅದನ್ನು ನೋಡುವ ಭಾಗ್ಯ ಮಾತ್ರ ಶ್ರೀದೇವಿ ಹಣೆಯಲ್ಲಿ ಬರೆದಿಲ್ಲ ಎಂದು ಕಾಣಿಸುತ್ತದೆ. ಬೋನಿ ಕಪೂರ್‌ ಮೊದಲ ಪತ್ನಿ ಮೋನಾ ಕಪೂರ್‌ ಕೂಡ ಮಗ ಅರ್ಜುನ್‌ ಕಪೂರ್‌ ನಟಿಸಿದ ಚಿತ್ರ ಬಿಡುಗಡೆಯಾ ಗುವ ಒಂದು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು. ಇದೀಗ ಶ್ರೀದೇವಿಗೂ ಅದೇ ರೀತಿಯ ಸಾವು ಬಂದಿರುವುದು ಕಾಕತಾಳೀಯವೇ?

ಟಾಪ್ ನ್ಯೂಸ್

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.