ಅಗಲಿದ ಶ್ರೇಷ್ಠ ವ್ಯಕ್ತಿತ್ವ ನಿಸಾರ್‌ ಅಹಮದ್‌


Team Udayavani, May 5, 2020, 1:10 AM IST

ಅಗಲಿದ ಶ್ರೇಷ್ಠ ವ್ಯಕ್ತಿತ್ವ ನಿಸಾರ್‌ ಅಹಮದ್‌

ಸಹೃದಯಿ, ಸರಳಜೀವಿ, ಅತ್ಯುತ್ತಮ ಕವಿ ಮತ್ತು ಶ್ರೇಷ್ಠ ಮನುಷ್ಯ – ಇದೆಲ್ಲವೂ ಆಗಿದ್ದವರು ನಿಸಾರ್‌ ಅಹಮದ್‌. ಅವರು ಕನ್ನಡ ಸಾಹಿತ್ಯದ ತೋಟಕ್ಕೆ ಹೊಸ ಬಗೆಯ ಗಿಡ, ಮರ, ಬಳ್ಳಿ ಮತ್ತು ಹೂವುಗಳನ್ನು ತಂದವರು. ಆ ಮೂಲಕ, ಸಾಹಿತ್ಯ ಲೋಕವನ್ನು ಸಮೃದ್ಧಗೊಳಿಸಿದವರು.

ಶೋರೂಮ್‌ನಿಂದ ಆಗಷ್ಟೇ ತಂದದ್ದೇನೋ ಅನ್ನುವಷ್ಟು ನೀಟ್‌ ಆಗಿರುತ್ತಿದ್ದ ಕೋಟ್‌, ಅದಕ್ಕೆ ಒಪ್ಪುವ ಪ್ಯಾಂಟ್‌, ಈ ದಿರಿಸಿಗೆಂದೇ ‘ಸೃಷ್ಟಿಯಾಗಿದ್ದ’ ಟೈ, ಮಿರಮಿರ ಮಿಂಚುವ ಶೂ-ಹೆಚ್ಚಾಗಿ ಹೊರಗಿನ ಜನರಿಗೆ ನಿಸಾರ್‌ ಕಾಣಿಸುತ್ತಿದ್ದುದು ಹೀಗೆ.

ಅದನ್ನು ಕಂಡವರು, ನಿಸಾರ್‌ ಯಾವಾಗಲೂ ಕೋಟ್‌ ಹಾಕಿಕೊಂಡೇ ಇರ್ತಾರೆ, ಬೇಸಿಗೆಯಲ್ಲೂ ಕೂಡ ಅವರು ಕೋಟ್‌ ತೆಗೆಯುವುದಿಲ್ಲವಂತೆ ಹೌದಾ? ಎಂದು ಮುಗ್ಧವಾಗಿ ಕೇಳುವ ಜನರಿದ್ದರು.

ವಾಸ್ತವ ಏನೆಂದರೆ, ಸಭೆ- ಸಮಾರಂಭಗಳಿಗೆ ಬರುವಾಗೆಲ್ಲ, ಶಿಸ್ತಿನ ಸಿಪಾಯಿಯಂತೆ ಸೂಟುಧಾರಿಯಾಗಿ ನಿಸಾರ್‌ ಬರುತ್ತಿದ್ದುದು ನಿಜ. ಆದರೆ, ಉಳಿದ ಸಂದರ್ಭಗಳಲ್ಲಿ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು.

ಕಾವ್ಯ, ಪ್ರಬಂಧ, ವಿಜ್ಞಾನ ಬರಹ, ವಿಮರ್ಶೆ- ಹೀಗೆ ಎಲ್ಲಾ ಕ್ಷೇತ್ರದಲ್ಲೂ ನಿಸಾರ್‌ ಕೈಯ್ಯಾಡಿಸಿದರು. ನೂರು ಮಂದಿ ಅಹುದಹುದು ಅನ್ನುವ ಹಾಗೆ ಬರೆಯಬೇಕು ಎಂದು ಯೋಚಿಸಿದರು. ಹಾಗೆಯೇ ಬರೆದರು. ಆದರೂ ಕಾವ್ಯದಲ್ಲಿ ಸಿಕ್ಕಿದಂಥ ಯಶಸ್ಸು ಅವರಿಗೆ ಉಳಿದ ಪ್ರಕಾರಗಳಲ್ಲಿ ಸಿಗಲಿಲ್ಲ.

ಅದಕ್ಕಾಗಿ ನಿಸಾರ್‌ ಅವರಿಗೆ ಬೇಸರವಾಗಲಿ, ವಿಷಾದವಾಗಲಿ ಇರಲಿಲ್ಲ. ಉಳಿದವರಂತೆ ನಾನಾಗಲಿಲ್ಲ ಅನ್ನುವುದನ್ನು ಕೂಡ – ನಿಮ್ಮೊಡನಿದ್ದೂ ನಿಮ್ಮಂತಾಗದೆ ಎಂದು ಕವಿತೆಯ ಮೂಲಕವೇ ಹೇಳಿಬಿಟ್ಟರು.”ಬೆಣ್ಣೆ ಕದ್ದ ನಮ್ಮ ಕೃಷ್ಣಾ… ” ಪದ್ಯದ ಮೂಲಕ ಕವಿತೆಗೆ ಧರ್ಮದ ಹಂಗಿಲ್ಲ ಎಂದು ಸಾರಿದರು.

ಇಂಗ್ಲಿಷ್‌, ಹಿಂದಿ, ಉರ್ದು, ಪರ್ಷಿಯನ್‌- ಇವಿಷ್ಟು ಭಾಷೆಯಲ್ಲಿ ನಿಸಾರ್‌ ಅವರಿಗೆ ಪಾಂಡಿತ್ಯವಿತ್ತು. ಈ ಭಾಷೆಯಲ್ಲಿರುವ ಚೆಂದದ ಪದಗಳನ್ನು ಆಗಾಗ ಅವರು ಕನ್ನಡಕ್ಕೆ ತರುತ್ತಿದ್ದರು. ಅದುವರೆಗೂ ಎಲ್ಲೂ ಕೇಳಿರದ ಹೊಸ ಪದವೊಂದನ್ನು ಕಂಡಾಗ, ಕನ್ನಡ ಸಾಹಿತ್ಯ ಲೋಕ ಕೂಡ ಪುಳಕಗೊಳ್ಳುತ್ತಿತ್ತು.

ನಿಸಾರ್‌ ಅವರು ಈ ಪದವನ್ನು ಬಳಸಿದ್ದಾರೆ ಅಂದರೆ, ಅದಕ್ಕೆ ಒಂದು ಹಿನ್ನೆಲೆ, ಪ್ರಾಮುಖ್ಯತೆ ಇದ್ದೇ ಇರುತ್ತದೆ. ಅದರಲ್ಲಿ ಅನುಮಾನ ಬೇಡ ಎಂದು ಒಪ್ಪಿಕೊಳ್ಳುತ್ತಿತ್ತು. ತನ್ನ ಬರಹದಿಂದ ಹತ್ತು ಜನರಿಗೆ ಖುಷಿಯಾಗಿದೆ ಎಂದು ತಿಳಿದರೆ, ಮಗುವಿನಂತೆ ಸಂಭ್ರಮಿಸುತ್ತಿದ್ದರು.

ಅನನ್ಯ ಕಾವ್ಯಗಳು, ಅಪರೂಪದ ಬರಹಗಳು, ಶ್ರೇಷ್ಠ ವ್ಯಕ್ತಿತ್ವ ಮತ್ತು ಸೌಜನ್ಯ ಶೀಲ ಮಾತುಗಾರಿಕೆಯ ಮೂಲಕ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ್ದ ಆ ಹಿರಿಯರ ಕಣ್ಮರೆಯಿಂದಾಗಿ, ನಾಡು ಬಡವಾಗಿದೆ.

ಟಾಪ್ ನ್ಯೂಸ್

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.