Campaigns: ಪ್ರಚಾರದಲ್ಲಿ ದ್ವೇಷ ಭಾಷಣ: ಸ್ವಯಂ ನಿಯಂತ್ರಣ ಅಗತ್ಯ


Team Udayavani, Mar 21, 2024, 3:45 PM IST

14-editorial

“ತಮಿಳುನಾಡಿನಿಂದ ಬಂದವರು ಬೆಂಗಳೂರಲ್ಲಿ ಬಾಂಬ್‌ ಇಡುತ್ತಾರೆ’ ಎಂದು ಹೇಳಿಕೆ ನೀಡಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಚುನಾವಣ ಆಯೋಗವು, ರಾಜ್ಯ ಮುಖ್ಯ ಚುನಾವಣಧಿಕಾರಿಗೆ ಸೂಚಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಹಿನ್ನೆಲೆಯಲ್ಲಿ ಆಯೋಗವು ಕ್ರಮುಕ್ಕೆ ಮುಂದಾಗಿರುವುದು ಸಮಂಜಸವಾಗಿದೆ. ಚುನಾವಣೆ ಎಂದ ಮೇಲೆ “ಪ್ರಚಾರ’ ಇರಲೇಬೇಕು. ಆದರೆ ಅದು “ಅಪಪ್ರಚಾರ’ವಾಗಬಾರದು.

ಸ್ವತಂತ್ರ ಭಾರತದ ಈ 75 ವರ್ಷಗಳಲ್ಲಿ ಈಗ ನಡೆಯುತ್ತಿರುವುದು 18ನೇ ಲೋಕಸಭೆ ಚುನಾವಣೆ. ಇಲ್ಲಿವರೆಗಿನ ಎಲ್ಲ ಚುನಾವಣೆಗಳು ಪ್ರಚಂಡ ಪ್ರಚಾರ ವೈಖರಿಗಳನ್ನು ಕಂಡಿವೆ. ಚುನಾವಣೆ ಎಂದ ಮೇಲೆ ವಾಕ್ಸಮರ, ಟೀಕೆ- ಟಿಪ್ಪಣೆಗಳು, ಮೊನಚಾದ ಮಾತು, ವ್ಯಂಗ್ಯ ನುಡಿಗಳು ಸಹಜ. ಚುನಾವಣೆಗೆ ಪ್ರಚಾರವೇ ಜೀವಾಳ. ದಿಗ್ಗಜ ನಾಯಕರ ವಾಗ್ಯುದ್ಧಗಳನ್ನು ಈ ದೇಶದ ಮತದಾರರು ಕಂಡಿದ್ದಾರೆ. ಜವಾಹರಲಾಲ್‌ ನೆಹರೂ, ರಾಮ ಮನೋಹರ ಲೋಹಿಯಾರಿಂದ ಹಿಡಿದು ಅಟಲ್‌ ಬಿಹಾರ ವಾಜಪೇಯಿವರೆಗೆ ಅದ್ಭುತ ಚುನಾವಣ ಪ್ರಚಾರಕರು ನಮ್ಮನ್ನು ಪ್ರಭಾವಿಸಿದ್ದಾರೆ. ವಾಜಪೇಯಿ ಅವರ ಚುನಾವಣ ಭಾಷಣ ಕೇಳುವುದಕ್ಕಾಗಿಯೇ ಲಕ್ಷಾಂತರ ಜನರು ಸೇರುತ್ತಿದ್ದರು! ಮೇರು ನಾಯಕರ ಮಾತುಗಳಲ್ಲಿ ಮೊನಚು ಇರುತ್ತಿತ್ತೇ ಹೊರತು, ನಂಜಿರುತ್ತಿರಲಿಲ್ಲ.

ಇತ್ತೀಚಿನ ಚುನಾವಣೆಗಳಲ್ಲಿ ಪ್ರಚಾರ ಎಂದರೆ “ದ್ವೇಷ ಭಾಷಣ’ಗಳು ಎಂಬಂತಾಗಿವೆ. ವೈಯಕ್ತಿಕ ನಿಂದನೆ, ತೇಜೋವಧೆ, ಭಾಷೆಯಾಧಾರಿತ ಮತ್ತು ಸಮುದಾಯಗಳ ವಿರುದ್ಧ ನಿಂದನೆಗಳು ಹೆಚ್ಚುತ್ತಲೇ ಇವೆ. ಇತ್ತೀಚಿಗೆ ಯಾತ್ರೆ ಕೈಗೊಂಡಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡುವ ಭರದಲ್ಲಿ “ಪನೌತಿ’ (ಅಪಶಕುನ) ಎಂಬ ಹೇಳಿಕೆ ನೀಡಿ ಚುನಾವಣ ಆಯೋಗದಿಂದ ಛೀಮಾರಿ ಹಾಕಿಸಿಕೊಂಡಿದ್ದರು. 2019ರಲ್ಲಿ ಮೋದಿಯನ್ನು ಟೀಕಿಸಲು ಹೋಗಿ ಲೋಕಸಭಾ ಸದಸ್ಯತ್ವಕ್ಕೇ ಕುತ್ತು ತಂದುಕೊಂಡಿದ್ದರು. ರಾಹುಲ್‌ ಎಂದೇನಲ್ಲ, ಅನೇಕ ರಾಜಕಾರಣಿಗಳು ಹದ್ದು ಮೀರಿ ಮಾತನಾಡಿದ್ದಿದೆ. ಇದೀಗ ಶೋಭಾ ಕರಂದ್ಲಾಜೆ ಸರದಿ.

ಈ ದ್ವೇಷ ಭಾಷಣ ಎಂಬುದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಧ್ರುವೀಕರಣ ಮಾಡುವ ಮೂಲಕ ಮತಗಳನ್ನು ಸೆಳೆಯಲು ದ್ವೇಷ ಭಾಷಣಕ್ಕೆ ರಾಜ ಕೀಯ ನಾಯಕರು ಜೋತು ಬೀಳುತ್ತಿರುವುದು ಕಟುವಾಸ್ತವ. ಆ ಕಾರಣ ಕ್ಕಾಗಿಯೇ ಪ್ರಸಕ್ತ ಚುನಾವಣೆಯಲ್ಲಿ ದ್ವೇಷ ಭಾಷಣ ಕಡಿವಾಣ ಹಾಕಲು ಕೇಂದ್ರ ಚುನಾವಣ ಆಯೋಗವು ಎಲ್ಲ ರಾಜಕೀಯ ಪಕ್ಷಗಳಿಗೆ ಖಡಕ್ಕಾದ ಎಚ್ಚರಿಕೆ ನೀಡಿತ್ತು. ಇಷ್ಟಾಗಿಯೂ ರಾಜಕಾರಣಿಗಳು ಎಚ್ಚೆತ್ತುಕೊಳ್ಳುದಿರುವುದು ನಮ್ಮ ಚುನಾ ವಣ ಪ್ರಚಾರದ ಕೀಳು ಮಟ್ಟವನ್ನು ಅದು ತೋರಿಸುತ್ತದೆ. ಇದು ಹೀಗೆಯೇ ಮುಂದುವರಿದರೆ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕಳಂಕ ತಟ್ಟದೇ ಇರದು.

ದ್ವೇಷ ಭಾಷಣಗಳಿಗೆ ಕಡಿವಾಣಕ್ಕೆ ಕಾನೂನು ಮೂಲಕ ಕ್ರಮ ಕೈಗೊಳ್ಳುವುದು ಒಂದು ಪರಿಹಾರ ಮಾರ್ಗವಾದರೆ, ಮತ್ತೂಂದು ಸ್ವಯಂ ನಿಯಂತ್ರಣ ಹಾಕಿಕೊಳ್ಳುವುದು. ಚುನಾವಣ ಪ್ರಚಾರ ಮಾತ್ರವಲ್ಲ, ಸಾರ್ವಜನಿಕ ಜೀವನ ದಲ್ಲಿರುವವರು ಎಲ್ಲ ಸಮಯದಲ್ಲೂ ಮಾತಿನ ಮೇಲೆ ಹಿಡಿತ ಹೊಂದುವುದು ಅಗತ್ಯ. ಅವರ ಮಾತುಗಳು ಸಭ್ಯತೆಯನ್ನು ಮೀರಬಾರದು. “ನುಡಿದರೆ ಲಿಂಗ ಮೆಚ್ಚಿ ಅಹುದನೆಬೇಕು’ ಎಂಬ ಬಸವಣ್ಣನವರ ಮಾತನ್ನು ಪಾಲಿಸಿದರೆ, ಬಹುಶಃ ದ್ವೇಷಾಸೂಯೆಗಳಿಗೆ ಪ್ರಚಾರದಲ್ಲಿ ಜಾಗವೇ ಇರುವುದಿಲ್ಲ

ಟಾಪ್ ನ್ಯೂಸ್

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.