ಯೋಗಗಳು ಯಾಕೆ ಕೈಕೊಡುತ್ತವೆ ಗೊತ್ತಾ?


Team Udayavani, Nov 26, 2016, 7:10 AM IST

13.jpg

ಯೋಗಗಳು ಎಂದರೆ ಅನೇಕ ಗ್ರಹಗಳು ಬೇರೆ ಬೇರೆ ಕಾರಣಗಳಿಂದಾಗಿ ಒಂದೇ ಮನೆ ಅಥವಾ ಒಂದೇ ಒಂದನ್ನು ಸುಸಂಬದ್ಧವಾಗಿ ಒಬ್ಬ ವ್ಯಕ್ತಿಗೆ ಒದಗಿಸಿಕೊಡಲು ಒಂದು ಸಂಪನ್ನ ಪ್ರಮಾಣದಲ್ಲಿ ತಮ್ಮ ಸಂಬಂಧಗಳನ್ನು ಒಂದು ಶಿಷ್ಟ ಶಕ್ತಿಯನ್ನಾಗಿ ರೂಪಿಸಿಕೊಳ್ಳಲು ಸಾಧ್ಯವಾದಾಗ, ಪರಿಣಾಮಕಾರಿಯಾದ ಸಕಾರಾತ್ಮಕ ಸ್ಪಂದನಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾದಾಗ, ಒಳಿತನ್ನು ಮಾಡಿಕೊಡುವ ಒಳಾಂತರ್ಗತ ಶಕ್ತಿಯನ್ನು ಒಂದು ದಶಾಕಾಲದ ಅಥವಾ ದಶಾಕಾಲದ ಭುಕ್ತಿಯಲ್ಲಿ ಕಾಲಘಟ್ಟ ಹೊರಹೊಮ್ಮಿಸಲು ಸಾಧ್ಯವಾದಾಗ, ಬದುಕಿನ ಗೆಲುವಿಗೆ, ಕೀರ್ತಿಗೆ, ಧನಸಂಚಯನಕ್ಕೆ ಇಷ್ಟಾರ್ಥ ಸಿದ್ಧಿಗೆ ದಾರಿ ಮಾಡಿಕೊಡುತ್ತದೆ. ಸಹಜವಾಗಿಯೇ ಆ ವ್ಯಕ್ತಿಯ ಜೀವನದಲ್ಲಿ ಸಂತೋಷ ಸಾಮಾನ್ಯ.

ಮೇಲೆ ಹೇಳಿದ ಯೋಗಗಳ ಹಾಗೆಯೇ ನಕಾರಾತ್ಮಕ ಸಿದ್ಧಿಗೆ ಕಾರಣವಾಗುವ ಹಾಗೆ ಸೂಕ್ತವಲ್ಲದ ಕಾರಣಗಳಿಂದಾಗಿ ಸೂಕ್ತವಲ್ಲದ ಗ್ರಹಗಳು ಒಬ್ಬ ವ್ಯಕ್ತಿಯ ಜಾತಕ ಕುಂಡಲಿಯಲ್ಲಿ ಕೆಟ್ಟ ಯೋಗಗಳನ್ನು ಹರಳುಗಟ್ಟಿಸುತ್ತದೆ. ಕಾರಾಗೃಹ ಯೋಗ, ಧನನಾಶ, ಕೇಮದ್ರುಮ ಕಾಳಸರ್ಪ ಯೋಗ, ಅಂಗಛೇದನ ಅರಿಷ್ಟಾರಿಷ್ಟ ಸಂತಾನ ನಾಶ, ಕುಲನಾಶ ದುರ್ಮರಣ ಯೋಗ ಇತ್ಯಾದಿ. ಆದರೆ ಯೋಗಗಳು ಒಳ್ಳೆಯದಿರಲಿ ಕೆಟ್ಟದ್ದೇ ಇರಲಿ ಅವು ಸಂಭವಿಸಿ ಆ ಯೋಗಗಳು ಕೂಡಿಬರುವ ಗ್ರಹಗಳು ತಂತಮ್ಮ ಕೆಲಸಗಳನ್ನು ಸದ್ದಿರದೆ ಮಾಡಿ ಮುಗಿಸುತ್ತದೆ. ಹೀಗೆ ಯೋಗ ಎಂದರೆ ಒಟ್ಟಿನಲ್ಲಿ ಹೊಂದಿಕೆ ಅಥವಾ ಕೂಡಿ ಬರುವುದು ಅದೃಷ್ಟ ಪ್ರಾಪ್ತಿ ಸಕಾರಾತ್ಮಕ ಯಾ ನಕಾರಾತ್ಮಕ ಯೋಜನೆ ಎಂದರ್ಥ.

ಯೋಗಗಳು ಏಕೆ ಕೈ ಕೊಡುತ್ತದೆ
ಇಂಥದೊಂದು ಯೋಗವಿದೆ ಎಂದು ಜೋತಿಷ್ಯ ಹೇಳಿದಾಗಲೂ ಯೋಗಗಳು ಸಂಭವಿಸಿಲ್ಲ ಎಂದು ಗೊಣಗುವುದನ್ನು ನಾವು ಕೇಳುತ್ತಿರುತ್ತೇವೆ. ಯೋಗಗಳೇ ಇರದವರು ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸುತ್ತಿರುತ್ತಾರೆ. ಕೆಲವರು ಒಳ್ಳೆಯ ಧನಯೋಗ ಇದ್ದರೂ ದರಿದ್ರಗಳಾಗಿ ಕಾಣಿಸಿಕೊಳ್ಳುತ್ತಾರೆ. ಒಳ್ಳೆಯದನ್ನು ಕಂಡು ಕೆಟ್ಟದ್ದಕ್ಕೆ ತಲುಪಿ ದಿವಾಳಿಯಾಗಿ ತಲೆಮರೆಸಿಕೊಂಡರಿದ್ದಾರೆ. ಕೆಟ್ಟದ್ದನ್ನು ಅನುಭಸುತ್ತಿದ್ದಾಗಲೇ ಸರ್ರನೆ ಒಳಿತಿಗೆ ದಾರಿ ಮಾಡಿಕೊಡುವ ಅದೃಷ್ಟ ಒದಗಿ ಅದ್ಭುತ ಯಶಸ್ಸಿಗೆ ಬಂದು ತಲುಪುತ್ತಾರೆ. ಜೀವನಪರ್ಯಂತ ಸುಖ ಕಾಣದೆ ಅಷ್ಟದರಿದ್ರಗಳಾಗಿರುತ್ತಾರೆ. ಸುಖ ಇದೆ ಎಂಬುದನ್ನು ತೋರಿಸುವವರಿರುತ್ತಾರೆ. ಸುಖವಿದ್ದರೂ ಕಷ್ಟ ಕಷ್ಟ ಎಂದು ಅಳುವವರೂ ಇರುತ್ತಾರೆ. ಅದ್ಭುತ ಅದೃಷ್ಟಗಳನ್ನು ಒಂದು ಯೋಗದ ಕಾರಣದಿಂದ ಪಡೆಯುವಲ್ಲಿ ಆ ಅದೃಷ್ಟ ಕೊಡಬೇಕಾದ ಶಕ್ತಿಯನ್ನು ಸೂಕ್ತವಾಗಿ ಪಡೆಯದೇ ದುರ್ಬಲತೆಯನ್ನು ಪಡೆದಿದ್ದರೆ ಯೋಗಗಳಿದ್ದೂ ವಿಫ‌ಲರಲಾರದು. ಆಗ ಕೈಕೊಡುತ್ತದೆ. ನಮ್ಮ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯರ ಜಾತಕ ಪರಿಶೀಲನೆ ಮಾಡಿದಾಗ ರಾಜಯೋಗಗಳಿದ್ದೂ ಅವು ಕೈಕೊಡುವ ವಿಧಾನಗಳನ್ನು ಗಮನಿಸಬಹದು. ರಾಮಕೃಷ್ಣ ಹೆಗಡೆ, ಲಾಲ ಕೃಷ್ಣ ಆಡ್ವಾಣಿ, ಸಿನಿಮಾ ರಂಗದ ಮೀನಾಕುಮಾರಿ, ರಾಜ್‌ಕಪೂರ್‌, ಕ್ರಿಕೆಟ್‌ನ ವಿನೋದ್‌ ಕಾಂಬ್ಳಿ, ಬಿ.ಎಸ್‌. ಚಂದ್ರಶೇಖರ್‌, ಇ.ಎ.ಎಸ್‌. ಪ್ರಸನ್ನ, ಶಿವಲಾಲ್‌ ಯಾದವ್‌, ಇಂದಿರಾ ಗಾಂಧಿ, ಸಂಜಯ್‌ ಗಾಂಧಿ, ರಾಜೀವ್‌ ಗಾಂಧಿ, ರಾಹುಲ್‌ಗಾಂಧಿ, ಎನ್‌ ಟಿ ರಾಮರಾವ್‌ ಮುಂತಾದವರು ತಲುಪಬೇಕಾದ  ಶಿಖರಗಳು ಬಹಳವೇ ಇದ್ದವು. ಬದುಕಿನ ಬಹುಮುಖ್ಯ ಘಟ್ಟಗಳಲ್ಲಿ ತೊಳಲಾಟಗಳನ್ನು ನಡೆಸಿದವರ ಪಟ್ಟಿಯಲ್ಲಿ ಈ ಹೆಸರುಗಳೆಲ್ಲ ಬರುತ್ತವೆ. ಪ್ರತಿ ವ್ಯಕ್ತಿಯ ಬಗೆಗೆ ಬರೆಯುವಾಗಲೂ ಒಂದು ಹೊತ್ತಗೆಯನ್ನೇ ಬರೆಯಬಹುದು. ಇಂದಿರಾ ಗಾಂಧಿಯವರಿಗೆ ತುರ್ತು ಪರಿಸ್ಥಿತಿ ಹೇರಲು ಮನಸ್ಸಿರಲಿಲ್ಲ ಎಂದರೆ ನಂಬುತ್ತೀರಾ? ಅವರು ತುರ್ತು ಪರಿಸ್ಥಿತಿ ಹೇರಿದ್ದೇ ಕಾರಣವಾಗಿ ಎಷ್ಟೆಲ್ಲಾ ಅನಾಮಧೇಯರು ಮುಂದಾಳಾದರು? ಆ ಮುಂದಾಳುಗಳಲ್ಲಿ ಬಹುತೇಕ ಜನ ಈಗ ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. 

ಮೊರಾರ್ಜಿಯವರಿಗೆ ಕೈಕೊಟ್ಟ ಯೋಗಗಳು
 ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಆಡಳಿತದ ಆಳ ಅಗಲಗಳ ಹಿಡಿತ ಹಾಗೂ ಚಾಣಾಕ್ಷತೆ ದಕ್ಷತೆ ನಿಷ್ಟುರತೆ ಇತ್ಯಾದಿಗಳನ್ನು ಗಮನಿಸುವುದಾದರೆ ನೆಹರು ನಂತರ ಪ್ರಧಾನಿಯಾಗಿ ಇವರು ದೇಶವನ್ನು ಮುನ್ನೆಡಸಬೇಕಿತ್ತು. ಆದರೆ ಇವರ ನಿಷ್ಟುರತೆ ಮರಣ ಸ್ಥಾನದಲ್ಲಿ ಇವರ ಲಗ್ನಾಧಿಪತಿಯ ಉಪಸ್ಥಿತಿ ಇವರು ಸದಾ ವಿರೋಧಿಗಳನ್ನು ಸೃಷ್ಟಿಸಿಕೊಂಡರು. ವಿರೋಧಿಗಳು ಇವರ ಕಾಲೆಳೆದರು. ಪ್ರಧಾನಿ ಪಟ್ಟ ಕೈ ತಪ್ಪುತ್ತಲೇ ಇತ್ತು. ಉತ್ತಮವಾದ ರಾಜಯೋಗ, ಪರಿವರ್ತನಾಯೋಗ ದುಃಸ್ಥಾನಗಳಲ್ಲಿ ಇದ್ದುದರಿಂದ ಎಲ್ಲಾ ಯೋಗ್ಯತೆ ಇದ್ದರು ಪ್ರಧಾನಿ ಪಟ್ಟ ಕೈತಪ್ಪುತ್ತಾ ಇಂದಿರಾ ಪ್ರಭಾವದ ಎದುರು ಒಂದರ್ಥದಲ್ಲಿ ಮುರಾರ್ಜಿ ಕಸದ ಬುಟ್ಟಿಗೇ ಎಸೆಯಲ್ಪಟ್ಟಂತೆ ದುರ್ಬಲರಾಗಿ ಹೋದರು. ಇವರ ಧೈರ್ಯ ಮುಖಕ್ಕೆ ಹೊಡೆಯುವಂತೆ ಮಾತಾಡುವ ಶಕ್ತಿ ಭ್ರಷ್ಟರನ್ನು ಮಟ್ಟಹಾಕಬೇಕೆಂಬ ಬಲವಾದ ಇಚ್ಛೆ ಇವರ ಪಾಲಿಗೆ ಮಿತ್ರರಿಗಿಂತ ಶತೃಗಳು ಜಾಸ್ತಿಯಾಗಿ ಅಪ್ರಸ್ತುತರಾದರು. ಆದರೆ ಅವರ ವಿಧಿ ಅವರನ್ನು ದೀರ್ಘಾಯುಗಳನ್ನಾಗಿಸಿತ್ತು. 

ರಾಜಯೋಗದ ಭಾಷೆಗೆ ಜೀವಂತಿಕೆ ಸಿಕ್ಕಿತು
ವರ್ಷ 81 ಆದಾಗ ಯಾರು ದೈಹಿಕವಾಗಿ ಪ್ರಬಲರಾಗಿರಲು ಸಾಧ್ಯ? ಆದರೆ ಮುರಾರ್ಜಿ ವರ್ಷ 81ರಲ್ಲೂ ಲವಲವಿಕೆ ಆರೋಗ್ಯ ತೀಕ್ಷ್ಣತೆಯಿಂದಲೇ ಇದ್ದರು. ಉತ್ಛನಾದ ಶನಿ, ಉತ್ಛನಾದ ಗುರು, ಉತ್ಛನಾದ ಮಂಗಳ ಆಯಸ್ಸನ್ನು ವೃದ್ಧಿ ಸುವ ಮರಣಸ್ಥಾನದಲ್ಲಿನ ಚಂದ್ರನ ಸಮೃದ್ಧಿಯಿಂದಾಗಿ ಚೈತನ್ಯ ಧೈರ್ಯಗಳೆಲ್ಲ ಇಳಿತ ವಾದ್ದರಿಂದ ಲಗ್ನಾಧಿಪತಿ ಬುಧನ ಸಂಪನ್ನತೆಗಳ ಫ‌ಲವಾಗಿ ಜೆಪಿ ಚಳವಳಿ ಇಂದಿರಾರ ಜನಪ್ರಿಯತೆಯು ತುರ್ತು ಸ್ಥಿತಿ ಹೇರಿದ ಪರಿಣಾಮವಾಗಿ ಕುಸಿದಿದ್ದರಿಂದ ನೆರವು ಒದಗಿಬಂದು ಪ್ರಧಾನಿಯಾದರು. 81ನೇ ವಯಸ್ಸಿಗೆ ಪ್ರಧಾನಿಯಾದರೂ ಶಕ್ತಿ ಉತ್ಸಾಹಗಳಿದ್ದವು ಎಂಬುದನ್ನು ತಿಳಿಯುವುದು ಇಲ್ಲಿ ಅಗತ್ಯ. ಇದು ವಿಧಿವಿಲಾಸ ಆದರೆ ರಾಜಯೋಗವು ಅಷ್ಟೇ ಕ್ಷಿಪ್ರವಾಗಿ ಕರಗುವ ದೌರ್ಬಾಗ್ಯವನ್ನು ಕೊಟ್ಟಿದ್ದರಿಂದ 28 ತಿಂಗಳುಗಳಲ್ಲಿ ಪ್ರಧಾನಿ ಪಟ್ಟದಿಂದ ನಿರ್ಗಮನವೂ ಆಗಬೇಕಾಯಿತು. ಅಧಿಕಾರ ಬೇರೆ. ಆದರೆ ಸಿದ್ಧಾಂತಗಳ ಕಾರಣಕ್ಕಾಗಿ ಅನ್ಯ ವಾಮ ಮಾರ್ಗಗಳಲ್ಲಿ ಹೆಜ್ಜೆ ಇಡಲಾರೆವೆಂಬ ಬದ್ಧತೆ ತಿರುಗಿ ಅವರನ್ನು ಮೂಲೆಗೆ ತಳ್ಳಿತು.

ವಿಧಿಯ ಚದುರಂಗದಾಟ ಬೇರೆ ಬೇರೆ
ಬಿಜೆಪಿಯ ವಾಜಪೇಯಿ ಆಡ್ವಾಣಿಯವರನ್ನೇ ಗಮನಿಸಿ ರಾಜಯೋಗ ಇಬ್ಬರಿಗೂ ಇದೆ. ವಾಜಪೇಯಿ ಪ್ರಧಾನಿಗಳಾದರು. ಅಷ್ಟೇ ಶಕ್ತಿಇರುವ ಆಡ್ವಾಣಿಯವರು ಪ್ರಧಾನಿಗಳಾಗಲಿಲ್ಲ.  ದೇವೇಗೌಡ ಪ್ರಧಾನಿಯಾದರು ಆದರೆ ಉರುಳಿದರು. ರಾಮಕೃಷ್ಣ ಹೆಗಡೆ ಪ್ರದಾನಿಯಾಗಲಿಲ್ಲ. ಸಿದ್ಧರಾಮಯ್ಯ ಮುಖ್ಯಮಂತ್ರಿಗಳಾದರು. ಪರಮೇಶ್ವರ್‌ ಆಗಲಿಲ್ಲ. ಕೂದಲೆಳೆಯಲ್ಲಿ ಎಲ್ಲವೂ ತಪ್ಪುತ್ತದೆ. ರಾಜಕೀಯದಿಂದ ದೂರವೇ ಉಳಿದರೂ ರಾಜೀವ್‌ರನ್ನು ಪ್ರಧಾನಿ ಪಟ್ಟದಲ್ಲಿ ವಿಧಿ ರಚ್ಚೆ ಹಿಡಿದು ತಂದು ಕೂಡಿಸಿತು. ರಾಹುಲ್‌ ಪ್ರಧಾನಿಯಾಗಬಹುದಿತ್ತು ಆದರೆ ಮನಮೋಹನ್‌ ಸಿಂಗ್‌ ಆದರು.  

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.