“ಗಜಾನನ ಆ್ಯಂಡ್‌ ಗ್ಯಾಂಗ್‌” ವಿಮರ್ಶೆ: ಕ್ಯಾಂಪಸ್‌ನಲ್ಲೊಂದು ಗ್ಯಾಂಗ್‌ ಸ್ಟೋರಿ


Team Udayavani, Jun 4, 2022, 1:24 PM IST

gajanana and gang film review

ಅವರೆಲ್ಲರೂ ಆಗತಾನೇ ಪಿಯುಸಿ ಮುಗಿಸಿ, ಪದವಿ ಶಿಕ್ಷಣಕ್ಕಾಗಿ ಕಾಲೇಜು ಮೆಟ್ಟಿಲೇರಿದ ಹುಡುಗರು. ಬೇರೆ ಬೇರೆ ಕಡೆಗಳಿಂದ ಬಂದ ಈ ಐದಾರು ಹರೆಯದ ಹುಡುಗರನ್ನು ಒಂದಾಗಿಸುವುದು ಸ್ನೇಹ. ಈ ಸ್ನೇಹಕೂಟಕ್ಕೆ ಒಬ್ಬ ನಾಯಕ, ಅವನೇ ಗಜಾನನ. ಆರಂಭದಲ್ಲಿ ಸೀನಿಯರ್‌ ಹುಡುಗರ ತಂಟೆ -ಕ್ಯಾತೆಗಳನ್ನು ಎದುರಿಸುವುದಕ್ಕಾಗಿ ಕೈ ಮಿಲಾಯಿಸಿ ಒಂದಾಗುವ ಈ ಹುಡುಗರ ಗುಂಪು, ಅದನ್ನು ಎದುರಿಸುವ ಭರದಲ್ಲಿ ಇಡೀ ಕಾಲೇಜಿನಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತದೆ. ಮುಂದೆ, ಅದೇ ಕಾಲೇಜ್‌ ಕ್ಯಾಂಪಸ್‌ನಲ್ಲಿ ಏನೇ ಗಲಾಟೆಗಳಾದರೂ ಅದಕ್ಕೆಲ್ಲ ಕಾರಣ “ಗಜಾನನ ಆ್ಯಂಡ್‌ ಗ್ಯಾಂಗ್‌’ ಎಂಬ ಕುಖ್ಯಾತಿಗೂ ಕಾರಣವಾಗುತ್ತದೆ. ಇಂಥ ಹುಡುಗರು ಕಾಲೇಜ್‌ನಲ್ಲಿ ಏನೇನು ಮಾಡುತ್ತಾರೆ, ಇವರ ಲೈಫ್ ಸ್ಟೋರಿ ಹೇಗಿರುತ್ತದೆ ಎಂಬುದೇ ಈ ವಾರ ತೆರೆಗೆ ಬಂದಿರುವ “ಗಜಾನನ ಆ್ಯಂಡ್‌ ಗ್ಯಾಂಗ್‌’ ಸಿನಿಮಾದ ಕಥಾಹಂದರ.

ಇನ್ನು “ಗಜಾನನ ಆ್ಯಂಡ್‌ ಗ್ಯಾಂಗ್‌’ ಸಿನಿಮಾದ ಟೈಟಲ್ಲೇ ಹೇಳುವಂತೆ, ಇದು ಅಪ್ಪಟ ಕಾಲೇಜ್‌ ಹುಡುಗರ ಸಿನಿಮಾ. ಮಾಮೂಲಿ ಕಾಲೇಜ್‌ ಸ್ಟೋರಿ ಸಿನಿಮಾಗಳಂತೆ, ಇಲ್ಲೂ ಸ್ನೇಹ, ಪ್ರೀತಿ, ಮುನಿಸು, ಹೊಡೆದಾಟ, ಗುದ್ದಾಟ ಕೊನೆಗೆ ಜೀವನ ಪಾಠ ಎಲ್ಲವನ್ನೂ ತೆರೆಮೇಲೆ ಹೇಳಲಾಗಿದೆ.

ಮೊದಲರ್ಧ ಇಡೀ ಕಾಲೇಜ್‌ ಕ್ಯಾಂಪಸ್‌ನಲ್ಲೇ ಸುತ್ತುವ ಚಿತ್ರಕಥೆ, ದ್ವಿತಿಯಾರ್ಧದಲ್ಲಿ ಕ್ಯಾಂಪಸ್‌ ಕಾಂಪೌಂಡ್‌ದಾಟುತ್ತದೆ. ಎಲ್ಲರ ಜೀವನದಲ್ಲೂ ನಡೆದಿರುವಂತೆ ಕಾಣುವ ಕಥೆಯನ್ನು ಹಾಸ್ಯಮಯವಾಗಿ ಹೇಳಲು ಚಿತ್ರತಂಡ ಯಶಸ್ವಿಯಾಗಿದೆ. ಚಿತ್ರಕಥೆಗೆ ಒಂದಷ್ಟು ವೇಗ ಸಿಕ್ಕು, ಸಂಭಾಷಣೆಗಳು ಇನ್ನಷ್ಟು ಮೊನಚಾಗಿದ್ದರೆ, ತೆರೆಮೇಲೆ “ಗಜಾನನ ಆ್ಯಂಡ್‌ ಗ್ಯಾಂಗ್‌’ ಆಟ-ಓಟ ಎರಡೂ ಇನ್ನಷ್ಟು ಪರಿಣಾಮಕಾರಿಯಾಗಿರುವ ಸಾಧ್ಯತೆಗಳಿದ್ದವು.

ಇದನ್ನೂ ಓದಿ:ಕೆಕೆ ಸಾವಿಗೂ ಮುನ್ನ ಪೋಸ್ಟ್: ಕ್ಷಮೆಯಾಚಿಸಿದ ಬಂಗಾಳಿ ಗಾಯಕ ರೂಪಂಕರ್

ಚಿತ್ರದ ನಾಯಕ ಶ್ರೀ ಮಹಾದೇವ್‌, ಅದಿತಿ ಪ್ರಭುದೇವ, ಲಿಯೋ ಶರ್ಮ ತಮ್ಮ ಪಾತ್ರಗಳಲ್ಲಿ ಗಮನ ಸೆಳೆಯುತ್ತಾರೆ. ಅಭಿಷೇಕ್‌ ಶೆಟ್ಟಿ, ಅಶ್ವಿ‌ನ್‌ ಹಾಸನ್‌, ನಾಟ್ಯರಂಗ ಮೊದಲಾದ ವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ತಾಂತ್ರಿಕವಾಗಿ ಚಿತ್ರವನ್ನು ಎತ್ತಿ ಹಿಡಿಯುತ್ತದೆ. ಕಾಲೇಜು ಹುಡುಗರ ಮೋಜು-ಮಸ್ತಿಯನ್ನು ಮೆಲುಕು ಹಾಕಲು ಬಯಸುವವರು ಒಮ್ಮೆ ಸಿನಿಮಾ ನೋಡಿ ಬರಲು ಅಡ್ಡಿಯಿಲ್ಲ.

 ಜಿ. ಎಸ್‌ ಕಾರ್ತಿಕ ಸುಧನ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.